ಕಣಕುಂಬಿಗೆ ಭೇಟಿ ನೀಡಿದ್ದ ನಿಯೋಗದಲ್ಲಿದ್ದ ಅಲ್ಲಿನ ವಿಧಾನಸಭಾ ಉಪಾಧ್ಯಕ್ಷ ಮೈಕೆಲ್ ಲೋಬೋ ತಗಾದೆ ತೆಗೆದಿದ್ದಾರೆ.
ಪಣಜಿ: ಭೂಗತ ಕಾಲುವೆಗಳನ್ನು ನಿರ್ಮಿಸುವ ಮೂಲಕ ಮಹದಾಯಿ ನೀರನ್ನು ಕರ್ನಾಟಕ ಈಗಾಗಲೇ ಪಡೆಯುತ್ತಿದೆ. ಗೋವಾಕ್ಕೆ ಕೇವಲ ಬಸಿ ನೀರು ಮಾತ್ರ ಗೋವಾಕ್ಕೆ ಹರಿಯುತ್ತಿದೆ.
ಇದನ್ನು ತಡೆಯದಿದ್ದರೆ ಗೋವಾ ಸಂಪೂರ್ಣ ಬರಿದಾಗಲಿದೆ ಎಂದು ಇತ್ತೀಚೆಗೆ ಕಣಕುಂಬಿಗೆ ಭೇಟಿ ನೀಡಿದ್ದ ನಿಯೋಗದಲ್ಲಿದ್ದ ಅಲ್ಲಿನ ವಿಧಾನಸಭಾ ಉಪಾಧ್ಯಕ್ಷ ಮೈಕೆಲ್ ಲೋಬೋ ತಗಾದೆ ತೆಗೆದಿದ್ದಾರೆ.
ಅಲ್ಲದೆ, ಕರ್ನಾಟಕದ ವಿರುದ್ಧ ಗೋವಾ ವಿಧಾನಸಭೆಯಲ್ಲಿ ಗೊತ್ತುವಳಿಯೊಂದನ್ನು ಅಂಗೀಕರಿಸುವ ಸುಳಿವು ನೀಡಿದ್ದಾರೆ.