
ಬೀದರ್(ಆ.07): ಆ ಜಿಲ್ಲೆಯಲ್ಲೊಂದು ಗ್ಯಾಂಗ್ ಇದೆ. ಆ ಗ್ಯಾಂಗ್ ಅಪ್ರಾಪ್ತ ಬಾಲಕಿಯರನ್ನೇ ಟಾರ್ಗೆಟ್ ಮಾಡುತ್ತದೆ. ಮೊದಲು ಲವ್ ಮಾಡಿ ಬಣ್ಣ ಬಣ್ಣದ ಕನಸು ತೋರಿಸಿ ನಂತರ ಅಪ್ರಾಪ್ತೆಯರನ್ನು ಮಾರಾಟ ಮಾಡುತ್ತದೆ . ಅಪ್ರಾಪ್ತ ಬಾಲಕಿಯರೇನಾದರೂ ಆ ಗ್ಯಾಂಗ್ ಕೈಗೆ ಸಿಕ್ಕಿ ಹಾಕಿಕೊಂಡರೆ ಮರಳಿ ಮನೆಗೆ ಬರುವ ಗ್ಯಾರಂಟಿನೇ ಇರುವುದಿಲ್ಲ. ಇಂತಹದ್ದೊಂದು ಖತರ್ನಾಕ್ ಗ್ಯಾಂಗ್ ನ ಕುರಿತ ಸ್ಟೋರಿ ಇಲ್ಲಿದೆ ನೋಡಿ.
ಬಡ ಮತ್ತು ಕೂಲಿ ಕಾರ್ಮಿಕರ ಅಪ್ರಾಪ್ತ ಯುವತಿಯರನ್ನ ಮೊದಲು ಪ್ರೀತಿಸುವ ನಾಟಕ ಆಡುವುದು. ಆಮೇಲೆ ಅದೇ ಯುವತಿಯರನ್ನು ಬೇರೆ ರಾಜ್ಯಗಳಿಗೆ ಮಾರಾಟ ಮಾಡುವುದು. ಅಮಾಯಕರನ್ನು ವಂಚಿಸುವ ಇಂತಹದ್ದೊಂದು ಖತರ್ನಾಕ್ ಗ್ಯಾಂಗ್ ಇರುವುದು ಗಡಿ ಜಿಲ್ಲೆ ಬೀದರ್'ನಲ್ಲಿ .
ಗಡಿ ಜಿಲ್ಲೆ ಬೀದರ್ ನ ರಾಜಕುಮಾರ್-ಭಾಗ್ಯವತಿ ದಂಪತಿಯ ಮಗಳಾದ ನಾಗಮಣಿ ಎಂಬ ಅಪ್ರಾಪ್ತ ಯುವತಿಯನ್ನು ಬದ್ರೋದ್ದೀನ್ ಕಾಲೋನಿಯ ಅನಿಲ್ ಎಂಬ ಯುವಕ ಪ್ರೀತಿಸುವ ನಾಟಕವಾಡಿ ಓಡಿಸಿಕೊಂಡು ಹೋಗಿದ್ದಾನೆ. ಇದರಲ್ಲಿ ಅನಿಲ್ ತಾಯಿ ಆಶಾ ಕೈವಾಡವೂ ಇದ್ದು ಆಕೆಯೂ ಪರಾರಿಯಾಗಿದ್ದಾಳೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಮಲಾನ ಎಂಬ ಮತ್ತೊಬ್ಬ ಮಹಿಳೆ ಇದೀಗ ಪೋಲೀಸರ ವಶದಲ್ಲಿದ್ದಾಳೆ. ಈ ಗ್ಯಾಂಗ್ ತಮ್ಮ ಮಗಳನ್ನ ರಾಜಸ್ಥಾನದಲ್ಲಿ ಮಾರಾಟ ಮಾಡಿದ್ದಾರೆ ಎಂಬುದು ನಾಗಮಣಿ ಪೋಷಕರ ಆರೋಪ.
ಈ ಪ್ರಕರಣದ ಬಗ್ಗೆ ಪೋಲೀಸ್ರು ಮಾತ್ರ ಇದೊಂದು ಕಿಡ್ನಾಪ್, ಮಾರಾಟ ಪ್ರಕರಣ ಅಲ್ಲ ಎನ್ನುತ್ತಿದ್ದಾರೆ. ಆದ್ರೆ ಸ್ಥಳೀಯರು ಹಾಗೂ ಅಪ್ರಾಪ್ತ ಬಾಲಕಿಯ ಸಂಬಂಧಿಕರು ಮಾತ್ರ ಇಂತಹ ಪ್ರಕರಣಗಳು ಈ ಗ್ಯಾಂಗ್'ನಿಂದ ಹಿಂದೆ ಕೂಡ ನಡೆದಿದ್ದು, ಬಡಾವಣೆಯಲ್ಲಿ ಹೊಸ ಹೊಸ ಯುವತಿಯರನ್ನು ಕರೆದುಕೊಂಡು ಬಂದು, ಕೆಲ ದಿನ ಅವರ ಜತೆಯಲ್ಲೇ ಇಟ್ಟುಕೊಂಡು ಬಳಿಕ ಅವರನ್ನ ಗುಜರಾತ್ ಹಾಗೂ ರಾಜಸ್ತಾನಗಳಿಗೆ ರವಾನಿಸಲಾಗುತ್ತಿತ್ತು ಎನ್ನುತ್ತಿದ್ದಾರೆ.
ಈ ಹಿಂದೆಯೂ ಇಂತಹ ಆರೋಪ ಕೇಳಿ ಬಂದಿದ್ದರೂ ಪೋಲೀಸರು ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎನ್ನುವುದು ಸ್ಥಳೀಯರ ಆರೋಪ. ಇನ್ನಾದರೂ ಪೋಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನೊಂದ ಕುಟುಂಬಕ್ಕೆ ನ್ಯಾಯ ಕೊಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.