ಗೌರಿ ಲಂಕೇಶ್ ಹತ್ಯೆ: ಕೇಬಲ್ ರವಿ ಸೇರಿದಂತೆ ಮೂವರು ಪೊಲೀಸ್ ವಶಕ್ಕೆ

Published : Sep 07, 2017, 01:20 PM ISTUpdated : Apr 11, 2018, 12:44 PM IST
ಗೌರಿ ಲಂಕೇಶ್ ಹತ್ಯೆ: ಕೇಬಲ್ ರವಿ ಸೇರಿದಂತೆ ಮೂವರು ಪೊಲೀಸ್ ವಶಕ್ಕೆ

ಸಾರಾಂಶ

ಕೇಬಲ್ ರವಿ ತನ್ನ ಕಡೆಯ ಇಬ್ಬರು ಹುಡುಗರನ್ನು ರಾತ್ರಿ 8:20ಕ್ಕೆ ಗೌರಿ ಲಂಕೇಶ್ ಮನೆಗೆ ಕಳುಹಿಸುತ್ತಾನೆ. ಕೇಬಲ್ ಹುಡುಗರಾದ ಪ್ರಕಾಶ್ ಮತ್ತು ಮುಕೇಶ್ ಅವರು ಸ್ಥಳಕ್ಕೆ ಬಂದಾಗ ಗೌರಿ ಲಂಕೇಶ್ ಹತ್ಯೆಯಾಗಿ ಶವವಾಗಿ ಬಿದ್ದಿರುತ್ತಾರೆ. ಈ ವಿಚಾರವನ್ನು ಈ ಮೂವರು ಕೇಬಲ್ ಹುಡುಗರು ಪೊಲೀಸ್ ವಿಚಾರಣೆಯಲ್ಲಿ ತಿಳಿಸಿದ್ದಾರೆ.

ಬೆಂಗಳೂರು(ಸೆ. 07): ಗೌರಿ ಲಂಕೇಶ್ ಕೊನೆಯ ಬಾರಿ ಮೊಬೈಲ್'ನಲ್ಲಿ ಮಾತನಾಡಿದವರ ವಿವರದ ಜಾಡು ಹಿಡಿದ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ. ಕೇಬಲ್ ರವಿ, ಮುಕೇಶ್ ಮತ್ತು ಪ್ರಕಾಶ್ ಅವರನ್ನ ಆರ್.ಆರ್.ನಗರ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಗೌರಿ ಲಂಕೇಶ್ ಕೊನೆಯ ಬಾರಿ ಫೋನ್'ನಲ್ಲಿ ಮಾತನಾಡಿದ್ದ ಕೇಬಲ್ ರವಿ ಎಂಬಾತನ ಜೊತೆ. ಮನೆಯಲ್ಲಿ ಕೇಬಲ್ ಸರಿ ಇಲ್ಲ ಎಂದು ಗೌರಿಯವರು ಮೊನ್ನೆ ಸಂಜೆ 7:30ಕ್ಕೆ ರವಿಗೆ ಫೋನ್ ಮಾಡಿ ತಿಳಿಸಿರುತ್ತಾರೆ. ಅದಕ್ಕೆ ಆತ 10 ಗಂಟೆಗೆ ಮನೆಗೆ ಬರ್ತೀವಿ ಎಂದು ಹೇಳಿರುತ್ತಾರೆ. 10 ಗಂಟೆಗೆ ಬೇಡ 8 ಗಂಟೆಗೆ ಮನೆಗೆ ಬನ್ನಿ. ಹತ್ತು ನಿಮಿಷ ಮನೆ ಹತ್ತಿರ ಇರುತ್ತೇನೆ ಎಂದು ಗೌರಿ ಹೇಳುತ್ತಾರೆ. ಕೇಬಲ್ ಹುಡುಗರು ಬರುತ್ತಾರೆಂದು ಗೌರಿ ಲಂಕೇಶ್ ಬೇಗ ಮನೆಗೆ ಬಂದಿರುತ್ತಾರೆ. ಅದಾದ ಬಳಿಕ ಗೌರಿ ಲಂಕೇಶ್ ಅವರ ಮೊಬೈಲ್'ಗೆ ಮತ್ಯಾವ ಕರೆಯೂ ಬಂದಿರುವುದಿಲ್ಲ.

ಕೇಬಲ್ ರವಿ ತನ್ನ ಕಡೆಯ ಇಬ್ಬರು ಹುಡುಗರನ್ನು ರಾತ್ರಿ 8:20ಕ್ಕೆ ಗೌರಿ ಲಂಕೇಶ್ ಮನೆಗೆ ಕಳುಹಿಸುತ್ತಾನೆ. ಕೇಬಲ್ ಹುಡುಗರಾದ ಪ್ರಕಾಶ್ ಮತ್ತು ಮುಕೇಶ್ ಅವರು ಸ್ಥಳಕ್ಕೆ ಬಂದಾಗ ಗೌರಿ ಲಂಕೇಶ್ ಹತ್ಯೆಯಾಗಿ ಶವವಾಗಿ ಬಿದ್ದಿರುತ್ತಾರೆ. ಈ ವಿಚಾರವನ್ನು ಈ ಮೂವರು ಕೇಬಲ್ ಹುಡುಗರು ಪೊಲೀಸ್ ವಿಚಾರಣೆಯಲ್ಲಿ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು: 2 ಲಕ್ಷ ಬೆಲೆಯ ಗಿಳಿ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವಕ!
ವಿಮಾನದಲ್ಲಿ ಹೃದಯಾಘಾತ- ಅಮೆರಿಕ ಪ್ರಜೆಯ ಜೀವ ಉಳಿಸಿದ ಡಾ. ಅಂಜಲಿ ನಿಂಬಾಳ್ಕರ್