ಏಕ ಶ್ರೇಣಿ ಏಕ ಪಿಂಚಣಿ ಯೋಜನೆಗೆ ಕೇಂದ್ರದಿಂದ 5,500 ಕೋಟಿ ರೂ. ಮೊದಲ ಕಂತು ಬಿಡುಗಡೆ

Published : Oct 30, 2016, 04:27 PM ISTUpdated : Apr 11, 2018, 12:35 PM IST
ಏಕ ಶ್ರೇಣಿ ಏಕ ಪಿಂಚಣಿ ಯೋಜನೆಗೆ ಕೇಂದ್ರದಿಂದ 5,500 ಕೋಟಿ ರೂ. ಮೊದಲ ಕಂತು ಬಿಡುಗಡೆ

ಸಾರಾಂಶ

ಕಳೆದ 40 ವರ್ಷಗಳಿಂದ ನನೆಗುದಿಯಲ್ಲಿ ಬಿದ್ದಿದ್ದ ಕಾರ್ಯವನ್ನು ತಮ್ಮ ಸರಕಾರ ನೆರವೇರಿಸಿದೆ ಎಂದು ಮೋದಿ ಹೇಳಿದ್ದಾರೆ.

ಹಿಮಾಚಲಪ್ರದೇಶ: ನಿವೃತ್ತ ಯೋಧರಿಗೆ ಏಕ ಶ್ರೇಣಿ ಏಕ ಪಿಂಚಣಿ ಯೋಜನೆಯ(ಒನ್ ರ್ಯಾಂಕ್ ಒನ್ ಪೆನ್ಷನ್) ಅನುಷ್ಠಾನದ ಕ್ರಮವಾಗಿ ಮೊದಲ ಕಂತಿನಲ್ಲಿ ಕೇಂದ್ರ ಸರಕಾರ 5,500 ರೂಪಾಯಿ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಕಳೆದ 40 ವರ್ಷಗಳಿಂದ ನನೆಗುದಿಯಲ್ಲಿ ಬಿದ್ದಿದ್ದ ಕಾರ್ಯವನ್ನು ತಮ್ಮ ಸರಕಾರ ನೆರವೇರಿಸಿದೆ ಎಂದು ಮೋದಿ ಹೇಳಿದ್ದಾರೆ. ಅಲ್ಲದೇ, ನಿವೃತ್ತ ಯೋಧರಿಗೆ ಇದ್ದ ಈ ಬವಣೆಯನ್ನು ನೀಗಿಸುವ ತಮ್ಮ ಕನಸು ಈಡೇರಿದಂತಾಗಿದೆ ಎಂದು ಪ್ರಧಾನಿ ಸಂತೃಪ್ತಿ ವ್ಯಕ್ತಪಡಿಸಿದ್ದಾರೆ.

ಇಲ್ಲಿಯ ಕಿನ್ನೂರ್ ಜಿಲ್ಲೆಯ ಸುಮಡೋ ಎಂಬಲ್ಲಿ ಸೇನಾ ಯೋಧರೊಂದಿಗೆ ದೀಪಾವಳಿ ಸಂಭ್ರಮ ಹಂಚಿಕೊಂಡ ಮೋದಿ, ಯೋಧರು ಜಾಗೃತರಾಗಿದ್ದರೆ ಮಾತ್ರ ನಾಗರಿಕರು ನಿಶ್ಚಿಂತೆಯಿಂದ ನಿದ್ರಿಸಲು ಸಾಧ್ಯವಾಗುತ್ತದೆ ಎಂದು ಹೇಳಿ ಸೈನಿಕರ ಮಹತ್ವವನ್ನು ಪ್ರಶಂಸಿಸಿದ್ದಾರೆ. ಪ್ರಧಾನಿಯವರು ಈ ಬಾರಿಯ ದೀಪಾವಳಿಯ ಆಚರಣೆಯನ್ನು ಯೋಧರಿಗೆ ಸಮರ್ಪಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಿನಿಂದ ಆಯೋಧ್ಯೆ ತಲುಪಿದ ಬರೋಬ್ಬರಿ 2.5 ಕೋಟಿ ರೂ ಮೌಲ್ಯದ ಶ್ರೀರಾಮ ಕಲಾಚಿತ್ರ
ರಿಷಬ್ ಶೆಟ್ಟಿಯನ್ನೂ ಸೋಲಿಸಿದ ರಣವೀರ್ ಸಿಂಗ್.. 'ಕಾಂತಾರ-1' ಗಳಿಕೆ ಮೀರಿ ಮುಂದಕ್ಕೆ ಹೋದ ಧುರಂಧರ್!