ತಜ್ಞ ವೈದ್ಯರಿಲ್ಲವೆಂದು ಬಾಲಕಿಗೆ ಚಿಕಿತ್ಸೆ ನೀಡದ ಸಿಬ್ಬಂದಿ: ಆರೋಗ್ಯ ಸಚಿವರ ತವರಲ್ಲೇ ಬಲಿಯಾಯ್ತು ಅಮಾಯಕ ಜೀವ

Published : Oct 21, 2017, 09:56 AM ISTUpdated : Apr 11, 2018, 12:48 PM IST
ತಜ್ಞ ವೈದ್ಯರಿಲ್ಲವೆಂದು ಬಾಲಕಿಗೆ ಚಿಕಿತ್ಸೆ ನೀಡದ ಸಿಬ್ಬಂದಿ: ಆರೋಗ್ಯ ಸಚಿವರ ತವರಲ್ಲೇ ಬಲಿಯಾಯ್ತು ಅಮಾಯಕ ಜೀವ

ಸಾರಾಂಶ

ಆರೋಗ್ಯ ಸಚಿವರ ತವರಿನಲ್ಲಿ ಹಾವು ಕಚ್ಚಿದ ರೋಗಿಗೆ ಚಿಕಿತ್ಸೆ ಸಿಗದೇ ಬಾಲಕಿ ಜೀವ ಬಿಟ್ಟ ಘಟನೆ ನಡೆದಿದೆ. ಕೋಲಾರ ಜಿಲ್ಲೆಯ ಕೆಜಿಎಫ್ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.

ಕೋಲಾರ(ಅ.21): ಆರೋಗ್ಯ ಸಚಿವರ ತವರಿನಲ್ಲಿ ಹಾವು ಕಚ್ಚಿದ ರೋಗಿಗೆ ಚಿಕಿತ್ಸೆ ಸಿಗದೇ ಬಾಲಕಿ ಜೀವ ಬಿಟ್ಟ ಘಟನೆ ನಡೆದಿದೆ. ಕೋಲಾರ ಜಿಲ್ಲೆಯ ಕೆಜಿಎಫ್ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.

ಆಸ್ಪತ್ರೆಯಲ್ಲಿ ಹಾವು ಕಚ್ಚಿದವರಿಗೆ ಔಷಧಿ ಇದ್ದರೂ ಚಿಕಿತ್ಸೆ ನೀಡುವ  ಕೊರತೆಯಿಂದ ಹಾವು ಕಚ್ಚಿ 14 ವರ್ಷದ ಬಾಲಕಿ ಅಂಜಲಿ ಸಾವನ್ನಪ್ಪಿದ್ದಾಳೆ. ಮೃತ ಅಂಜಲಿ ಮಧ್ಯಾಹ್ನ ಮನೆಯ ಪಕ್ಕದಲ್ಲಿ ಪಟಾಕಿ ಒಡೆಯುವುದನ್ನು ನೋಡುತ್ತಿದ್ದಾಗ ,ಗೊಡೆಯ ಸಂದಿಯಲ್ಲಿದ್ದ ಹಾವು ಬಾಲಕಿಯ ಕೈ ಬೆರಳಿಗೆ ಕಚ್ಚಿದೆ. ತಕ್ಷಣದಲ್ಲಿ ಬಾಲಕಿ ಪೋಷಕರು ಕೆಜಿಎಫ್'ನ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದರು. ಚುಚ್ಚುಮದ್ದು ಇದ್ದರು ವೈದ್ಯತಜ್ಞರು ಇಲ್ಲದೆ, ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಅಂತ ಆಸ್ಪತ್ರೆ ಸಿಬ್ಬಂದಿ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗದಗ: ಲಕ್ಕುಂಡಿಯಲ್ಲಿ ಎರಡನೇ ದಿನ ಉತ್ಖನನದಲ್ಲಿ ಶಿವಲಿಂಗದ ಪೀಠ ಪತ್ತೆ! ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ
ಕಿಡ್ನಾಪ್‌ ಆದ 1094 ಮಕ್ಕಳು ಇನ್ನೂ ಪತ್ತೆಯಾಗಿಲ್ಲ!