
ಹಾವೇರಿ(ಆ. 15): ಬೆಂಗಳೂರಿನಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆಯಾಗುತ್ತಿದ್ರೆ ಇನ್ನೊಂದೆಡೆ ರಾಜ್ಯ ಸರ್ಕಾರ ಮಳೆಗಾಗಿ ದೇವರ ಮೊರೆ ಹೋಗಿದೆ. ಮುಜರಾಯಿ ಇಲಾಖೆಗೆ ಸಂಬಂಧಪಟ್ಟ ರಾಜ್ಯದ ಎಲ್ಲ ದೇವಾಲಯಗಳಲ್ಲೂ ವಿಶೇಷ ಜಲಾಭಿಷೇಕ ನಡೆಸಲು ಆದೇಶ ಹೊರಡಿಸಲಾಗ್ತಿದೆ. ಈ ಬಗ್ಗೆ ಹಾವೇರಿಯಲ್ಲಿ ಮಾತನಾಡಿದ ಜವಳಿ ಮತ್ತು ಮುಜರಾಯಿ ಖಾತೆ ಸಚಿವ ರುದ್ರಪ್ಪ ಲಮಾಣಿ, ನಸುಕಿನ ಜಾವ ಎಲ್ಲ ದೇವಾಲಯಗಳಲ್ಲೂ ಜಲಾಭಿಷೇಕ ನಡೆಸಲು ಮುಜರಾಯಿ ದೇವಾಲಯಗಳಿಗೆ ಅಧಿಕೃತ ಆದೇಶ ಹೊರಡಿಸಲಾಗುವುದು. ವಿವಿಧ ಮಠಾಧೀಶರ ಅಭಿಪ್ರಾಯದಂತೆ ಜಲಾಭಿಷೇಕ ನಡೆಸಲಾಗ್ತಿದ್ದು ನಾಳೆಯಿಂದಲೇ ಆದೇಶ ಹೊರಡಿಸಲಾಗುವುದು ಅಂತ ರುದ್ರಪ್ಪ ಲಮಾಣಿ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಇಂದು ಮಾತನಾಡಿದ ರುದ್ರಪ್ಪ ಲಮಾಣಿ, ಮನುಷ್ಯರಿಂದ ಆಗುವ ಪ್ರಯತ್ನವೆಲ್ಲಾ ಮಾಡಿದ್ದಾಯ್ತು, ಮೋಡ ಬಿತ್ತನೆ ಮಾಡಲು ಮೋಡವೇ ಇಲ್ಲ.ಇನ್ನೀಗ ದೇವರ ಮೊರೆ ಹೊಗುವುದೇ ಗತಿ ಎಂದು ತಿಳಿಸಿದ್ದಾರೆ. ಹಾನಗಲ್, ಯಲೂಜಿ ಮೊದಲಾದ ಕಡೆ ನೀರೇ ಇಲ್ಲ. ಇನ್ನೊಂದು ವಾರ ಈ ಸ್ಥಿತಿ ಹೀಗೇ ಮುಂದುವರಿದರೆ ಬರ ಪರಿಸ್ಥಿತಿ ನಿಶ್ಚಿತ ಎಂದವರು ಅಭಿಪ್ರಾಯಪಟ್ಟಿದ್ದಾರೆ. ನಾಳೆಯ ಆದೇಶದನ್ವಯ, ಮುಜರಾಯಿ ಆಡಳಿತವಿರುವ ಎಲ್ಲಾ ದೇವಸ್ಥಾನಗಳಲ್ಲಿ ಎರಡು ವಾರ ಕಾಲ ಬೆಳಗ್ಗೆ 5ಗಂಟೆಗೆಯೇ ಮಳೆಗಾಗಿ ವಿಶೇಷ ಪೂಜೆ ಮಾಡಲಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.