ಬೈ ಎಲೆಕ್ಷನ್ ಅಖಾಡದಲ್ಲಿ ಸಿಎಂ ಆಟ ಶುರು

Published : Mar 30, 2017, 09:56 PM ISTUpdated : Apr 11, 2018, 12:42 PM IST
ಬೈ ಎಲೆಕ್ಷನ್ ಅಖಾಡದಲ್ಲಿ ಸಿಎಂ ಆಟ ಶುರು

ಸಾರಾಂಶ

ನಂಜನಗೂಡು-ಗುಂಡ್ಲುಪೇಟೆ ಉಪಕದನದ ಕಾವು ದಿನದಿಂದ ದಿನಕ್ಕೇ ಏರುತ್ತಿದೆ. ಇಂದಿನಿಂದ ಸಿಎಂ ಸಿದ್ದರಾಮಯ್ಯ ಅಖಾಡಕ್ಕೆ ಇಳಿಯುತ್ತಿದ್ದಾರೆ. ಇತ್ತ ಪೈಪೋಟಿಗೆ ಬಿದ್ದವರಂತೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅಂಡ್ ಟೀಮ್ ಮೈಸೂರಲ್ಲೇ  ಜಾಂಡಾ ಹೂಡಿದೆ. ಇನ್ನು ಸಿಎಂ ಸಿದ್ಧರಾಮಯ್ಯರೊಂದಿಗೆ ಏಪ್ರಿಲ್ 7 ರವರೆಗೆ ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರಕ್ಕೆ ಸಂಪೂರ್ಣ ಸರ್ಕಾರವೇ ಶಿಫ್ಟ್ ಆಗಲಿದೆ. ೨೦ ಸಚಿವರ ಜೊತೆ ಸಿಎಂ ಒಂದು ವಾರ ಕಾಲ‌ ನಂಜನಗೂಡು ಮತ್ತು‌ ಗುಂಡ್ಲುಪೇಟೆಯಲ್ಲೇ ಬೀಡು ಬಿಡಲಿದ್ದಾರೆ.

ಮೈಸೂರು(ಮಾ.31): ನಂಜನಗೂಡು-ಗುಂಡ್ಲುಪೇಟೆ ಉಪಕದನದ ಕಾವು ದಿನದಿಂದ ದಿನಕ್ಕೇ ಏರುತ್ತಿದೆ. ಇಂದಿನಿಂದ ಸಿಎಂ ಸಿದ್ದರಾಮಯ್ಯ ಅಖಾಡಕ್ಕೆ ಇಳಿಯುತ್ತಿದ್ದಾರೆ. ಇತ್ತ ಪೈಪೋಟಿಗೆ ಬಿದ್ದವರಂತೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅಂಡ್ ಟೀಮ್ ಮೈಸೂರಲ್ಲೇ  ಜಾಂಡಾ ಹೂಡಿದೆ. ಇನ್ನು ಸಿಎಂ ಸಿದ್ಧರಾಮಯ್ಯರೊಂದಿಗೆ ಏಪ್ರಿಲ್ 7 ರವರೆಗೆ ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರಕ್ಕೆ ಸಂಪೂರ್ಣ ಸರ್ಕಾರವೇ ಶಿಫ್ಟ್ ಆಗಲಿದೆ. ೨೦ ಸಚಿವರ ಜೊತೆ ಸಿಎಂ ಒಂದು ವಾರ ಕಾಲ‌ ನಂಜನಗೂಡು ಮತ್ತು‌ ಗುಂಡ್ಲುಪೇಟೆಯಲ್ಲೇ ಬೀಡು ಬಿಡಲಿದ್ದಾರೆ.

ಉಪಸಮರದ ಕಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಟ್ರಿ! 

ನಿನ್ನೆ ರಾತ್ರಿಯೇ ಸಿಎಂ ಸಿದ್ದರಾಮಯ್ಯ ಮೈಸೂರಿಗೆ ಬಂದಾಗಿದೆ. ಇಂದಿನಿಂದ ಮುಖ್ಯಮಂತ್ರಿಗಳು ತಮ್ಮ ಸಂಪುಟ ಸಹೋದ್ಯೋಗಿಗಳ ಜೊತೆ ಪ್ರಾಚಾರ ಕಣಕ್ಕೆ ಧುಮುಕಿದರೆ ವಿಶ್ರಾಂತಿ ತೆಗೆದುಕೊಳ್ಳುವುದು ಏಪ್ರಿಲ್ 8ರ ನಂತರವೇ.  

ಇಂದು ಇಡೀ ದಿನ ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ  ತಮ್ಮ ಅಭ್ಯರ್ಥಿ ಕಳಲೇ ಕೇಶವ್ ಮೂರ್ತಿ ಪರ ಸಿಎಂ ಪ್ರಚಾರ ನಡೆಸಲಿದ್ದಾರೆ. ಗೋಳೂರು, ಚಿನ್ನದ ಹುಂಡಿ,  ವೀರದೇವನಪುರ, ಬದನವಾಳು, ದೇವನೂರು, ಚಿಕ್ಕ ಕವಲಂದೆ,  ದೊಡ್ಡ ಕವಲಂದೆ, ನೇರಳೆ, ಹೆಡತಲೆ, ಹೆಮ್ಮರಗಾಲ, ಬಡಗಯ್ಯನ ಹುಂಡಿ, ಮಲ್ಲಹಳ್ಳಿ, ಮಲ್ಲಹಳ್ಳಿ, ತರದಲೆ-ಕೂಡ್ಲಾಪುರ, ಹುಣಸನಾಳು, ಕುರಹಟ್ಟಿ, ಸಿಂಧುವಳ್ಳಿ, ಉಪ್ಪಿನಹಳ್ಳಿ, ಹೊರಳವಾಡಿ ಗ್ರಾಮಗಳಲ್ಲಿ‌  ಕ್ಯಾಂಪೇನ್ ನಡೆಸಲಿದ್ದಾರೆ.

ಇತ್ತ ಗುಂಡ್ಲುಪೇಟೆಯ ಕೈ ಅಭ್ಯರ್ಥಿ ಗೀತಾ ಮಹದೇವ್ ಪ್ರಸಾದ್ ಪರ ಬೇಗೂರು ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯಲ್ಲಿ  ಸಚಿವರಾದ  ಎಂ.ಬಿ. ಪಾಟೀಲ್ ಹಾಗೂ ಎ. ಮಂಜು ಪ್ರಚಾರ ನಡೆಸಿದರೆ, ಸಚಿವ ಡಿ.ಕೆ. ಶಿವಕುಮಾರ್ ಕೂಡ ಸಭೆ ನಡೆಸಲಿದ್ದರೆ.

ಹಾಗೇನೆ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಹರವೆ ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ..ಹಂಗಳ ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯಲ್ಲಿ  ಶೋಭಾ ಕರಂದ್ಲಾಜೆ, ಜಗದೀಶ್ ಶೆಟ್ಟರ್ ಹಾಗೂ ಕೆ.ಎಸ್. ಈಶ್ವರಪ್ಪ ಮತಬೇಟೆ ನಡೆಸಲಿದ್ದಾರೆ.

ಒಟ್ಟಾರೆ ಇಂದಿನಿಂದ ಎರಡೂ ಉಪಚುನಾವಣಾ ಕ್ಷೇತ್ರದ ಪ್ರಚಾರ ಕಾವು ಜೋರಾಗಲಿದೆ.

ವರದಿ: ಕಿರಣ್ ಹನಿಯಡ್ಕ, ಸುವರ್ಣ ನ್ಯೂಸ್.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಾಮರಾಜನಗರ: ಚಿನ್ನದ ಆಸೆಗೆ ಗುಡ್ಡವನ್ನೇ ಅಗೆದ ಕಿಡಿಗೇಡಿಗಳು!
India Latest News Live: ಪಂಜಾಬ್‌ನ 3 ಸ್ಥಳಗಳಿನ್ನು ಪವಿತ್ರ ನಗರಿ: ಮದ್ಯ, ಮಾಂಸ ಸೇಲ್‌ ನಿಷೇಧ