
ವಾಷಿಂಗ್ಟನ್ : ಕೇಂದ್ರ ಸರ್ಕಾರ ಜಾರಿಗೆ ತಂದ ಅಪನಗದೀಕರಣ ಹಾಗೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ನಿರ್ಧಾರಗಳಿಂದಾಗಿ ಕಳೆದ ವರ್ಷ ದೇಶದ ಆರ್ಥಿಕ ಪ್ರಗತಿಗೆ ಅಡ್ಡಿ ಉಂಟಾಯಿತು ಎಂದು ರಿಸರ್ವ್ ಬ್ಯಾಂಕ್ನ ಮಾಜಿ ಗವರ್ನರ್ ರಘುರಾಂ ರಾಜನ್ ವಿಶ್ಲೇಷಿಸಿದ್ದಾರೆ.
2012ರಿಂದ 2016ರವರೆಗೆ ಭಾರತ ಶರವೇಗದ ಪ್ರಗತಿ ಕಾಣುತ್ತಿತ್ತು. ಜತೆಗೆ ವಿಶ್ವದ ಆರ್ಥಿಕತೆ ದಾಪುಗಾಲು ಇಡುತ್ತಿತ್ತು. ಅಂತಹ ಸಂದರ್ಭದಲ್ಲಿ ಕೈಗೊಂಡ ಈ ಎರಡು ನಿರ್ಧಾರಗಳಿಂದಾಗಿ ಭಾರತದ ಪ್ರಗತಿ ಕುಸಿಯಿತು ಎಂದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಅವರು ಭಾಷಣ ಮಾಡಿದರು.
ದೇಶ ಸದ್ಯ ಶೇ.7ರಷ್ಟುಪ್ರಗತಿ ದರ ಹೊಂದಿದೆ. ಆದರೆ ರಾಷ್ಟ್ರದ ಅವಶ್ಯಕತೆಗಳ ಈಡೇರಿಕೆಗೆ ಈ ದರ ಸಾಕಾಗುವುದಿಲ್ಲ. ಜನರು ಉದ್ಯೋಗ ಮಾರುಕಟ್ಟೆಗೆ ಬರುತ್ತಿದ್ದಾರೆ. ಅವರಿಗೆ ಉದ್ಯೋಗ ಕೊಡಬೇಕಿದೆ. ಹೀಗಾಗಿ ನಮಗೆ ಮತ್ತಷ್ಟುಪ್ರಗತಿ ದರ ಬೇಕು. ಇಷ್ಟುದರದಿಂದ ತೃಪ್ತಿ ಪಡಲು ಸಾಧ್ಯವಿಲ್ಲ ಎಂದು ಸಲಹೆ ಮಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ