ನಾವೇನು ಭಾರತಕ್ಕೆ ಸೇರಿದ್ದೀವಾ? ದೀದಿ ಜೊತೆ ಮಾತನಾಡಲು ಗೋರ್ಖಾ ಹೋರಾಟಗಾರರ ನಕಾರ

Published : Jul 08, 2017, 10:00 PM ISTUpdated : Apr 11, 2018, 12:45 PM IST
ನಾವೇನು ಭಾರತಕ್ಕೆ ಸೇರಿದ್ದೀವಾ? ದೀದಿ ಜೊತೆ ಮಾತನಾಡಲು ಗೋರ್ಖಾ ಹೋರಾಟಗಾರರ ನಕಾರ

ಸಾರಾಂಶ

"ಬಂಗಾಳ ಸರಕಾರದೊಂದಿಗೆ ಯಾವುದೇ ಮಾತುಕತೆಗೆ ಕೂರದಿರಲು ನಿರ್ಧರಿಸಿದ್ದೇವೆ. ಸಿಎಂ ಜೊತೆ ಇನ್ಯಾವತ್ತೂ ಮಾತುಕತೆ ಇಲ್ಲ. ಕೇಂದ್ರ ಸರಕಾರ ಗೋರ್ಖಾಲ್ಯಾಂಡ್ ವಿಚಾರದ ಬಗ್ಗೆ ಮಾತನಾಡಲು ಕರೆದರೆ ಮಾತ್ರ ಮಾತುಕತೆಗೆ ಮುಂದಾಗುತ್ತೇವೆ," ಎಂದು ಜಿಜೆಎಂ ಸ್ಪಷ್ಟಪಡಿಸಿದೆ.

ಕೋಲ್ಕತಾ(ಜುಲೈ 8): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜೊತೆ ತಾನು ಮಾತುಕತೆ ನಡೆಸಲು ಸಿದ್ಧವಿಲ್ಲ ಎಂದು ಗೋರ್ಖಾ ಜನಮುಕ್ತಿ ಮೋರ್ಚಾ(ಜಿಜೆಎಂ) ಹೇಳಿದೆ. ಮಾತಕತೆಗೆ ಮಮತಾ ಕೊಟ್ಟ ಕರೆಯನ್ನು ಮೋರ್ಚಾ ತಿರಸ್ಕರಿಸಿದೆ. ಗೋರ್ಖಾ ಹೋರಾಟಗಾರರ ಮೇಲೆ ನಿರಂತರವಾಗಿ ಹಿಂಸಾಚಾರ ನಡೆಯುತ್ತಿದ್ದರೂ ಸಿಎಂ ಮಮತಾ ಬ್ಯಾನರ್ಜಿ ಕಣ್ಮುಚ್ಚಿ ಕುಳಿತಿದ್ದಾರೆ. ಇವರೊಂದಿಗೆ ಯಾವುದೇ ಕಾರಣಕ್ಕೂ ಮಾತುಕತೆ ಸಾಧ್ಯವಿಲ್ಲ ಎಂದು ಜಿಜೆಎಂನ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

"ಅಮಾಯಕ ಜನರನ್ನ ಪೊಲೀಸರು ಕೊಲ್ಲುತ್ತಿರುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ. ಬಸಿರ್'ಹತ್'ನ ಒಂದು ಘಟನೆಯು ಎಲ್ಲಾ ರಾಷ್ಟ್ರೀಯ ಪಕ್ಷಗಳ ಗಮನ ಸೆಳೆಯಿತು. ಆದರೆ, ಒಂದೇ ತಿಂಗಳ ಅವಧಿಯಲ್ಲಿ ಗುಡ್ಡಗಾಡು ಪ್ರದೇಶಗಳಲ್ಲಿ ಹಲವು ಜನರನ್ನು ಕೊಲ್ಲಲಾಗಿದ್ದರೂ ಯಾವುದೇ ರಾಷ್ಟ್ರೀಯ ಪಕ್ಷ ಅದನ್ನು ಖಂಡಿಸದೇ ಇರುವುದು ದುರದೃಷ್ಟವೇ ಸರಿ. ನಾವು ಭಾರತದ ಭಾಗವಾಗಿದ್ದೇವಾ ಇಲ್ಲವಾ ಎಂದು ರಾಜಕೀಯ ಪಕ್ಷಗಳು ಹಾಗೂ ನೇತಾರರನ್ನು ಕೇಳಬಯಸುತ್ತೇವೆ" ಎಂದು ಗೋರ್ಖಾ ಮುಕ್ತಿಮೋರ್ಚಾ ಹೇಳಿದೆ.

"ಬಂಗಾಳ ಸರಕಾರದೊಂದಿಗೆ ಯಾವುದೇ ಮಾತುಕತೆಗೆ ಕೂರದಿರಲು ನಿರ್ಧರಿಸಿದ್ದೇವೆ. ಸಿಎಂ ಜೊತೆ ಇನ್ಯಾವತ್ತೂ ಮಾತುಕತೆ ಇಲ್ಲ. ಕೇಂದ್ರ ಸರಕಾರ ಗೋರ್ಖಾಲ್ಯಾಂಡ್ ವಿಚಾರದ ಬಗ್ಗೆ ಮಾತನಾಡಲು ಕರೆದರೆ ಮಾತ್ರ ಮಾತುಕತೆಗೆ ಮುಂದಾಗುತ್ತೇವೆ," ಎಂದು ಜಿಜೆಎಂ ಸ್ಪಷ್ಟಪಡಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಾರು ಅಪಘಾತದಲ್ಲಿ ಮುಂಡಗೋಡು ಗ್ರಾಮ ಲೆಕ್ಕಾಧಿಕಾರಿ ಸ್ಥಳದಲ್ಲೇ ಸಾವು, ಮತ್ತಿಬರಿಗೆ ಗಾಯ
ಭಾರತೀಯರ ಕ್ರೇಜ್, ದುಬೈನ ಶಾರುಖ್ ಖಾನ್ ಆಫೀಸ್ ಟವರ್ ಬರೋಬ್ಬರಿ 5000 ಕೋಟಿ ರೂ ಗೆ ಮಾರಾಟ!