ಶೀಘ್ರದಲ್ಲೆ ‘ಸುವರ್ಣ’ಮಯವಾಗಲಿದೆ ಹಾವೇರಿ: ಯಾಲಕ್ಕಿ ನಾಡಲ್ಲಿ ಪತ್ತೆಯಾಗಿದೆ ಚಿನ್ನದ ನಿಕ್ಷೇಪ

Published : Nov 27, 2016, 03:20 AM ISTUpdated : Apr 11, 2018, 12:47 PM IST
ಶೀಘ್ರದಲ್ಲೆ ‘ಸುವರ್ಣ’ಮಯವಾಗಲಿದೆ ಹಾವೇರಿ: ಯಾಲಕ್ಕಿ ನಾಡಲ್ಲಿ ಪತ್ತೆಯಾಗಿದೆ ಚಿನ್ನದ ನಿಕ್ಷೇಪ

ಸಾರಾಂಶ

ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದು ಕರೆಸಿ ಕೊಳ್ಳುವ ಹಾವೇರಿ, ಯಾಲಕ್ಕಿ ಕಂಪಿನ ನಾಡು ಎಂದೇ ಹೆಸರುವಾಸಿ. ಜಿಲ್ಲೆಯಲ್ಲಿ ಯಾಲಕ್ಕಿ ಬೆಳೆಯದಿದ್ದರು, ಇಲ್ಲಿ ತಯಾರಾಗುವ ಯಾಲಕ್ಕಿ ಮಾಲೆ ವಿಶ್ವದೆಲ್ಲೆಡೆ ಹೆಸರುವಾಸಿ. ಇದೇ ಕಾರಣಕ್ಕೆ ಇದನ್ನ ಯಾಲಕ್ಕಿ ನಾಡು ಎಂದು ಕರೆಯುತ್ತಾರೆ. ಈಗ ಇದೆ ಯಾಲಕ್ಕಿ ನಾಡು ಚಿನ್ನದ ನಾಡು ಎಂದು ಕರೆಸಿಕೊಳ್ಳುವ ಸಮಯ ಬಂದಿದೆ. ಹಾವೇರಿಯಿಂದ ಅನತಿ ದೂರದಲ್ಲಿರುವ ಗಣಜೂರು ಗ್ರಾಮದ ಸುತ್ತಮತ್ತ ಚಿನ್ನದ ನಿಕ್ಷೇಪ ಪತ್ತೆಯಾಗಿದೆ. ಡೆಕ್ಕನ ಮೈನಿಂಗ್ ಕಂಪನಿಯರು 2010ರಲ್ಲೆ ಇಲ್ಲಿ ಭೂಮಿಯನ್ನು ನೋಡಿದ್ದರು. ಈಗ ಸುಮಾರು 72 ಎಕರೆ ಪ್ರದೇಶದಲ್ಲಿ ಚಿನ್ನದ ನಿಕ್ಷೇಪವನ್ನು ಎಲ್ಲೆಲ್ಲಿ ಎಷ್ಟೆಷ್ಟು ಇದೆ ಎನ್ನುವುದನ್ನ ಪತ್ತೆ ಮಾಡಲಾಗುತ್ತಿದೆ. ಡೆಕ್ಕನ್ ಕಂಪನಿಯವರು ಭೂಮಿಯಲ್ಲಿ ಬೊರವೆಲ್ ಕೊರೆದು ಚಿನ್ನದ ನಿಕ್ಷೇಪ ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ.

ಹಾವೇರಿ(ನ.27): ಯಾಲಕ್ಕಿ ಕಂಪಿನ ನಾಡು ಹಾವೇರಿ, ಇನ್ನು ಮುಂದೆ ಚಿನ್ನದ ನಾಡು ಎಂದು ಕರೆಸಿಕೊಳ್ಳುವ ಕಾಲ ಹತ್ತಿರ ಬಂದಿದೆ. ಜಿಲ್ಲೆಯಲ್ಲಿ ಚಿನ್ನದ ಗಣಿಗಾರಿಕೆ ಶೀಘ್ರದಲ್ಲೆ ಆರಂಭವಾಗುವ ಲಕ್ಷಣಗಳಿದೆ. ರೈತರ ಬೇಡಿಕೆಗಳು ಇಡೇರಿದರೆ ಹಾವೇರಿ ಇನ್ನು ಮುಂದೆ ಚಿನ್ನದ ನಾಡಾಗಲಿದೆ.

ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದು ಕರೆಸಿ ಕೊಳ್ಳುವ ಹಾವೇರಿ, ಯಾಲಕ್ಕಿ ಕಂಪಿನ ನಾಡು ಎಂದೇ ಹೆಸರುವಾಸಿ. ಜಿಲ್ಲೆಯಲ್ಲಿ ಯಾಲಕ್ಕಿ ಬೆಳೆಯದಿದ್ದರು, ಇಲ್ಲಿ ತಯಾರಾಗುವ ಯಾಲಕ್ಕಿ ಮಾಲೆ ವಿಶ್ವದೆಲ್ಲೆಡೆ ಹೆಸರುವಾಸಿ. ಇದೇ ಕಾರಣಕ್ಕೆ ಇದನ್ನ ಯಾಲಕ್ಕಿ ನಾಡು ಎಂದು ಕರೆಯುತ್ತಾರೆ. ಈಗ ಇದೆ ಯಾಲಕ್ಕಿ ನಾಡು ಚಿನ್ನದ ನಾಡು ಎಂದು ಕರೆಸಿಕೊಳ್ಳುವ ಸಮಯ ಬಂದಿದೆ.

ಹಾವೇರಿಯಿಂದ ಅನತಿ ದೂರದಲ್ಲಿರುವ ಗಣಜೂರು ಗ್ರಾಮದ ಸುತ್ತಮತ್ತ ಚಿನ್ನದ ನಿಕ್ಷೇಪ ಪತ್ತೆಯಾಗಿದೆ. ಡೆಕ್ಕನ ಮೈನಿಂಗ್ ಕಂಪನಿಯರು 2010ರಲ್ಲೆ ಇಲ್ಲಿ ಭೂಮಿಯನ್ನು ನೋಡಿದ್ದರು. ಈಗ ಸುಮಾರು 72 ಎಕರೆ ಪ್ರದೇಶದಲ್ಲಿ ಚಿನ್ನದ ನಿಕ್ಷೇಪವನ್ನು ಎಲ್ಲೆಲ್ಲಿ ಎಷ್ಟೆಷ್ಟು ಇದೆ ಎನ್ನುವುದನ್ನ ಪತ್ತೆ ಮಾಡಲಾಗುತ್ತಿದೆ. ಡೆಕ್ಕನ್ ಕಂಪನಿಯವರು ಭೂಮಿಯಲ್ಲಿ ಬೊರವೆಲ್ ಕೊರೆದು ಚಿನ್ನದ ನಿಕ್ಷೇಪ ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ.

ಗಣಜೂರು ಸುತ್ತಮುತ್ತ 200 ಎಕರೆ ಭೂಮಿ ನೀಡುವಂತೆ ಕಂಪನಿಯರು ಸರಕಾರಕ್ಕೆ ಕೇಳಿದ್ದಾರೆ. ಕೆಐಡಿಬಿಯವರು ಈ ಭೂಮಿಯನ್ನು ರೈತರಿಂದ ವಶಪಡೆದುಕೊಳ್ಳುವ ಪ್ರಕ್ರೀಯೆ ಪ್ರಾರಂಭಿಸಿದ್ದಾರೆ. ಬಹುತೇಕ ರೈತರು ಸಹ ಭೂಮಿ ನೀಡಲು ಸಿದ್ದರಿದ್ದಾರೆ. ಹಲವು ಸಲ ರೈತರೆಲ್ಲರು ಸೇರಿ ಮಾತನಾಡಿಕೊಂಡಿದ್ದು, ಒಂದು ಎಕರೆಗೆ 40 ರಿಂದ 50 ಲಕ್ಷ ಹಣ ನೀಡಿದರೆ, ಭೂಮಿ ನಿಡುವುದಾಗಿ ಹೇಳುತ್ತಿದ್ದಾರೆ.

ಎಲ್ಲವು ಅಂದುಕೊಂಡಂತೆ ಆದರೆ, ಹಾವೇರಿ ಮುಂದಿನ ದಿನಗಳಲ್ಲಿ ಚಿನ್ನದ ನಾಡು ಎಂದು ಕರೆಸಿಕೊಳ್ಳಲಿದೆ. ಇದಕ್ಕೆ ರೈತರ ಜತೆಗೆ ಭೂಮಿ ವಿಷಯವಾಗಿ ನಡೆಯುವ ಮಾತುಕತೆ ಅಂತಿಮವಾಗಿದ್ದು, ಸರಕಾರ ನೀಡುವ ಬೆಲೆಗೆ ರೈತರು ಭೂಮಿ ನೀಡುತ್ತಾರಾ ಎನ್ನುವುದನ್ನ ಈಗ ಕಾದು ನೋಡಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಾಕ್ಸಿಕ್ ಸಿನಿಮಾ ರಿಲೀಸ್ ಸಮೀಪಿಸುತ್ತಿದ್ದಂತೆ ಐಟಿ ಪ್ರಕರಣದಲ್ಲಿ ನಟ ಯಶ್‌ಗೆ ಹೈಕೋರ್ಟ್ ರಿಲೀಫ್
ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಪೊಲೀಸ್ ಸಿಬ್ಬಂದಿಗೆ ಡಿಜಿ ಐಜಿಪಿ ಡಾ ಸಲೀಂ ಖಡಕ್ ಎಚ್ಚರಿಕೆ