
ನವದೆಹಲಿ[ಜೂ.19]: 2017ರಲ್ಲಿ 7ನೇ ವೇತನ ಆಯೋಗ ಅನುಷ್ಠಾನದ ಬಳಿಕ ಶಾಂತಿಯುತ ಪ್ರದೇಶಗಳಲ್ಲಿ ತಡೆಹಿಡಿಯಲಾಗಿದ್ದ ಸೇನಾಧಿಕಾರಿಗಳ ಪಡಿತರ ಆಹಾರ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಪುನಃ ಜಾರಿಗೊಳಿಸಿದೆ.
ಸೇನಾಧಿಕಾರಿಗಳ ಪಡಿತರ ಆಹಾರವನ್ನು ಪುನಃ ಜಾರಿಗೊಳಿಸುವ ವಿಚಾರದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ವೈಯಕ್ತಿಕವಾಗಿ ಮಧ್ಯಸ್ಥಿಕೆ ವಹಿಸಿದ್ದಾರೆ ಎನ್ನಲಾಗಿದೆ. ಶಾಂತಿಯುತ ಪ್ರದೇಶಗಳಲ್ಲಿರುವ ಭೂಸೇನೆ, ವಾಯು ಮತ್ತು ನೌಕಾಸೇನೆಯ ಎಲ್ಲ ಅಧಿ ಕಾರಿಗಳಿಗೆ ಪಡಿತರ ಆಹಾರ ನೀಡುವ ವ್ಯವಸ್ಥೆ ಮರು ಜಾರಿಗೆ ಮಾಡಲಾಗಿದೆ ಎಂದು ಮಂಗಳವಾರ ಸಚಿವ ರಾಜನಾಥ್ ಸಿಂಗ್ ಘೋಷಿಸಿದರು.
2017ರಲ್ಲಿ 7ನೇ ವೇತನ ಆಯೋಗ ಜಾರಿಯಾದ ಬಳಿಕ ಸೇನಾಧಿ ಕಾರಿಗಳ ಪಡಿತರ ಆಹಾರ ಪೂರೈಕೆಯನ್ನು ರದ್ದುಗೊಳಿಸಲಾಗಿತ್ತು. ಇದರ ಬದಲಾಗಿ ಪಡಿತರ ಹಣ ಭತ್ಯೆ ಎಂದು ಮಾಸಿಕ ೯೬
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.