ಬ್ಯಾಂಕ್’ಗಳಲ್ಲಿ ವಂಚಕರ ಕೈಕಟ್ಟಿಹಾಕಲು ಸರಕಾರದಿಂದ ಇಂಕ್ ಅಸ್ತ್ರ?

Published : Nov 15, 2016, 08:03 AM ISTUpdated : Apr 11, 2018, 12:44 PM IST
ಬ್ಯಾಂಕ್’ಗಳಲ್ಲಿ ವಂಚಕರ ಕೈಕಟ್ಟಿಹಾಕಲು ಸರಕಾರದಿಂದ ಇಂಕ್ ಅಸ್ತ್ರ?

ಸಾರಾಂಶ

ಇಂದು ಸುದ್ದಿಗೋಷ್ಠಿಯಲ್ಲಿ ಕೇಂದ್ರ ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಶಕ್ತಿಕಾಂತ ದಾಸ್ ಈ ವಿಷಯವನ್ನು ತಿಳಿಸಿದ್ದಾರೆ. ದೇಶದಲ್ಲಿ ಸಾಕಷ್ಟು ನಗದು ಸಂಗ್ರಹವಿದೆ. ಆತಂಕಕ್ಕೊಳಗಾಗಬೇಕಾದ ಸನ್ನಿವೇಶ ಸೃಷ್ಟಿಯಾಗಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.

ನವದೆಹಲಿ(ನ. 15): ಕಾಳಧನಿಕರು ತಮ್ಮ ಬಳಿ ಇರುವ ಹಣವನ್ನು ಹೇಗಾದರು ಬಿಳಿ ಮಾಡಲು ನಿರಂತರ ಪ್ರಯತ್ನದಲ್ಲಿದ್ದಾರೆ. ಬ್ಯಾಂಕ್’ಗಳಲ್ಲಿ ಒಬ್ಬನೇ ವ್ಯಕ್ತಿ ವಿವಿಧ ದಾಖಲೆಗಳನ್ನು ನೀಡಿ ನೋಟು ಬದಲಾವಣೆ ಮಾಡುತ್ತಿರುವ ಪ್ರಕರಣಗಳ ಸಂಖ್ಯೆ ದೇಶಾದ್ಯಂತ ವರದಿಯಾಗುತ್ತಿವೆ. ಈ ಅಕ್ರಮ ವಹಿವಾಟನ್ನು ತಡೆಗಟ್ಟಲು ಕೇಂದ್ರ ಸರಕಾರ ಹಲವು ಪ್ರತಿತಂತ್ರಗಳನ್ನು ರೂಪಿಸಿದೆ. ಚುನಾವಣೆ ವೇಳೆ ಮತದಾರನ ಕೈಗೆ ಇಂಕು ಹಾಕುವಂತೆ ಬ್ಯಾಂಕ್’ಗಳಿಗೆ ನೋಟು ಬದಲಾವಣೆಗೆ ಬರುವ ಗ್ರಾಹಕರ ಕೈಗೂ ಶಾಹಿ ಹಾಕುವ ಕ್ರಮವೂ ಇದರಲ್ಲಿ ಒಳಗೊಂಡಿದೆ.

ಇಂದು ಸುದ್ದಿಗೋಷ್ಠಿಯಲ್ಲಿ ಕೇಂದ್ರ ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಶಕ್ತಿಕಾಂತ ದಾಸ್ ಈ ವಿಷಯವನ್ನು ತಿಳಿಸಿದ್ದಾರೆ. ದೇಶದಲ್ಲಿ ಸಾಕಷ್ಟು ನಗದು ಸಂಗ್ರಹವಿದೆ. ಆತಂಕಕ್ಕೊಳಗಾಗಬೇಕಾದ ಸನ್ನಿವೇಶ ಸೃಷ್ಟಿಯಾಗಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.

ನಕಲಿ ನೋಟುಗಳ ಹಾವಳಿ ತಪ್ಪಿಸಲು ಸೂಕ್ಷ್ಮವೆನಿಸಿದ ಕೆಲ ಪ್ರದೇಶಗಲ್ಲಿ ವಿಶೇಷ ಕಾರ್ಯಪಡೆಗಳನ್ನು ರಚಿಸಿ ನಿಯೋಜಿಸುತ್ತಿರುವುದಾಗಿ ದಾಸ್ ತಿಳಿಸಿದ್ದಾರೆ. ಅಲ್ಲದೇ, ಮಠ, ಮಂದಿರಗಳು ತಮ್ಮಲ್ಲಿ ಭಕ್ತರು ಇರಿಸುವ 500 ರೂ.ಗಿಂತ ಕಡಿಮೆ ಮುಖಬೆಲೆಯ ನೋಟುಗಳನ್ನು ಬ್ಯಾಂಕ್’ಗಳಿಗೆ ಹಾಕಬೇಕೆಂದು ಸರಕಾರ ಮನವಿ ಮಾಡಿಕೊಂಡಿದೆ. ಇದರಿಂದ ಆ ನೋಟುಗಳು ಮಾರುಕಟ್ಟೆಯಲ್ಲಿ ಚಲಾವನೆಯಾಗಿ ಜನಸಾಮಾನ್ಯರ ಚಿಲ್ಲರೆ ಸಮಸ್ಯೆಗಳಿಗೆ ನೆರವಾಗಬಹುದು ಎಂದು ಶಕ್ತಿಕಾಂತ್ ದಾಸ್ ಕರೆಕೊಟ್ಟಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೋಲಾರ: ಅಪ್ಪ- ಅಮ್ಮನ ವಿಚ್ಚೇಧನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!
ಟೊಯೋಟಾ ಹೈಡ್ರೋಜನ್ ಕಾರು ಮೂಲಕ ಸಂಸತ್‌ಗೆ ಬಂದ ಪ್ರಹ್ಲಾದ್ ಜೋಶಿ, ಇದರ ಲಾಭವೇನು?