ಚಾಮುಂಡೇಶ್ವರಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಶಾಕ್! ಸಿಎಂ ವಿರುದ್ಧ ತೊಡೆ ತಟ್ಟಲು ಸಿದ್ದವಾಗಿದ್ದಾರೆ ಜಿ ಟಿ ದೇವೇಗೌಡ

By Suvarna Web DeskFirst Published Apr 7, 2018, 12:14 PM IST
Highlights

ಚಾಮುಂಡೇಶ್ವರಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಶಾಕ್ ಕಾದಿದೆ. ​ ಇಂದು ಮತ್ತೆ 200 ಕಾಂಗ್ರೆಸ್​ ಕಾರ್ಯಕರ್ತರು ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ.  ಚಾಮುಂಡೇಶ್ವರಿ ಕ್ಷೇತ್ರದ ಸಿದ್ದಲಿಂಗಪುರ ಗ್ರಾ.ಪಂ ವ್ಯಾಪ್ತಿಯ ಕಾರ್ಯಕರ್ತರು ಜೆಡಿಎಸ್’ಗೆ  ಸೇರ್ಪಡೆಗೊಂಡಿದ್ದಾರೆ. 

ಬೆಂಗಳೂರು (ಏ. 07): ಚಾಮುಂಡೇಶ್ವರಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಶಾಕ್ ಕಾದಿದೆ. ​ ಇಂದು ಮತ್ತೆ 200 ಕಾಂಗ್ರೆಸ್​ ಕಾರ್ಯಕರ್ತರು ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ.  ಚಾಮುಂಡೇಶ್ವರಿ ಕ್ಷೇತ್ರದ ಸಿದ್ದಲಿಂಗಪುರ ಗ್ರಾ.ಪಂ ವ್ಯಾಪ್ತಿಯ ಕಾರ್ಯಕರ್ತರು ಜೆಡಿಎಸ್’ಗೆ  ಸೇರ್ಪಡೆಗೊಂಡಿದ್ದಾರೆ. 

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ವಿರುದ್ಧ  ತೊಡೆ ತಟ್ಟಿದ್ದಾರೆ ಜೆಡಿಎಸ್​ನ ಜಿ.ಟಿ.ದೇವೇಗೌಡ.  ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋಲುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ಸೋರಿಕೆ ವಿಚಾರವಾಗಿ  ಜಿ ಟಿ ದೇವೇಗೌಡ  ಪ್ರತಿಕ್ರಿಯಿಸುತ್ತಾ,  ನಾನು ಬೆಳಿಗ್ಗೆಯಿಂದಲೂ ಜನರ ನಡುವೆ ಸೇರಿ ಪ್ರಚಾರ ಮಾಡುತ್ತಿದ್ದೇನೆ.  ಗುಪ್ತಚರ ವರದಿ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಆದರೆ ಚಾಮುಂಡೇಶ್ವರಿ ಜನ ನನ್ನನ್ನ ಗೆಲ್ಲಿಸಬೇಕು ಎಂದು ಈಗಾಗಲೇ ತೀರ್ಮಾನ ಮಾಡಿದ್ದಾರೆ.  ಸಿದ್ದರಾಮಯ್ಯ ಐದು ದಿನ ಪ್ರಚಾರ ಮಾಡಿಸಿದರೂ  ಏನೂ ಪ್ರಯೋಜನವಾಗಲಿಲ್ಲ.  ನಿನ್ನೆ ನಡೆದ ಒಕ್ಕಲಿಗರ ಸಭೆ ಸಂಪೂರ್ಣ ವಿಫಲವಾಗಿದೆ.  ಸಭೆಗೆ ಒಕ್ಕಲಿಗರು ಸೇರದೇ  ಇದ್ದದ್ದು ಕಂಡು ಸಿದ್ದರಾಮಯ್ಯ ಜಾತಿ ಸಭೆ ಅಲ್ಲ ಎಂದಿದ್ದಾರೆ.  ಸ್ಲಂ ಜನಗಳನ್ನು ಸಭೆಗೆ ಕರೆದುಕೊಂಡು ಬಂದಿದ್ದರು ಎಂದು ಹೇಳಿದ್ದಾರೆ. 

ಬೈ ಎಲೆಕ್ಷನ್’ನಲ್ಲಿ ನಾನು ಪ್ರಚಾರ ಮಾಡಿದ್ದರೆ  ಸಿದ್ದರಾಮಯ್ಯ ಸೋಲುತ್ತಿದ್ದರು.  1983 ರಿಂದ 2004 ರ ವರೆಗೆ ಜಿಟಿ.ದೇವೇಗೌಡ ಬೆನ್ನೆಲುಬಾಗಿ ನಿಂತು ಸಿದ್ದರಾಮಯ್ಯರನ್ನ ಗೆಲ್ಲಿಸಿದ್ದರು.  ಈಗ ಜಿಟಿ.ದೇವೇಗೌಡ ಅವರ ಜೊತೆ ಇಲ್ಲ, ಹೀಗಾಗಿ ಅವರ ಸೋಲು ಶತಸಿದ್ದ. ನಮ್ಮ ನಾಯಕ ಕುಮಾರಣ್ಣ ಕೂಡ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರಕ್ಕೆ ಇಳಿಯುತ್ತಾರೆ.  ಆಗ ನೀವೇ ಜನರನ್ನ ನೋಡಿ ಹೇಳುತ್ತೀರಾ ಬನ್ನಿ ಎಂದು  ಸಿಎಂ  ವಿರುದ್ಧ ಕಿಡಿಕಾರಿದ ಜಿ ಟಿ ದೇವೆಗೌಡ ಕಿಡಿಕಾರಿದ್ದಾರೆ. 
 

click me!