
ಮುಂಬೈ(ನ. 01): ವಿಶ್ವಬ್ಯಾಂಕ್'ನ ಉದ್ಯಮಸ್ನೇಹಿ ರಾಷ್ಟ್ರಗಳ ಪಟ್ಟಿಯಲ್ಲಿ(Ease of doing business) 130ರಿಂದ 100ನೇ ಸ್ಥಾನಕ್ಕೆ ಜಂಪ್ ಮಾಡಿರುವ ಭಾರತ ಇದೀಗ ಟಾಪ್-50 ಪಟ್ಟಿಗೆ ಲಗ್ಗೆ ಹಾಕುವ ಗುರಿ ಹೊಂದಿದೆ. ಈ ನಿಟ್ಟಿನಲ್ಲಿ 200ಕ್ಕೂ ಹೆಚ್ಚು ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಲು ಕೇಂದ್ರ ಸರಕಾರ ಯೋಜಿಸಿದೆ. ಔದ್ಯಮಿಕ ನೀತಿ ಮತ್ತು ಪ್ರಸಾರ ಇಲಾಖೆಯ ಕಾರ್ಯದರ್ಶಿ ರಮೇಶ್ ಅಭಿಷೇಕ್ ನೀಡಿರುವ ಮಾಹಿತಿ ಪ್ರಕಾರ ಈಗಾಗಲೇ 122 ಸುಧಾರಣಾ ಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಈ ಕ್ರಮಗಳನ್ನು ಪರಿಗಣಿಸುವಂತೆ ವಿಶ್ವಬ್ಯಾಂಕ್'ಗೆ ಸರಕಾರ ಮನವಿ ಮಾಡಿಕೊಳ್ಳುತ್ತಿದೆ. ವಿಶ್ವಬ್ಯಾಂಕ್ ಈ ಸುಧಾರಣಾ ಕ್ರಮಗಳನ್ನು ತನ್ನ ಮಾನದಂಡಗಳ ಪಟ್ಟಿಗೆ ಸೇರಿಸಿಕೊಂಡರೆ ಭಾರತದ ರ್ಯಾಂಕಿಂಗ್ ಇನ್ನಷ್ಟು ಮೇಲೇರುವುದು ಖಚಿತವೆನ್ನಲಾಗಿದೆ. ಈಗ ನಡೆದಿರುವ 122 ಕ್ರಮಗಳ ಜೊತೆಗೆ ಇನ್ನೂ 90ಕ್ಕೂ ಹೆಚ್ಚು ಸುಧಾರಣಾ ಕ್ರಮಗಳ ಜಾರಿಗೆ ಸರಕಾರ ಯೋಜಿಸಿದೆ. ಇವೆಲ್ಲವನ್ನ ವಿಶ್ವಬ್ಯಾಂಕ್ ಪರಿಗಣಿಸಿದರೆ ಭಾರತವು ಉದ್ಯಮಸ್ನೇಹಿ ರಾಷ್ಟ್ರಗಳ ಪಟ್ಟಿಯಲ್ಲಿ ಟಾಪ್-50ಕ್ಕೇರುವ ಪ್ರಬಲ ವಿಶ್ವಾಸದಲ್ಲಿದೆ.
ಜಿಎಸ್'ಟಿ ಬಗ್ಗೆ ವಿಪಕ್ಷಗಳು ಟೀಕೆಗಳ ಸುರಿಮಳೆಗೈಯ್ಯುತ್ತಿದ್ದರೂ ವಿಶ್ವಬ್ಯಾಂಕ್ ಮಾತ್ರ ತೆರಿಗೆ ಸುಧಾರಣಾ ಕ್ರಮವನ್ನು ಶ್ಲಾಘಿಸಿದೆ. ಜಿಎಸ್'ಟಿಯ ಪರಿಣಾಮವನ್ನು ವಿಶ್ವಬ್ಯಾಂಕ್ ತನ್ನ ಮುಂದಿನ ಪಟ್ಟಿಯಲ್ಲಿ ಪರಿಗಣಿಸುವ ಸಾಧ್ಯತೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.