
ನವದೆಹಲಿ: ಹಣಕಾಸು ಬ್ಯಾಂಕ್, ಬ್ಲಡ್ ಬ್ಯಾಂಕ್, ಎದೆ ಹಾಲಿನ ಬ್ಯಾಂಕ್ ಬಗ್ಗೆ ಎಲ್ಲರಿಗೂ ಗೊತ್ತಿದೆ. ಇದೀಗ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಅತ್ಯಂತ ವಿಶಿಷ್ಟವಾದ ಬ್ಯಾಂಕ್ವೊಂದನ್ನು ತೆರೆಯುವ ಕನಸು ಕಂಡಿದ್ದಾರೆ. ಅದು- ಮಾನವರ ಮೂತ್ರ ಬ್ಯಾಂಕ್!
ಹೌದು, ಮಾನವರ ಮೂತ್ರವೇ. ರಸಗೊಬ್ಬರಕ್ಕಾಗಿ ಯೂರಿಯಾ ಬೇಕು. ಅದನ್ನು ಹಣ ತೆತ್ತು ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಆ ಅವಲಂಬನೆ ತಪ್ಪಿಸುವ ಸಲುವಾಗಿ ದೇಶಾದ್ಯಂತ ತಾಲೂಕು ಕೇಂದ್ರಗಳಲ್ಲಿ ಮೂತ್ರ ಬ್ಯಾಂಕ್ ತೆರೆಯುವ ಕನಸನ್ನು ಗಡ್ಕರಿ ಬಿಚ್ಚಿಟ್ಟಿದ್ದಾರೆ.
ರೈತರು 10 ಲೀಟರ್ ಪ್ಲಾಸ್ಟಿಕ್ ಕ್ಯಾನ್ನಲ್ಲಿ ತಮ್ಮ ಮೂತ್ರ ಸಂಗ್ರಹಿಸಿ ತಂದು ಈ ಬ್ಯಾಂಕುಗಳಲ್ಲಿ ಕೊಟ್ಟರೆ, ಲೀಟರ್ಗೆ 1 ರು.ನಂತೆ ೧೦ ರು. ಸಿಗುವ ವ್ಯವಸ್ಥೆ ಇದಾಗಿರುತ್ತದೆ. ಈ ಬಗ್ಗೆ ನಾಗಪುರದಲ್ಲಿ ಧಾಪೇವಾಡ ಗ್ರಾಮದಲ್ಲಿ ಪ್ರಯೋಗ ನಡೆಸಲಾಗುತ್ತದೆ.
ಮಾನವರ ಮೂತ್ರದಲ್ಲಿ ಸಾಕಷ್ಟು ನೈಟ್ರೋಜನ್ ಇದೆ. ಆದರೆ ಅದು ವ್ಯರ್ಥವಾಗುತ್ತಿದೆ. ತ್ಯಾಜ್ಯವನ್ನು ಸಂಪತ್ತನ್ನಾಗಿ ಪರಿವರ್ತಿಸುವುದು ನನ್ನ ಅಭಿಲಾಷೆ. ಎಂದು ಸಚಿವರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.