
ಭೋಪಾಲ್(ಜ.05): ಮಧ್ಯಪ್ರದೇಶದ ಶಿಯಾಪುರ್ ಜಿಲ್ಲೆಯ ಹಳ್ಳಿಯೊಂದರ ರೈತರಿಗೆ ಗಾಂಧಿ ಚಿತ್ರವಿಲ್ಲದ 2 ಸಾವಿರ ರುಪಾಯಿಯ ನೋಟುಗಳು ಬ್ಯಾಂಕ್ ನಿಂದಲೇ ದೊರೆತಿವೆ. ಅವು ನಕಲಿ ಎಂದು ಗಾಬರಿಗೊಂಡ ರೈತರು ನೋಟು ಪಡೆದಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಹೋಗಿ ಕೇಳಿದ್ದಾರೆ.
ನೋಟುಗಳನ್ನು ಹಿಂಪಡೆದ ಅಧಿಕಾರಿಗಳು, ಆ ನೋಟುಗಳು ಅಸಲಿ ಎಂದಿದ್ದಾರೆ. ಮುದ್ರಣ ದೋಷದ ಕಾರಣಕ್ಕೆ ಗಾಂಧಿ ಚಿತ್ರವೇ ನೋಟಿನಿಂದ ನಾಪತ್ತೆಯಾಗಿತ್ತು. ಈ ರೀತಿ ಸಮಸ್ಯೆಯಿರುವ ಅಸಲಿ ನೋಟುಗಳು ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚಾಲ್ತಿಯಲ್ಲಿವೆ ಎಂದು ಬ್ಯಾಂಕ್ ಹಾಗೂ ಪೊಲೀಸ್ ಮೂಲಗಳು ತಿಳಿಸಿವೆ.
ಎಸ್ ಬಿಐನಿಂದ ನೋಟನ್ನು ಪಡೆಯುವಾಗ ಸರಿಯಾಗಿ ಗಮನಿಸದ ರೈತರೊಬ್ಬರು, ಮಾರುಕಟ್ಟೆಗೆ ತೆರಳಿದ್ದಾರೆ. ಅಲ್ಲಿ ಮತ್ತೊಬ್ಬ ರೈತರು ಈ ಸಮಸ್ಯೆಯನ್ನು ಹೇಳಿದ್ದಾರೆ. ಆ ದೋಷವನ್ನು ಗಮನಿಸಿದ ರೈತರ ಬಳಿ ಅಂಥದ್ದೇ ಎರಡು ನೋಟುಗಳಿದ್ದವಂತೆ. ಆ ನಂತರ ಇಬ್ಬರೂ ರೈತರು ಬ್ಯಾಂಕ್ ಶಾಖೆಗೆ ತೆರಳಿ ದೋಷಪೂರಿತ ನೋಟುಗಳನ್ನು ಬದಲಿಸಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.