ಕುಡುಕ ವರನ ತಿರಸ್ಕರಿಸಿದ ವಧುವಿಗೆ ಸರ್ಕಾರದ ಸನ್ಮಾನ

Published : Jun 29, 2019, 03:02 PM IST
ಕುಡುಕ ವರನ ತಿರಸ್ಕರಿಸಿದ ವಧುವಿಗೆ ಸರ್ಕಾರದ ಸನ್ಮಾನ

ಸಾರಾಂಶ

ಮತ್ತಿನಲ್ಲಿ ಮದುವೆ ಮಂಟಪಕ್ಕೆ ಬಂದ ವರನನ್ನು ಮದುವೆ ಆಗಲು ಒಡಿಶಾದ ಸಂಬಲ್‌ಪುರ ಜಿಲ್ಲೆಯ ಬುಡಕಟ್ಟು ಮಹಿಳೆಯೊಬ್ಬಳು ನಿರಾಕರಿದ್ದಕ್ಕೆ ಆಕೆಗೆ ಸನ್ಮಾನ ಮಾಡಲಾಗಿದೆ.

ಒಡಿಶಾ [ಜೂ.29] :  ಕುಡಿದವರು ರಸ್ತೆಯಲ್ಲಿ ತೂರಾಡುವುದು, ಗಟಾರದಲ್ಲಿ ಬೀಳುವುದು ಮಾಮೂಲಿ. ಆದರೆ, ಮದುವೆ ಮಂಟಪಕ್ಕೂ ಕುಡಿದು ತೂರಾಡಿಕೊಂಡು ಬಂದರೆ ಯಾರು ತಾನೆ ಸುಮ್ಮನಿರುತ್ತಾರೆ. 

ಹೀಗೆ ಕುಡಿದ ಮತ್ತಿನಲ್ಲಿ ಮದುವೆ ಮಂಟಪಕ್ಕೆ ಬಂದ ವರನನ್ನು ಮದುವೆ ಆಗಲು ಒಡಿಶಾದ ಸಂಬಲ್‌ಪುರ ಜಿಲ್ಲೆಯ ಬುಡಕಟ್ಟು ಮಹಿಳೆಯೊಬ್ಬಳು ನಿರಾಕರಿದ್ದಾಳೆ. 

ಗೋವರ್ಧನ್ ಬದ್ಮಲ್ ಗ್ರಾಮದ ಮಮತಾ ಭೋಯಿ ಎಂಬಾಕೆಗೆ ಮೇನಲ್ಲಿ ಮದುವೆ ನಿಶ್ಚಯವಾಗಿತ್ತು. ಆದರೆ, ವರ ಕುಡಿದುಕೊಂಡು ಮಂಟಪಕ್ಕೆ ಬಂದಿದ್ದ. ಕುಟುಂಬ ಸದಸ್ಯರ ಒತ್ತಾಯಕ್ಕೂ ಮಣಿಯದೇ ಮದುವೆ ಆಗಲು ಆಕೆ ಒಪ್ಪದೇ ಇದ್ದಿದ್ದರಿಂದ ಮದುವೆ ಮುರಿದುಬಿದ್ದಿತ್ತು. ಇಂಥ ಧೈರ್ಯ ತೋರಿದ ಆಕೆಯನ್ನು ಸನ್ಮಾನಿಸಲಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೇವಲ 2 ನಿಮಿಷ ಮಗಳ ನೋಡಲು 11ಗಂಟೆಗೆ ಸ್ಟೇಶನ್‌ಗೆ ಬಂದ ತಂದೆ, ಭಾವುಕ ಕ್ಷಣದ ವಿಡಿಯೋ
ಬೀದಿಯಲ್ಲಿ ಬಿದ್ದಿದ್ದ ಕಲ್ಲಿಂದ ಹಣ ಮಾಡೋದು ಹೇಗೆ ಎಂದು ತೋರಿಸಿಕೊಟ್ಟ ಹುಡುಗ: ವೀಡಿಯೋ ಭಾರಿ ವೈರಲ್