ಮಂಡ್ಯ: ಸಿಎಂ ಕಾರ್ಯಕ್ರಮಕ್ಕೋಸ್ಕರ ಸರಕಾರೀ ಕಾಲೇಜಿನ ಕಾಂಪೌಂಡ್ ಧ್ವಂಸ

Published : Sep 07, 2017, 11:39 AM ISTUpdated : Apr 11, 2018, 12:56 PM IST
ಮಂಡ್ಯ: ಸಿಎಂ ಕಾರ್ಯಕ್ರಮಕ್ಕೋಸ್ಕರ ಸರಕಾರೀ ಕಾಲೇಜಿನ ಕಾಂಪೌಂಡ್ ಧ್ವಂಸ

ಸಾರಾಂಶ

ಜಿಲ್ಲಾಡಳಿತದ ಅಧಿಕಾರಿಗಳು ಎರಡು ಕಡೆ ಕಾಲೇಜಿಗೆ ಸೇರಿದ ಕಾಂಪೌಂಡ್'ನ್ನು ಒಡೆದು ಹಾಕಿರೋದು ಈಗ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಈಗಾಗಲೇ ಕಾಲೇಜಿಗೆ ಹೋಗಲು ದಾರಿಯಿದ್ದರೂ ಅಧಿಕಾರಿಗಳು ಕಾಲೇಜಿಗೆ ಸೇರಿದ ಈ ಕಾಂಪೋಂಡ್ ಕೆಡವಿ ಬೇರೊಂದು ದಾರಿ ನಿರ್ಮಿಸಿದ್ಯಾಕೆ ಅಂತಾ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.

ಮಂಡ್ಯ(ಸೆ. 07): ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕಾಗಿ ಸರ್ಕಾರಿ ಕಾಲೇಜಿನ ಕಾಂಪೋಂಡ್'ಅನ್ನೇ ಜಿಲ್ಲಾಡಳಿತದ ಅಧಿಕಾರಿಗಳು ಕೆಡವಿರುವ ಘಟನೆ ಸಕ್ಕರೆ ನಗರಿ ಮಂಡ್ಯದಲ್ಲಿ ನಡೆದಿದೆ. ನಾಳೆ, ಶುಕ್ರವಾರ ಸಿಎಂ ಸಿದ್ದರಾಮಯ್ಯ ವಿವಿಧ ಕಾಮಗಾರಿಗಳ ಉದ್ಘಾಟನೆಗಾಗಿ‌ ಮಂಡ್ಯಕ್ಕೆ ಆಗಮಿಸುತ್ತಿದ್ದಾರೆ. ಈ ನಿಮಿತ್ತ ಮಂಡ್ಯದ ಸರ್ಕಾರಿ ಬಾಲಕರ ಮಹಾವಿದ್ಯಾಲಯದ ಕಾಲೇಜಿನಲ್ಲಿ ಸಿಎಂ ಕಾರ್ಯಕ್ರಮ ಆಯೋಜಿಸಲಾಗಿದೆ. ‌ಇದಕ್ಕಾಗಿ ಕಾಲೇಜಿನ ಆವರಣದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗಿದೆ.

ಜಿಲ್ಲಾಡಳಿತದ ಅಧಿಕಾರಿಗಳು ಎರಡು ಕಡೆ ಕಾಲೇಜಿಗೆ ಸೇರಿದ ಕಾಂಪೌಂಡ್'ನ್ನು ಒಡೆದು ಹಾಕಿರೋದು ಈಗ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಈಗಾಗಲೇ ಕಾಲೇಜಿಗೆ ಹೋಗಲು ದಾರಿಯಿದ್ದರೂ ಅಧಿಕಾರಿಗಳು ಕಾಲೇಜಿಗೆ ಸೇರಿದ ಈ ಕಾಂಪೋಂಡ್ ಕೆಡವಿ ಬೇರೊಂದು ದಾರಿ ನಿರ್ಮಿಸಿದ್ಯಾಕೆ ಅಂತಾ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಮುಖ್ಯಮಂತ್ರಿಗಳಿಗೋಸ್ಕರ ಕಾಂಪೌಂಡ್ ಕೆಡವಿ ಮತ್ತೆ ಕಟ್ಟುವ ಮೂಲಕ ಸಾರ್ವಜನಿಕರ ಹಣವನ್ನು ಪೋಲು ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರೂಪಾಯಿ ಕುಸಿದರೂ ಪ್ರಗತಿಯತ್ತ ಭಾರತ: ನಿಜಕ್ಕೂ ಏನಾಗುತ್ತಿದೆ?‌
87 ವರ್ಷದ ಪ್ರಸಿದ್ಧ ಪೇಂಟರ್ ಮಗುವಿಗೆ ತಾಯಿಯಾದ 37 ವರ್ಷದ ಪತ್ನಿ, ಉಳಿದ ಮಕ್ಕಳೊಂದಿಗೆ ಬಂಧವೇ ಕಟ್