
ತಿರುವನಂತಪುರಂ(ಅ.30): ದೇವರನಾಡು ಕೇರಳದ ತಿರುವನಂತಪುರದಲ್ಲಿ ಬೀದಿ ನಾಯಿಗಳ ಭೀತಿ ಎದುರಾಗಿದೆ. ಬೀದಿ ನಾಯಿಗಳ ಹಾವಳಿಗೆ ತತ್ತರಿಸಿರುವ ಕೇರಳ ಜನತೆ ರಸ್ತೆಯಲ್ಲಿ ಸಂಚರಿಸುವಾಗ ನೆಮ್ಮದಿಯೇ ಇಲ್ಲದಂತಾಗಿದೆ. ನಾಯಿ ದಾಳಿಗೆ 700ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ.
ಸದ್ಯ ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಸಾಧ್ಯವಾಗದ ಕಾರಣ ತಿರುವನಂತಪುರದ ಪ್ರತಿಷ್ಠಿತ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಒಕ್ಕೂಟವು ನಾಯಿ ಕೊಂದವರಿಗೆ ಚಿನ್ನದ ನಾಣ್ಯ ಕೊಡುವುದಾಗಿ ಘೋಷಿಸಿದೆ. ಯಾರು ಹೆಚ್ಚು ನಾಯಿಗಳನ್ನು ಸಾಯಿಸುತ್ತಾರೊ ಅವರಿಗೆ ಹೆಚ್ಚು ನಾಣ್ಯ ನೀಡುವುದಾಗಿ ಹೇಳಿರುವ ಸಂಘ ಡಿಸೆಂಬರ್ 10ರ ವರೆಗೂ ಗಡುವು ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.