
ಚೆನ್ನೈ: ತಮರೈಕುಳಂ ಗ್ರಾಮದಲ್ಲಿ ಭೂಮಿ ಮಾರಾಟಕ್ಕೆ ಸಂಬಂಧಿಸಿದ ದಾಖಲೆಯೊಂದು ಬಹಿರಂಗಗೊಂಡಿದ್ದು, ತಮಿಳುನಾಡು ಮಾಜಿ ಮುಖ್ಯಮಂತ್ರಿ ಓ. ಪನ್ನೀರ್’ಸೆಲ್ವಂ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ತಮರೈಕುಳಂ ಗ್ರಾಮದಲ್ಲಿರುವ ತನ್ನ ಜಮೀನಿನಲ್ಲಿ ಓ ಪನ್ನೀರ್’ಸೆಲ್ವಂ ಬೃಹತ್ ಬಾವಿ ಕೊರೆಸಿದ್ದು, ಗ್ರಾಮಸ್ಥರ ಕೋಪಕ್ಕೆ ಕಾರಣವಾಗಿತ್ತು. ಬೃಹತ್ ಬಾವಿಯಿಂದ ಸುತ್ತುಮುತ್ತಲಿನ ಜಮೀನುಗಳಲ್ಲಿ ನೀರಿನ ಸಮಸ್ಯೆಯುಂಟಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದರು.
ತನ್ನ ವರ್ಚಸ್ಸಿಗೆ ಧಕ್ಕೆಯಾಗುವ ಹಿನ್ನೆಲೆಯಲ್ಲಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದ ಪನ್ನೀರ್’ಸೆಲ್ವಂ, ಬಾವಿಯಿರುವ ಆ ಜಾಗವನ್ನು ಸ್ಥಳೀಯರಿಗೆ ಮಾರುವುದಾಗಿ ಭರವಸೆ ನೀಡಿದ್ದರು.
ಬಾವಿಯಿರುವ ಆ ಜಾಗದೊಂದಿಗೆ, ಅದಕ್ಕೆ ಹೊಂದಿಕೊಂಡಿರುವ 40 ಎಕರೆ ತೆಂಗಿನ ತೋಟವನ್ನೂ ಖರೀದಿಸಬೇಕೆಂದೂ, ಪ್ರತಿ ಎಕರೆಗೆ ರೂ. 25 ಲಕ್ಷವನ್ನು ನಿಗದಿ ಮಾಡಿ 90 ದಿನಗಳೊಳಗೆ ಹಣ ಪಾವತಿಸಬೇಕೆಂದೂ, ಆ ಸಂದರ್ಭದಲ್ಲಿ ಪನ್ನೀರ್’ಸೆಲ್ವಂ ಶರತ್ತು ವಿಧಿಸಿದ್ದರು ಎನ್ನಲಾಗಿದೆ.
ಗ್ರಾಮಸ್ಥರು ಆ ಶರತ್ತನ್ನು ಒಪ್ಪಿಕೊಂಡು, ಹಣ ಸಂಗ್ರಹಿಸುವ ಕೆಲಸದಲ್ಲಿ ತೊಡಗಿದ್ದರು ಎನ್ನಲಾಗಿದೆ. ಆದರೆ ಈ ಮಧ್ಯೆ ಪನ್ನೀರ್’ಸೆಲ್ವಂ ಪತ್ನಿ ವಿಜಯಲಕ್ಷ್ಮಿ, ಆ ಜಮೀನನ್ನು ಸೆಲ್ವರಾಜ್ ಎಂಬವರಿಗೆ ಮಾರಾಟ ಮಾಡಿರುವ ದಾಖಲೆ ಹೊರಬಿದ್ದಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಪನ್ನೀರ್’ಸೆಲ್ವಂ ತಮಗೆ ವಂಚಿಸಿದ್ದಾರೆಂದು ಜನರು ಪ್ರತಿಭಟನೆ ನಡೆಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.