ರಾಜಸ್ಥಾನ ವಿಧಾನಸಭೆಗೂ ಭೂತದ ಕಾಟ!

Published : Feb 24, 2018, 09:14 AM ISTUpdated : Apr 11, 2018, 01:08 PM IST
ರಾಜಸ್ಥಾನ ವಿಧಾನಸಭೆಗೂ ಭೂತದ ಕಾಟ!

ಸಾರಾಂಶ

ಹಾರ ಸಿಎಂ ನಿತೀಶ್‌ ಕುಮಾರ್‌ ಪ್ರೇತಾತ್ಮ ಬಿಟ್ಟಿದ್ದಾರೆ ಎಂದು ಹೆದರಿ, ಲಾಲು ಪುತ್ರ ತೇಜ್‌ಪ್ರತಾಪ್‌ ಯಾದವ್‌ ಸರ್ಕಾರಿ ಬಂಗ್ಲೆ ಖಾಲಿ ಮಾಡಿದ್ದಾಯಿತು. ಈಗ ರಾಜಸ್ಥಾನ ವಿಧಾನಸಭಾ ಭವನದಲ್ಲೂ ಇಂತದ್ದೇ ಒಂದು ಸಮಸ್ಯೆ ಎದುರಾಗಿರುವ ಬಗ್ಗೆ ಶಾಸಕರಲ್ಲೇ ಶಂಕೆ ಮೂಡಿದೆ.

ಜೈಪುರ: ಬಿಹಾರ ಸಿಎಂ ನಿತೀಶ್‌ ಕುಮಾರ್‌ ಪ್ರೇತಾತ್ಮ ಬಿಟ್ಟಿದ್ದಾರೆ ಎಂದು ಹೆದರಿ, ಲಾಲು ಪುತ್ರ ತೇಜ್‌ಪ್ರತಾಪ್‌ ಯಾದವ್‌ ಸರ್ಕಾರಿ ಬಂಗ್ಲೆ ಖಾಲಿ ಮಾಡಿದ್ದಾಯಿತು. ಈಗ ರಾಜಸ್ಥಾನ ವಿಧಾನಸಭಾ ಭವನದಲ್ಲೂ ಇಂತದ್ದೇ ಒಂದು ಸಮಸ್ಯೆ ಎದುರಾಗಿರುವ ಬಗ್ಗೆ ಶಾಸಕರಲ್ಲೇ ಶಂಕೆ ಮೂಡಿದೆ.

ರಾಜಸ್ಥಾನ ವಿಧಾನಸಭೆ ಸದಸ್ಯರ ಸಂಖ್ಯೆ ಯಾವಾಗಲೂ 200ರಿಂದ ಹೆಚ್ಚು ದಾಟುವುದಿಲ್ಲವಂತೆ. ಯಾರಾದರೊಬ್ಬರು ರಾಜೀನಾಮೆ ನೀಡುತ್ತಾರೆ, ಜೈಲಿಗೆ ಹೋಗುತ್ತಾರೆ ಅಥವಾ ಅಕಾಲಿಕ ಸಾವು ಸಂಭವಿಸುತ್ತದೆ. ಇದಕ್ಕೆಲ್ಲ ಕಾರಣ, ವಿಧಾನಸಭೆಯಲ್ಲಿ ಪ್ರೇತಾತ್ಮಗಳ ಶಕ್ತಿ ಇರಬಹುದು ಎಂಬ ಶಂಕೆ ಶಾಸಕರಲ್ಲಿ ಮೂಡಿಸಿದೆ ಎನ್ನಲಾಗಿದೆ. ಈ ಬಗ್ಗೆ ಕೆಲವರು ಸಿಎಂ ವಸುಂಧರಾ ರಾಜೇ ಜೊತೆ ತಮ್ಮ ಆತಂಕವನ್ನು ಹಂಚಿಕೊಂಡಿದ್ದು, ಅರ್ಚಕರನ್ನು ಕರೆಸಿ, ಕೆಟ್ಟಆತ್ಮವನ್ನು ಶಾಂತಗೊಳಿಸುವಂತೆ ಕೋರಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಗುರುವಾರ ಅರ್ಚಕರೊಬ್ಬರು ವಿಧಾನಸಭೆ ಪ್ರವೇಶದಲ್ಲಿ ಈ ಕುರಿತು ಪೂಜಾ ವಿಧಿವಿಧಾನ ನಡೆಸಿದ್ದಾರೆ. 2001ರಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ವಿಧಾನಸಭಾ ಕಟ್ಟಡದ ಭೂಮಿಯ ಒಂದು ಭಾಗ ಹಿಂದೆ ಸ್ಮಶಾನವಾಗಿತ್ತು. ಮಂಗಳವಾರವಷ್ಟೇ ಬಿಜೆಪಿಯ ಹಾಲಿ ಶಾಸಕ ಸಿಂಗ್‌ ಚೌಹಾಣ್‌ ಮೃತಪಟ್ಟಿದ್ದುದು, ಶಾಸಕರ ನಂಬಿಕೆಯನ್ನು ಇನ್ನಷ್ಟುಬಲಪಡಿಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಒಂದು ವೈರಸ್ ಎಂಟ್ರಿ, 14 ಕೋಟಿ ರೂ ಕಳೆದುಕೊಂಡು ರ‍್ಯಾಪಿಡೋ ಚಾಲಕನಾದ ಉದ್ಯಮಿ ಕಣ್ಣೀರ ಕತೆ
ಒಂದೇ ವರ್ಷದಲ್ಲಿ 1 ಲಕ್ಷ ಮೌಲ್ಯದ ಕಾಂಡೋಮ್‌‌ ಖರೀದಿ ಮಾಡಿದ ಚೆನ್ನೈ ವ್ಯಕ್ತಿ!