
ಹೈದ್ರಾಬಾದ್(ಜ.03): ಗಾಂಜಾವನ್ನ ಕಳ್ಳ ಮಾರ್ಗಗಳ ಮೂಲಕ ಸಾಗಾಟ ಮಾಡುವ ವರದಿಗಳನ್ನ ಕೇಳಿದ್ದೇವೆ. ಆದರೆ, ಇಲ್ಲೊಂದು ಪ್ರಕರಣದ್ಲಲಿ ಮನೆಯಲ್ಲಿ ರಾಜಾರೋಶವಾಗಿ ಗಾಂಜಾ ಬೆಳೆದು ಸಿಕ್ಕಿಬಿದ್ದಿರುವ ಘಟನೆ ಹೈದ್ರಾಬಾದ್`ನ ಮಣಿಕೊಂಡದಲ್ಲಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ 33 ವರ್ಷದ ವ್ಯಕ್ತಿಯನ್ನ ಬಂಧಿಸಲಾಗಿದೆ.
ದಾಳಿ ವೇಳೆ 8 ಕೆ.ಜಿಯಷ್ಟು ಗಾಂಜಾ ಮತ್ತು 40 ಪಾಟ್`ಗಳಲ್ಲಿದ್ದ ಗಾಂಜಾ ಗಿಡಗಳನ್ನ ವಶಪಡಿಸಿಕೊಂಡಿದ್ದಾರೆ. ಅಧಿಕ ಆದಾಯ ಗಳಿಸುವ ಉದ್ದೇಶದಿಂದ ಸಯ್ಯದ್ ಶಾಹಿದ್ ಹುಸೇನ್ ತನ್ನ 3 ಬೆಡ್ ರೂಮ್ ಫ್ಲ್ಯಾಟ್`ನಲ್ಲಿಯೇ ಪೊಲೀಸರು ಮತ್ತು ಜನರ ಕಣ್ಣು ತಪ್ಪಿಸಿ ಪಾಟ್`ಗಳಲ್ಲಿ ಗಾಂಜಾ ಗಿಡಗಳನ್ನ ಬೆಳೆಸಿದ್ದ.
ಸೈಯದ್ ಗಾಂಜಾ ಮಾರುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿದ ಪೊಲೀಸರು ರೆಡ್ ಹ್ಯಾಂಡಾಗಿ ಹಿಡಿದಿದ್ಧಾರೆ. ತನ್ನ ಫ್ಲ್ಯಾಟ್`ನಲ್ಲಿ ತಾನೇ ನಿರ್ಮಿಸಿಕೊಂಡಿದ್ದ ಮಿನಿತೋಟದಲ್ಲಿ ಗಾಂಜಾ ಬೆಳೆದಿದ್ದ ಬಗ್ಗೆ ಸೈಯದ್ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.
ವೈಜ್ಞಾನಿಕವಾಗಿ ಉಷ್ಣಾಂಶ ಮಿತಿಯಲ್ಲಿಡುವ ವ್ಯವಸ್ಥೆ ಮಾಡಿಕೊಂಡು ಫ್ಲ್ಯಾಂಟ್ ಒಳಗಡೆ ಬೇಳೆದಿದ್ದ ಗಾಂಜಾವನ್ನ ಕಂಡು ಪೊಲೀಸರಿಗೇ ಅಚ್ಚರಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.