
ಬಳ್ಳಾರಿ(ಅ.21): ಗಣಿನಾಡು ಬಳ್ಳಾರಿಯಲ್ಲಿ ಹಣದ ಆಸೆಗಾಗಿ ಪತ್ನಿಗೆ ಕಿರುಕುಳ ನೀಡಿ ಆಸೀಡ್ ಕುಡಿಸಿದ್ದ ಪಾಪಿ ಪೊಲೀಸ್ ಪ್ರಕರಣ ನ್ಯಾಯಾಲಯ ಮೆಟ್ಟಿಲೇರಿದೆ.ಪೇದೆ ವೆಂಕಟೇಶ್ ಎಂಬಾತ ಆಶಾ ಎನ್ನುವ ಮಹಿಳೆಯನ್ನ ಮದುವೆಯಾಗಿ ಆರೇ ತಿಂಗಳಲ್ಲಿ ಹಣದ ಆಸೆಯಿಂದ ಕಿರುಕುಳ ನೀಡುತ್ತಿದ್ದ. ಹಣ ತರುವಂತೆ ದಿನನಿತ್ಯ ಪೀಡಿಸುತಿದ್ದ. ಇದಕ್ಕೆ ವಿರೋಧಿಸಿದ್ದ ಪತ್ನಿಗೆ ಆಸಿಡ್ ಕುಡಿಸಿ ನಾಪತ್ತೆಯಾಗಿದ್ದ. ಆಸಿಡ್ ದಾಳಿಯಿಂದ ನರಕಯಾತನೆ ಅನುಭವಿಸುತ್ತಿರುವ ಆಶಾ ಆಹಾರಸೇವಿಸಲು ಆಗದ ಸ್ಥಿತಿಯಲ್ಲಿದ್ದಾರೆ.
ಈ ಬಗ್ಗೆ ಸುವರ್ಣ ನ್ಯೂಸ್ ವಿಸೃತ ವರದಿ ಪ್ರಸಾರಮಾಡಿತ್ತು. ಆದ್ರೆ ಪೊಲೀಸರು ಪೊಲೀಸಪ್ಪನ ವಿರುದ್ಧ ಕ್ರಮ ಕೈಗೊಳ್ಳದೆ ಆಶಾ ಕುಟುಂಬಕ್ಕೆ ಬಳ್ಳಾರಿಯಿಂದ 60 ಕಿಲೋಮೀಟರ್ ದೂರವಿರುವ ಕಂಪ್ಲಿ ಠಾಣೆಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಇದು ನೊಂದ ಕುಟುಂಬದ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಕರಣ ನಡೆದದ್ದು ಬಳ್ಳಾರಿ ನಗರದಲ್ಲಿ ಆದ್ರೆ ಕಂಪ್ಲಿ ಠಾಣೆಗೆ ಹಾಜರಾಗಲು ಪೊಲೀಸರು ನೋಟಿಸ್ ನೀಡಿದ್ದಾರೆ. ಹೀಗಾಗಿ ನೊಂದ ಕುಟುಂಬ ನ್ಯಾಯಕ್ಕಾಗಿ ಮೊರೆ ಇಡುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.