ಜನರನ್ನು ಹಾದಿ ತಪ್ಪಿಸುವ ಕಾರ್ಯ: ಪೊಲೀಸರ ಅನುಮತಿಯಿಂದ 5 ಲಕ್ಷ ಪಡೆಯಿರಿ ಕೇವಲ ವದಂತಿ

Published : Nov 15, 2016, 10:43 AM ISTUpdated : Apr 11, 2018, 12:35 PM IST
ಜನರನ್ನು ಹಾದಿ ತಪ್ಪಿಸುವ ಕಾರ್ಯ: ಪೊಲೀಸರ ಅನುಮತಿಯಿಂದ 5 ಲಕ್ಷ ಪಡೆಯಿರಿ ಕೇವಲ ವದಂತಿ

ಸಾರಾಂಶ

ಇದೇ ಹಿನ್ನಲೆಯಲ್ಲಿ ಕೆಲವು ಮಂದಿ ಜನರನ್ನು ಹಾದಿ ತಪ್ಪಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಮದುವೆ-ಮುಂಜಿ ಕಾರ್ಯಕ್ರಮ ಇರುವವರು ಪೊಲೀಸ್ ಅನುಮತಿಯ ಮೇಲೆ 5 ಲಕ್ಷ ರೂ ವರೆಗೆ ಹಣವನ್ನು ಬ್ಯಾಂಕಿನಿಂದ ಹಿಂಪಡೆಯಬಹುದು ಎಂಬ ಮೆಸೇಜ್ ಸಾಮಾಜಿಕ ಜಾಲತಾಣಗಳಲ್ಲಿ  ಹರಿದಾಡುತ್ತಿದೆ. 

ನವದೆಹಲಿ(ನ.15): ದೇಶದಲ್ಲಿ 500 ರೂ ಮತ್ತು 1000 ರೂ ಮುಖಬೆಲೆಯ ನೋಟುಗಳನ್ನು ಸರಕಾರ ರದ್ದು ಮಾಡಿರುವ ಹಿನ್ನಲೆಯಲ್ಲಿ ಜನ ಸಾಮಾನ್ಯರ ದಿನ ನಿತ್ಯದ ಖರ್ಚು ವೆಚ್ಚಕ್ಕೂ ಕೈಯಲ್ಲಿ ಕಾಸಿಲ್ಲದ ಸ್ಥಿತಿ ನಿರ್ಮಾಣವಾಗಿದೆ. 

ಇದೇ ಹಿನ್ನಲೆಯಲ್ಲಿ ಕೆಲವು ಮಂದಿ ಜನರನ್ನು ಹಾದಿ ತಪ್ಪಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಮದುವೆ-ಮುಂಜಿ ಕಾರ್ಯಕ್ರಮ ಇರುವವರು ಪೊಲೀಸ್ ಅನುಮತಿಯ ಮೇಲೆ 5 ಲಕ್ಷ ರೂ ವರೆಗೆ ಹಣವನ್ನು ಬ್ಯಾಂಕಿನಿಂದ ಹಿಂಪಡೆಯಬಹುದು ಎಂಬ ಮೆಸೇಜ್ ಸಾಮಾಜಿಕ ಜಾಲತಾಣಗಳಲ್ಲಿ  ಹರಿದಾಡುತ್ತಿದೆ. 

ನಿಮ್ಮ ಎರಿಯಾದ ಡಿಎಸ್'ಪಿ ಅನುಮತಿಯನ್ನು ನೀಡಿದರೆ ನೀವು 5 ಲಕ್ಷದ ವರೆಗಿನ ಹಣವನ್ನು ಬದಲಾಯಿಸಿಕೊಳ್ಳಿ, ಇಲ್ಲ ಬ್ಯಾಂಕಿನಿಂದ ಹಿಂಪಡೆಯಬಹುದಾಗಿದೆ ಎನ್ನುವ ಮೆಸೇಜ್ ಗಳನ್ನು ಹರಿ ಬಿಡುತ್ತಿದ್ದಾರೆ. ಇದಕ್ಕೆ ದೆಹಲಿಯ ಉತ್ತರ ವಲಯದ ಡಿಸಿಪಿ ಈ ಕುರಿತಂತೆ ಟ್ವೀಟ್ ಮಾಡಿದ್ದು, ಈ ರೀತಿಯಲ್ಲಿ ಯಾವುದೇ ಸೌಲಭ್ಯಗಳು ಜಾರಿಯಲ್ಲಿ ಇಲ್ಲವೆಂದು ತಿಳಿಸಿದ್ದಾರೆ. 

ಇಂದೊಂದು ರೂಮರ್ ಆಗಿದ್ದು, ಯಾರು ಇಂತಹ ರೂಮರ್ ಗಳಿಗೆ ಕಿವಿ ಕೊಡಬಾರದು ಎಂದು ಮನವಿ ಮಾಡಿದ್ದಾರೆ. 

 


 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಪುಟ ಪುನಾರಚನೆ ಕುರಿತು ಮಾಹಿತಿಯಿಲ್ಲ: ಸಚಿವ ಸಂತೋಷ್ ಲಾಡ್‌ ಸ್ಪಷ್ಟನೆ
ರಿಯಾಯಿತಿ ದರದ ಭೂಮಿ ಮಾರಾಟಕ್ಕೆ ಹಕ್ಕಿಲ್ಲ: ಇನ್ಫೋಸಿಸ್‌ಗೆ ಕಾರ್ತಿ ಚಿದಂಬರಂ ತಿರುಗೇಟು