ಮಳೆಗೆ ಧನ್ಯವಾದ, ಈ ಬಾರಿ ತಮಿಳುನಾಡು ಕ್ಯಾತೆ ತೆಗೆಯದು!

Published : Jul 10, 2018, 05:10 PM IST
ಮಳೆಗೆ ಧನ್ಯವಾದ, ಈ ಬಾರಿ ತಮಿಳುನಾಡು ಕ್ಯಾತೆ ತೆಗೆಯದು!

ಸಾರಾಂಶ

ಮುಂಗಾರಲ್ಲಿ ಉತ್ತಮ ಮಳೆ ಸುರಿದರೆ ಒಂದಿಷ್ಟು ಸಮಸ್ಯೆಗಳಿಗೆ ತನ್ನಿಂದ ತಾನೆ ಉತ್ತರ ಸಿಕ್ಕಿ ಬಿಡುತ್ತದೆ. ವಿದ್ಯುತ್ ಸಮಸ್ಯೆ, ರಾಜ್ಯಗಳ ನಡುವಿನ ಜಲಾಶಯದ ನೀರಿಗಾಗಿ ಗೊಂದಲ ತನ್ನಿಂದ ತಾನೆ ಬಗೆಹರಿದು ರೈತರು ನೆಮ್ಮದಿ ಕಾಣಬಹುದು. ಈ ಬಾರಿಯ ಮಂಗಾರಿಗೆ ಧನ್ಯವಾದ ಹೇಳಬೇಕಿದೆ.

ಬೆಂಗಳೂರು[ಜು.10]  ಈ ಸಾರಿ ಮುಂಗಾರು ಮಳೆ ಚೆನ್ನಾಗಿ ಆಗಿರುವುದರಿಂದ ಕಾವೇರಿ ನೀರಿಗಾಗಿ ಎರಡು ರಾಜ್ಯಗಳ ನಡುವೆ ಕಿತ್ತಾಟ ತಂದು ಇಡುವ ಲಕ್ಷಣಗಳು ಕಡಿಮೆಯಾಗಿದೆ. ಎರಡು ರಾಜ್ಯದ ರೖತರು ಬಯಸುತ್ತಿರುವುದು ಇದೆ. 

ಕೇರಳದ ವೈನಾಡು ಹಾಗೂ ಮಡಿಕೇರಿಯಲ್ಲಿ ಭರ್ಜರಿ ಮಳೆಯಾಗುತ್ತಿರುವುದರಿಂದ ಜೂನ್ ತಿಂಗಳಿನಲ್ಲಿಯೇ 24 ಟಿಎಂಸಿ ನೀರು ತಮಿಳುನಾಡಿಗೆ ಹರಿಸಲಾಗಿದೆ.  ಈಗ ಜುಲೈ ತಿಂಗಳ ಬಾಕಿ 31.7 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಲಾಗುತ್ತಿದೆ.ಸದ್ಯ ಕಬಿನಿ ಜಲಾಶಯದಿಂದ ತಮಿಳುನಾಡಿಗೆ 36,000 ಕ್ಯುಸೆಕ್ ನೀರು ಹರಿದು ಹೋಗುತ್ತಿದೆ ಜತೆಗೆ  ಕೆ.ಆರ್.ಎಸ್ ಜಲಾಶಯದಿಂದ 3,400 ಕ್ಯುಸೆಕ್ ನೀರು ಹೊರಕ್ಕೆ ಬಿಡಲಾಗುತ್ತಿದೆ.

ಈಗಾಗಲೇ 113 ಅಡಿ ದಾಖಲಿಸಿರುವ ಜಲಾಶಯಕ್ಕೆ 33,000 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಇದೇ ಪ್ರಮಾಣದಲ್ಲಿ ಮಳೆಯಾದರೆ ಇನ್ನು ಆರು ದಿನದಲ್ಲಿ  ಕೆ.ಆರ್.ಎಸ್  ಭರ್ತಿಯಾಗಲಿದೆ. 49.5 ಟಿಎಂಸಿ ಒಟ್ಟು ನೀರಿನ ಸಾಮರ್ಥ್ಯದಲ್ಲಿ ಈಗ 35 ಟಿಎಂಸಿ ಲಭ್ಯವಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೈಕಮಾಂಡ್‌ ನಿರ್ಧಾರ ಫೈನಲ್, ಪದೇ ಪದೆ ಯಾಕೆ ಕೇಳ್ತೀರಿ?: ಸಿಎಂ ಸಿದ್ದರಾಮಯ್ಯ
ಮಾಜಿ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ನಿಧನ