ರಾಜ್ಯಪಾಲರ ವಿರುದ್ಧ ಕೇಸಿಗೆ ಅವಕಾಶ ಇದೆ: ಸ್ವಾಮಿ

Published : Feb 12, 2017, 04:10 PM ISTUpdated : Apr 11, 2018, 12:45 PM IST
ರಾಜ್ಯಪಾಲರ ವಿರುದ್ಧ ಕೇಸಿಗೆ ಅವಕಾಶ ಇದೆ: ಸ್ವಾಮಿ

ಸಾರಾಂಶ

ಶಶಿಕಲಾ ಪರವಾದ ಸ್ವಾಮಿ ಹೇಳಿಕೆಯಿಂದ ತಮಿಳುನಾಡು ರಾಜ್ಯ ಬಿಜೆಪಿ ಅಂತರ ಕಾಯ್ದುಕೊಂಡಿದೆ. ಶಶಿಕಲಾ ಅವರಿಗೆ ಸಿಎಂ ಹುದ್ದೆ ನೀಡಬೇಕೆಂಬುದು ಸ್ವಾಮಿ ವಾದ.

ಚೆನ್ನೈ(ಫೆ.12): ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಯಾರಿಗೆ ಅವಕಾಶ ಕೊಡಬೇಕು ಎಂಬ ವಿಷಯದ ಕುರಿತು ಸೋಮವಾರದೊಳಗೆ ರಾಜ್ಯಪಾಲ ಸಿ.ವಿದ್ಯಾಸಾಗರ್ ರಾವ್ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಇಲ್ಲದೇ ಹೋದಲ್ಲಿ, ಸಂವಿಧಾನದ 32ನೇ ಅನುಚ್ಛೇದದ ಪ್ರಕಾರ, ಕುದುರೆ ವ್ಯಾಪಾರಕ್ಕೆ ಕುಮ್ಮಕ್ಕು ನೀಡಿದ ಆರೋಪದಡಿ ರಿಟ್ ಅರ್ಜಿ ಸಲ್ಲಿಸುವ ಅವಕಾಶ ಇರುತ್ತದೆ’ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಸುಬ್ರಮಣಿಯನ್ ಸ್ವಾಮಿ ರಾಷ್ಟ್ರೀಯ ನಾಯಕರಾಗಿದ್ದು, ಅವರ ಅಭಿಪ್ರಾಯಕ್ಕೂ ರಾಜ್ಯ ಬಿಜೆಪಿ ಘಟಕದ ನಿಲುವು ಒಂದೇ ಎಂದು ಹೇಳಲು ಸಾಧ್ಯವಿಲ್ಲ ಎಂದು ತಮಿಳುನಾಡು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ತಮಿಳಿಸಾಯಿ ಸುಂದರ್'ರಾಜನ್ ಹೇಳಿದ್ದಾರೆ.

ಆದರೆ, ಶಶಿಕಲಾ ಪರವಾದ ಸ್ವಾಮಿ ಹೇಳಿಕೆಯಿಂದ ತಮಿಳುನಾಡು ರಾಜ್ಯ ಬಿಜೆಪಿ ಅಂತರ ಕಾಯ್ದುಕೊಂಡಿದೆ. ಶಶಿಕಲಾ ಅವರಿಗೆ ಸಿಎಂ ಹುದ್ದೆ ನೀಡಬೇಕೆಂಬುದು ಸ್ವಾಮಿ ವಾದ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಟಲ್‌ಜೀ ಹಾಕಿದ ಬುನಾದಿಯ ಮೇಲೆ ನಿಂತ ವಿಕಸಿತ ಭಾರತ: ಬಿ.ವೈ.ವಿಜಯೇಂದ್ರ
ಚಿತ್ರದುರ್ಗ ಬಸ್‌ ದುರಂತ, ಕಣ್ಣು ಬಿಟ್ಟಾಗ ಸುತ್ತಲೂ ಬೆಂಕಿಯ ಜ್ವಾಲೆ! ಗಾಯಾಳು ಕಿರಣ್ ಬಿಚ್ಚಿಟ್ಟ ಭಯಾನಕ ಅನುಭವ