
ಕೊಹಿಮಾ(ಜು.11): ನಾಗಾಲ್ಯಾಂಡ್' ರಾಜಕೀಯದಲ್ಲಿ ಆಂತರಿಕ ಬಿಕ್ಕಟ್ಟು ಉಂಟಾದ ಹಿನ್ನಲೆಯಲ್ಲಿ ಹಾಲಿ ಮುಖ್ಯಮಂತ್ರಿ ಶುರ್ಹೋಲ್ಜೀ ಲೈಝೆಟ್ಸು ಅವರು ಜುಲೈ 13ರೊಳಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ರಾಜ್ಯಪಾಲ ಪಿ.ಬಿ. ಆಚಾರ್ಯ ಸೂಚನೆ ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಭಿನ್ನಮತೀಯ ನಾಯಕ ಟಿ.ಆರ್. ಝೆಲಿಯಾಂಗ್ ತಿಳಿಸಿದ್ದಾರೆ.
ಸರ್ಕಾರ ರಚಿಸಲು ತಮ್ಮ ಪರ ಆಡಳಿತ ಎನ್'ಪಿಎಫ್ ಪಕ್ಷದ 37 ಹಾಗೂ ನಾಲ್ವರು ಬಿಜೆಪಿಯವರು ಒಳಗೊಂಡು 7 ಪಕ್ಷೇತರ ಶಾಸಕರಿದ್ದಾರೆ. ಹಾಲಿ ಮುಖ್ಯಮಂತ್ರಿಗಳು ಜು.13ರೊಳಗೆ ರಾಜೀನಾಮೆ ನೀಡಬೇಕು ಒಂದು ವೇಳೆ ನೀಡದಿದ್ದರೆ ವಿಶ್ವಾಸ ಮತ ಪರೀಕ್ಷೆಗೆ ಮುಂದಾಗುತ್ತೇವೆ' ಎಂದು ಅವರು ತಿಳಿಸಿದ್ದಾರೆ.
ಝೆಲಿಯಾಂಗ್ ಬೆಂಬಲವಿರುವ ಶಾಸಕರು ಅಸ್ಸಾಂ'ನ ಕಾಜಿರಂಗಾ ಉದ್ಯಾನದ ಸಮೀಪವಿರುವ ರೆಸಾರ್ಟ್'ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಕಳೆದ 4 ತಿಂಗಳ ಹಿಂದಷ್ಟೆ ಶುರ್ಹೋಲ್ಜೀ ಲೈಝೆಟ್ಸು ಅವರು ಝೆಲಿಯಾಂಗ್ ಅವರನ್ನು ಪದಚ್ಯತಗೊಳಿಸಿ ಸಿಎಂ ಪಟ್ಟಕ್ಕೇರಿದ್ದರು. ಈಗ ಅದೇ ಪರಿಸ್ಥಿತಿ ಝೆಲಿಯಾಂಗ್ ಅವರಿಗೂ ಒದಗಿ ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.