ಟ್ರಕ್ಕಿಂಗ್ ಪ್ರಿಯರಿಗೆ ಅರಣ್ಯ ಇಲಾಖೆಯಿಂದ ಸಿಹಿಸುದ್ದಿ

Published : Aug 18, 2017, 09:44 PM ISTUpdated : Apr 11, 2018, 01:03 PM IST
ಟ್ರಕ್ಕಿಂಗ್ ಪ್ರಿಯರಿಗೆ ಅರಣ್ಯ ಇಲಾಖೆಯಿಂದ ಸಿಹಿಸುದ್ದಿ

ಸಾರಾಂಶ

ಸಿಲಿಕಾನ್ ಸಿಟಿ ಜನರು ಹೆಚ್ಚಾಗಿ ಟ್ರಕ್ಕಿಂಗ್ ಹೋಗಲು ಬಯಸುತ್ತಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು  ಸುತ್ತಮುತ್ತ ಟ್ರಕ್ಕಿಂಗ್ ಟ್ರ್ಯಾಕ್ ಗಳನ್ನು ಗುರುತಿಸಲಾಗಿದೆ.

ಬೆಂಗಳೂರು ಸುತ್ತಮುತ್ತ ಟ್ರಕ್ಕಿಂಗ್ ಹೋಗಬೇಕು ಎನ್ನುವರಿಗೆ ಅರಣ್ಯ ಇಲಾಖೆ ಸಿಹಿ ಸುದ್ದಿ ನೀಡಿದೆ. ಹೌದು, ಸಿಲಿಕಾನ್ ಸಿಟಿ ಸುತ್ತ ಮುತ್ತ ಯಾವ್ಯಾವ ಚಾರಣಗಳಿವೆ ಎಂಬುದು ಎಷ್ಟೋ ಪ್ರವಾಸಿಗರಿಗೆ ಗೊತ್ತಿಲ್ಲ. ಇದರ ಜತೆಗೆ ಸರಿಯಾಗಿ ಮಾರ್ಗದರ್ಶಕರಿಲ್ಲದೆ ಪ್ರವಾಸಿಗರು ತೊಂದರೆ  ಅನುಭವಿಸುತ್ತಿದ್ದರು. ಈ ಎಲ್ಲ ಸಮಸ್ಯೆಗಳನ್ನು ನಿವಾರಿಸಲು ಅರಣ್ಯ ಇಲಾಖೆ ಬೆಂಗಳೂರು ಸುತ್ತ ಮುತ್ತಲಿನ  ಏಳು ಚಾರಣಗಳನ್ನು ಗುರಿತಿಸಿದ್ದಲ್ಲದೆ, 30 ಮಾರ್ಗದರ್ಶಕರನ್ನು ನೇಮಕ ಮಾಡಿದೆ.

ಇಂದು ಬೆಂಗಳೂರಿನ ಸುತ್ತಮುತ್ತಲಿನ ಪರಿಸರ ಪಥಗಳಿಗೆ ಅರಣ್ಯ ಸಚಿವ ರಮಾನಾಥ್ ರೈ ಚಾಲನೆ ನೀಡಿದರು. ಇದಕ್ಕೂ ಮೊದಲು ಕೊಡಗು ಜಿಲ್ಲೆಯಲ್ಲಿ ಎಕೋ ಟ್ರೇಲ್ಸ್  ಗೆ ಚಾಲನೆ ನೀಡಲಾಯಿತು.

ಇದಾದ ನಂತರ ಬೆಂಗಳೂರಿನಲ್ಲಿ ಎಕೋ ಟ್ರೇಲ್ಸ್ ಗಳನ್ನು ಗುರುತಿಸಲಾಗಿದೆ. ಬೆಂಗಳೂರು ಸುತ್ತ ಸ್ಕಂದಗಿರಿ, ಅವಲಬೆಟ್ಟ, ಸಾವನದುರ್ಗ, ಬಿದರಕಟ್ಟೆ, ಮಾಕಳಿದುರ್ಗ, ಸಿದ್ದರಬೆಟ್ಟ, ದೇವರಾಯನದುರ್ಗ ದಲ್ಲಿ ಚಾರಣಗಳನ್ನು ಗುರುತಿಸಲಾಗಿದೆ. ಸಿಲಿಕಾನ್ ಸಿಟಿ ಜನರು ಹೆಚ್ಚಾಗಿ ಟ್ರಕ್ಕಿಂಗ್ ಹೋಗಲು ಬಯಸುತ್ತಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು  ಸುತ್ತಮುತ್ತ ಟ್ರಕ್ಕಿಂಗ್ ಟ್ರ್ಯಾಕ್ ಗಳನ್ನು ಗುರುತಿಸಲಾಗಿದೆ. ಅರಣ್ಯ ಇಲಾಖೆಯಲ್ಲಿ ಹೆಸರು ನೊಂದಾಯಿಸುವರು myecotrip.com ಭೇಟಿ ನೀಡಿ, 450 ಹಣ ಪಾವತಿಸಿದ್ರೆ ಎಕೋ ಟ್ರೇಲ್ಸ್ ಅನುಭವ ಪಡೆಯಬಹುದು.  ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದು  ಅರಣ್ಯ ಸಚಿವ ರಮಾನಾಥ್  ರೈ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸ್ಲಿಮ್ ಆಗೋಕೆ ಹೋಗಿ ಆರೋಗ್ಯವೇ ಹೋಯ್ತು: 11691 ರೂ ಪಾವತಿಸಿ ತೂಕ ಇಳಿಕೆ ಇಂಜೆಕ್ಷನ್ ಪಡೆದಾಕೆಗೆ ಆಘಾತ
ಕೊಡಗಿನ ಇತಿಹಾಸದಲ್ಲೇ ಮೊದಲ ಬಾರಿಗೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್! ಏನಿದು ಪ್ರಕರಣ?