
ನವದೆಹಲಿ (ಜು. 08): ಕೇಂದ್ರ ಸರ್ಕಾರ ಅಸಮರ್ಪಕ ರೀತಿಯಲ್ಲಿ ಜಿಎಸ್ಟಿ ಜಾರಿಗೊಳಿಸಿದ್ದು, ಜನರ ಮೇಲೆ ತೆರಿಗೆಯ ಹೊರೆ ಬಿದ್ದಿದೆ ಎಂದು ಕಾಂಗ್ರೆಸ್ ಹೇಳಿದೆ. ಸರ್ಕಾರ ಜಿಎಸ್ಟಿ ಜಾರಿಗೊಳಿಸಿದ ರೀತಿಯು ಸರ್ಕಾರಕ್ಕೆ ಲಾಭದಾಯಕವಾಗಿದೆ ಆದರೆ ಜನರ ಪಾಲಿಗೆ ಕೆಟ್ಟದ್ದಾಗಿದೆ ಎಂದು ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಹೇಳಿದ್ದಾರೆ.
ಜು.1 ರಿಂದ ದೇಶಾದ್ಯಂತ ಜಾರಿಗೆ ಬಂದಿರುವ ಜಿಎಸ್ಟಿ ವ್ಯವಸ್ಥೆಯು ನ್ಯೂನತೆಗಳಿಂದ ಕೂಡಿದ್ದು, ಜಿಎಸ್ಟಿ ಹೊರತಾಗಿಯೂ ರಾಜ್ಯ ಸರ್ಕಾರಗಳು ಮುನ್ಸಿಪಲ್ ತೆರಿಗೆಯನ್ನು ವಿಧಿಸಬೇಕಾದ ಅಗತ್ಯ ಉಂಟಾಗಿದೆ ಎಂದು ಮಾಜಿ ಕೇಂದ್ರ ಸಚಿವರಾದ ಸಿಬಲ್ ಹೇಳಿದ್ದಾರೆ.
ನ್ಯೂನತೆಗಳಿಗೆ ಉದಾಹರಣೆ ನೀಡಿದ ಸಿಬಲ್, ತಮಿಳುನಾಡಿನಲ್ಲಿ ರೂ. 100ಕ್ಕಿಂತ ಕಡಿಮೆ ದರವಿರುವ ಸಿನೆಮಾ ಟಿಕೆಟ್ ಮೇಲೆ ಶೇ. 18, ಹಾಗೂ ರೂ. 100ಕ್ಕಿಂತ ಮೇಲ್ಪಟ್ಟ ಟಿಕೆಟ್ ಮೇಲೆ ಶೇ. 28 ಜಿಎಸ್ಟಿ ವಿಧಿಸಲಾಗುತ್ತದೆ. ಜೊತೆಗೆ ಸಿನೆಮಾ ಟಿಕೆಟ್’ಗಳ ಮೇಲೆ ಇತರ ಶೇ. 30 ತೆರಿಗೆಯನ್ನು ವಿಧಿಸಲಾಗುತ್ತಿದೆ. ಜನಸಾಮಾನ್ಯರು ಸಿನೆಮಾ ಟಿಕೆಟ್ ಮೇಲೆ ಶೇ 48 ಅಥವಾ ಶೇ. 58 ತೆರಿಗೆ ಪಾವತಿಸಬೇಕಾಗುತ್ತಿದೆ, ಎಂದು ವಿವರಿಸಿದರು.
ಭಾರತದಲ್ಲಿ ಸಿನೆಮಾವು ಜನಸಾಮಾನ್ಯರಿಗೆ ಮನರಂಜನೆಯ ಪ್ರಮುಖ ಮಾಧ್ಯಮವಾಗಿದ್ದು, ಈ ರೀತಿ ತೆರಿಗೆ ವಿಧಿಸುವುದು ಸರಿಯಲ್ಲವೆಂದು ಅವರು ಹೇಳಿದ್ದಾರೆ.
ಅದೇ ರೀತಿ ಮಹಾರಾಷ್ಟ್ರ ಸರ್ಕಾರವು ಕೂಡಾ ತಮ್ಮ ನಷ್ಟವನ್ನು ಭರಿಸಲು ಶೇ. 2ರಷ್ಟು ರಸ್ತೆ ತೆರಿಗೆ ವಿಧಿಸಲು ಮುಂದಾಗಿದೆ, ಎಂದು ಸಿಬಲ್ ವಿವರಿಸಿದ್ದಾರೆ.
ಪ್ಯಾಕ್ ಮಾಡಿರಲಾಗದ ಗೋಧಿ ಹಿಟ್ಟು, ಬಿಸ್ಕತ್ತುಗಳ ಮೇಲೆ ಜಿಎಸ್ಟಿ ವಿಧಿಸಲಾಗುತ್ತದೆ, ಆದರೆ ಪ್ಯಾಕ್ ಮಾಡಿದ ಬಳಿಕ ಅವುಗಳಿಗೆ ಜಿಎಸ್ಟಿ ಅನ್ವಯವಾಗುತ್ತದ, ಎಂದು ಹೇಳಿದ ಅವರು, ಇಂದಿನ ದಿನಗಳಲ್ಲಿ ಪ್ಯಾಕ್ ಆಗಿರದ ವಸ್ತುಗಳನ್ನು ಯಾರು ಖರೀದಿಸುತ್ತಾರೆ. ತಿನ್ನುವ ವಸ್ತುಗಳು ಪ್ಯಾಕ್ ಆಗಿದ್ದರೆ ಉತ್ತಮವಲ್ಲವೇ ಎಂದು ಸಿಬಲ್ ಪ್ರಶ್ನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.