ಜಮೀರ್ ಭವಿಷ್ಯದ ಮುಸ್ಲಿಂ ನಾಯಕ

Published : Oct 05, 2017, 09:48 PM ISTUpdated : Apr 11, 2018, 12:40 PM IST
ಜಮೀರ್ ಭವಿಷ್ಯದ ಮುಸ್ಲಿಂ ನಾಯಕ

ಸಾರಾಂಶ

ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರು ಸ್ವಕ್ಷೇತ್ರ ಕೊರಟಗೆರೆಯಿಂದಲೇ ಮುಂದಿನ ವಿಧಾನಸಭಾ ಚುನಾವಣೆ ಎದುರಿಸಲು ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೊರಟಗೆರೆ(ಅ.05): ಜಮೀರ್ ಅಹ್ಮದ್  ಭವಿಷ್ಯದ ಮುಸ್ಲಿಂ ನಾಯಕ. ಮುಸ್ಲಿಮರ ಕಷ್ಟಗಳಿಗೆ ಸ್ಪಂದಿಸುವ ಏಕೈಕ ನಾಯಕ ಎಂದು ಕೆ.ಪಿ.ಸಿ.ಸಿ ಅಧ್ಯಕ್ಷ ಜಿ.ಪರಮೇಶ್ವರ್ ಹಾಡಿ ಹೊಗಳಿದರು.

ಕೊರಟಗೆರೆ ಅಕ್ಕಿರಾಂಪುರದಲ್ಲಿ ನಡೆದ ಉರುಸ್ ಕಾರ್ಯಕ್ರಮದಲ್ಲಿ ಮಾತನಾಡಿ ಜಮೀರ್​ರನ್ನು  ಕಾಂಗ್ರೆಸ್ ಗೆ ತರಲು ನಾನು ಬಹಳ ಕಷ್ಟಪಟ್ಟಿದ್ದೆ.  ಹತ್ತು ವರ್ಷದ ಹಿಂದೆಯೇ ನಾನು ಪ್ರಯತ್ನಿಸಿದ್ದೆ. ಸ್ವತಃ ರಾಹುಲ್ ಗಾಂಧಿಯವರೇ ಜಮೀರ್ ಅಹ್ಮದ್ ಅವರನ್ನ ಸ್ವಾಗತ ಮಾಡಿದ್ದಾರೆ. ಅಷ್ಟರ ಮಟ್ಟಿಗೆ ಜಮೀರ್ ಅಹ್ಮದ್ ಬೆಳೆದಿದ್ದಾರೆ ಅಂತಾ ಪರಮೇಶ್ವರ್ ಹೇಳಿದರು.

ಕೊರಟಗೆರೆಯಿಂದಲೇ ಸ್ಪರ್ಧೆ

ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರು ಸ್ವಕ್ಷೇತ್ರ ಕೊರಟಗೆರೆಯಿಂದಲೇ ಮುಂದಿನ ವಿಧಾನಸಭಾ ಚುನಾವಣೆ ಎದುರಿಸಲು ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೊರಟಗೆರೆಯಿಂದ ಸ್ಪರ್ಧಿಸಬೇಕೋ ಅಥವಾ ಬೆಂಗಳೂರಿನ ಪುಲಕೇಶಿ ನಗರವನ್ನು ಆಯ್ಕೆ ಮಾಡಿಕೊಳ್ಳಬೇಕೋ ಎಂಬ ಗೊಂದಲದಲ್ಲಿದ್ದರು. ಆದರೆ, ಪುಲಕೇಶಿನಗರ ಹೊಸ ಕ್ಷೇತ್ರವಾದ ಕಾರಣ ಅಲ್ಲಿ ಹೊಸದಾಗಿ ಸಂಘಟನೆ ಕಷ್ಟವಾದೀತು ಎಂಬ ಕಾರಣಕ್ಕೆ ಕೊರಟಗೆರೆಯಿಂದಲೇ ಸ್ಪರ್ಧಿಸುವ ತೀರ್ಮಾನವನ್ನು ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.

ಪ್ರಸ್ತುತ ವಿಧಾನಪರಿಷತ್ ಸದಸ್ಯರಾಗಿರುವ ಪರಮೇಶ್ವರ್ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಗೊಂದಲದಲ್ಲಿದ್ದರು. ಕೆಪಿಸಿಸಿ ಅಧ್ಯಕ್ಷ ಗಾದಿಯಲ್ಲಿ ಮುಂದುವರೆದ ಕಾರಣ ಚುನಾವಣೆ ಹೊಣೆ ಹೊತ್ತು ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪಕ್ಷವನ್ನು ಗೆಲ್ಲಿಸುವ ಕಾರ್ಯದಲ್ಲಿ ನಿರತರಾಗಬೇಕಾಗುತ್ತದೆ. ಹೀಗಾಗಿ ತಾನೇ ಚುನಾವಣೆಗೆ ನಿಂತರೆ ಕ್ಷೇತ್ರಕ್ಕೆ ಸಮಯ ಕೊಡಲು ಸಾಧ್ಯವಾಗದೆ ಇರಬಹುದು ಎಂಬ ಅಳುಕು ಇತ್ತು. ಆದರೆ, ಯಾವಾಗ ಚುನಾವಣೆಗೆ ಸಿದ್ದರಾಮಯ್ಯ ಅವರ ನೇತೃತ್ವ ಎಂದು ಹೈಕಮಾಂಡ್ ನಿರ್ಧಾರ ಮಾಡಿತೋ ಆಗ ತಮ್ಮ ಭವಿಷ್ಯದ ಹಿತದೃಷ್ಟಿಯಿಂದ ಚುನಾವಣೆಯಲ್ಲಿ ಸ್ಪರ್ಧಿಸುವುದು ಉತ್ತಮ ಎಂದು ಅವರ ಆಪ್ತರು ಸಲಹೆ ನೀಡಿದ್ದರು.

ಈ ಸಲಹೆ ಆಧರಿಸಿ ಪರಮೇಶ್ವರ್ ಸ್ಪರ್ಧಿಸುವ ತೀರ್ಮಾನ ಕೈಗೊಂಡರು ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಲಬುರಗಿ ಉದ್ಯಮಿ ಮನೆಮುಂದೆ ಬೆಂಕಿ ಹಚ್ಚಿಕೊಂಡು ಪ್ರಾಣಬಿಟ್ಟ ಬಿಜೆಪಿ ಕಾರ್ಯಕರ್ತೆ ಜ್ಯೋತಿ ಪಾಟೀಲ್!
ಚಿಕ್ಕೋಡಿ ಶಿಕ್ಷಕಿಯ ಕಣ್ಣೀರು: ಎಸ್‌ಡಿಎಂಸಿ ಅಕ್ರಮ ತಡೆದಿದ್ದಕ್ಕೆ ಅಮಾನತು ಶಿಕ್ಷೆ? ನ್ಯಾಯಕ್ಕಾಗಿ ಕಣ್ಣೀರಿಟ್ಟ ಟೀಚರ್!