ಪರಿಕ್ಕರ್ ಶವ ಇಟ್ಟಿದ್ದ ಸ್ಥಳ ಮಲೀನವಾಯ್ತೆ?: ತನಿಖೆಗೆ ಶುದ್ಧೀಕರಣ ಪ್ರಕರಣ!

Published : Mar 24, 2019, 04:12 PM IST
ಪರಿಕ್ಕರ್ ಶವ ಇಟ್ಟಿದ್ದ ಸ್ಥಳ ಮಲೀನವಾಯ್ತೆ?: ತನಿಖೆಗೆ ಶುದ್ಧೀಕರಣ ಪ್ರಕರಣ!

ಸಾರಾಂಶ

ಮನೋಹರ್ ಪರ್ರಿಕರ್ ಮೃತದೇಹವಿಟ್ಟಿದ್ದ ಕಲಾ ಅಕಾಡೆಮಿ ಶುದ್ಧೀಕರಣ| ಸರ್ಕಾರದಿಂದ ತನಿಖೆಗೆ ಆದೇಶ

ಪಣಜಿ[ಮಾ.24]: ಗೋವಾದಲ್ಲಿ ದಂಗು ಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಗೋವಾದ ಮಾಜಿ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಮಾರ್ಚ್ 17 ರಂದು ಕೊನೆಯುಸಿರೆಳೆದಿದ್ದರು. ಮಾಜಿ ರಕ್ಷಣಾ ಸಚಿವರ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಪಣಜಿಯಲ್ಲಿರುವ ರಾಜಕೀಯ ಕಲಾ ಅಕಾಡೆಮಿಯಲ್ಲಿ ಇರಿಸಲಾಗಿತ್ತು. ಆದರೀಗ ಅಂತಿಮ ಕ್ರಿಯೆ ನಡೆದ ಬೆನ್ನಲ್ಲೇ ಪಾರ್ಥೀವ ಶರೀರವಿರಿಸಿದ್ದ ಸ್ಥಳವನ್ನು ಶುದ್ಧೀಕರಣ ಮಾಡಲಾದ ವಿಚಾರ ಭಾರೀ ವಿವಾದ ಹುಟ್ಟು ಹಾಕಿದೆ.

ರಾಜಕೀಯ ಕಲಾ ಅಕಾಡೆಮಿಯಲ್ಲಿ ಮಾಜಿ ಸಿಎಂ ಮನೋಹರ್ ಪರ್ರಿಕರ್ ಪಾರ್ಥೀವ ಶರೀರವನ್ನಿರಿಸಿರುವ ಸ್ಥಳವನ್ನು ಶುದ್ದೀಖರಿಸಲಾಗಿದೆ ಎಮದು ಶನಿವಾರದಂದು ಗೋವಾದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಭಾರೀ ಆಕ್ರೊಶ ವ್ಯಕ್ತವಾಗಿದೆ. ಹೀಗಾಗಿ ಸರ್ಕಾರ ಈ ಪ್ರಕರಣದ ಕುರಿತು ತನಿಖೆ ನಡೆಸುವಂತೆ ಆದೇಶಿಸಿದೆ.

ಗೋವಾದ ಕಲಾ ಹಾಗೂ ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಗಾವ್ಡೆ ಈ ಕುರಿತಾಗಿ ಪ್ರತಿಕ್ರಿಯಿಸುತ್ತಾ 'ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಯನ್ವ ಅಕಾಡೆಮಿ ಪರಿಸರದಲ್ಲಿ ಮನೋಹರ್ ಪರ್ರಿಕರ್ ರವರ ಮೃತದೇಹವನ್ನಿರಿಸಿದ್ದ ಸ್ಥಳವನ್ನು ಕೆಲ ಅಪರಿಚಿತ ವ್ಯಕ್ತಿಗಳು ಶುದ್ಧೀಕರಿಸಿದ್ದಾರೆಂದು ತಿಲಿದು ಬಂದಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಸರ್ಕಾರಿ ಕಟ್ಟಡಗಳಲ್ಲಿ ಅವೈಜ್ಞಾನಿಕ ವಿಧಿ ವಿಧಾನಗಳ ಅನುಕರಣೆಯನ್ನು ಖಂಡಿಸುತ್ತೇನೆ. ಈ ಕುರಿತಾಗಿ ತನಿಖೆಗೆ ಆದೇಶಿಸಿದ್ದೇನೆ' ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌