ಉದ್ವಿಗ್ನ ಪರಿಸ್ಥಿತಿ:ಚೀನೀ ನಾಗರಿಕರಿಗೆ 'ಸುರಕ್ಷತಾ ಸಲಹೆ'

Published : Jul 08, 2017, 05:04 PM ISTUpdated : Apr 11, 2018, 12:55 PM IST
ಉದ್ವಿಗ್ನ ಪರಿಸ್ಥಿತಿ:ಚೀನೀ ನಾಗರಿಕರಿಗೆ 'ಸುರಕ್ಷತಾ ಸಲಹೆ'

ಸಾರಾಂಶ

ನವದೆಹಲಿಯಲ್ಲಿರುವ ಚೀನೀ ದೂತಾವಾಸ ಕಚೇರಿಯ ಮೂಲಕ ಸಲಹೆಗಳನ್ನು ಬಿಡುಗಡೆ ಮಾಡಿದ್ದು, ಭಾರತ ಪ್ರವಾಸ ಕೈಗೊಳ್ಳುವ ತಮ್ಮ ದೇಶದ ಪ್ರವಾಸಿಗರು ತಮ್ಮ ಸುರಕ್ಷತೆ ಬಗ್ಗೆ ಗರಿಷ್ಠ ಕಾಳಜಿ ಹಾಗೂ ಸುತ್ತಮುತ್ತಲಿನ ಪರಿಸ್ಥಿತಿಗಳನ್ನು ಅರಿತುಕೊಂಡು ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ.

ನವದೆಹಲಿ(ಜು.08): ಭಾರತ-ಚೀನಾ ಗಡಿ ಉದ್ವಿಗ್ನತೆ ಸ್ಥಿ ನಿರ್ಮಾಣವಾಗಿರುವ ಹಿನ್ನಲೆಯಲ್ಲಿ ಭಾರತದ ಪ್ರವಾಸ ಕೈಗೊಳ್ಳುವ ತನ್ನ ಪ್ರಜೆಗಳಿಗೆ ಚೀನಾ ಸರ್ಕಾರ 'ಸುರಕ್ಷತಾ ಸಲಹೆ'ಗಳನ್ನು ನೀಡಿದೆ.

ನವದೆಹಲಿಯಲ್ಲಿರುವ ಚೀನೀ ದೂತಾವಾಸ ಕಚೇರಿಯ ಮೂಲಕ ಸಲಹೆಗಳನ್ನು ಬಿಡುಗಡೆ ಮಾಡಿದ್ದು, ಭಾರತ ಪ್ರವಾಸ ಕೈಗೊಳ್ಳುವ ತಮ್ಮ ದೇಶದ ಪ್ರವಾಸಿಗರು ತಮ್ಮ ಸುರಕ್ಷತೆ ಬಗ್ಗೆ ಗರಿಷ್ಠ ಕಾಳಜಿ ಹಾಗೂ ಸುತ್ತಮುತ್ತಲಿನ ಪರಿಸ್ಥಿತಿಗಳನ್ನು ಅರಿತುಕೊಂಡು ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ.

ಅಲ್ಲದೆ ಇದೊಂದು ಸಲಹೆ ಮಾತ್ರವಾಗಿದ್ದು, ಎಚ್ಚರಿಕೆ'ಯಲ್ಲ. ತಮ್ಮ ದೇಶದ ಪ್ರವಾಸಿಗರು ಜಾಗರೂಕರಾಗಿರಲಿ ಎಂಬ ಸಲಹೆಯಷ್ಟೆ  ಎಂದು ಬೀಜಿಂಗ್‌ನಲ್ಲಿನ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ. ಡೋಕ್ಲಾಂ ಗಡಿ ಬಿಕ್ಕಟ್ಟಿನ ಪರಿಸ್ಥಿತಿ ಹಿನ್ನೆಲೆಯಲ್ಲಿ, ಇಂತಹದೊಂದು ಸೂಚನೆ ನೀಡುವುದಾಗಿ ಜುಲೈ 5ರಂದು ಚೀನಾ ಸರ್ಕಾರ ಸ್ಪಷ್ಟಪಡಿಸಿತ್ತು.

ಭಾರತದಲ್ಲಿ ಚೀನಾದ ಬಗ್ಗೆ ಹೆಚ್ಚು ವಿರೋಧ ಭಾವನೆ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಚೀನಿ ಕಂಪನಿಗಳು ತಮ್ಮ ಬಂಡವಾಳ ಹೂಡಿಕೆ ಕಡಿಮೆ ಮಾಡುವಂತೆ ಸಲಹೆಯನ್ನ ಸಹ ನೀಡಿತ್ತು. ಸಿಕ್ಕಿಂ'ನ ದೋಕಾ ಲಾ ಸಾರ್ವತ್ರಿಕ ಪ್ರದೇಶದಲ್ಲಿ ಜೂನ್ 26ರಂದು ಚೀನಾದ ಸೇನಾ ಪಡೆ ಭಾರತದ ಬಂಕರ್'ಗಳನ್ನು ನಾಶ ಪಡಿಸಿದ ನಂತರ ಎರಡೂ ದೇಶಗಳ ನಡುವೆ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಫೇಸ್‌ಬುಕ್‌ ಗೆಳತಿಗಾಗಿ ಮಡಿಕೇರಿಗೆ ಬಂದು ನರಕ ನೋಡಿದ ಮಂಡ್ಯದ ಹೈದ! ಬೆತ್ತಲೆಯಾಗಿ ಓಡೋಡಿ ಬಂದ!
ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಲಲಿತಮ್ಮ