'ಮೊದಲೇ ಕಾಂಗ್ರೆಸಿಗರನ್ನು ಎಚ್ಚರಿಸಿದ್ದೆ, ನನ್ನನ್ನೇ ಅಮಾನತ್ತು ಮಾಡಿದ್ರು, ಈಗ ಬೇಕಾದ್ನಾ'

Published : Jul 07, 2019, 12:16 PM ISTUpdated : Jul 07, 2019, 12:19 PM IST
'ಮೊದಲೇ ಕಾಂಗ್ರೆಸಿಗರನ್ನು ಎಚ್ಚರಿಸಿದ್ದೆ, ನನ್ನನ್ನೇ ಅಮಾನತ್ತು ಮಾಡಿದ್ರು, ಈಗ ಬೇಕಾದ್ನಾ'

ಸಾರಾಂಶ

ನಾನು ಈ ಮೊದಲೇ ಕಾಂಗ್ರೆಸಿಗರನ್ನು ಎಚ್ಚರಿಸಿದ್ದೆ| ನನ್ನ ಮೇಲೆಯೇ ಕ್ರಮ ಕೈಗೊಂಡು ಅಮಾನತ್ತು ಮಾಡಿದ್ರು| ಇವಾಗ ನಾನು ಅವರಿಗೆ ಬೇಕಾದ್ನಾ?

ಬೆಂಗಳೂರು[ಜು.07]: ಕರ್ನಾಟಕದಲ್ಲಿ ಶಾಸಕರ ರಾಜೀನಾಮೆ ವಿಚಾರ ರಾಜಕೀಯ ವಲಯದಲ್ಲಿ ಬಹುದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ. ಈ ಸಾಮೂಹಿಕ ರಾಜೀನಾಮೆಯಿಂದ ದೋಸ್ತಿ ಸರ್ಕಾರ ಪತನಗೊಳ್ಳುವ ಲಕ್ಷಣಗಳು ದಟ್ಟವಾಗಿದ್ದು, ರಾಜ್ಯ ಬಿಜೆಪಿ ಹಿಂದೆಂದಿಗಿಂತಲೂ ಫುಲ್ ಆ್ಯಕ್ಟಿವ್ ಆಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಕಾಂಗ್ರೆಸ್ ಪಕ್ಷದಿಂದ ಅಮಾನತ್ತುಗೊಂಡ ಮಾಜಿ ಸಚಿವ ರೋಶನ್ ಬೇಗ್ ರಾಜೀನಾಮೆ ವಿಚಾರಜಕ್ಕೆ ಸಂಬಂಧಿಸಿದಂತೆ ಕೈ ನಾಯಕರ ವಿರುದ್ಧ ಕಿಡಿ ಕಾರಿದ್ದಾರೆ.

ಹೌದು ಶಾಸಕರ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿರುವ ರೋಶನ್ ಬೇಗ್ 'ನಾನು ಈ ಮೊದಲೇ ಕಾಂಗ್ರೆಸಿಗರನ್ನು ಎಚ್ಚರಿಸಿದ್ದೆ. ಆದರೆ ನನ್ನ ಮೇಲೆಯೇ ಕ್ರಮ ಕೈಗೊಂಡು ಅಮಾನತ್ತು ಮಾಡಿದ್ರು. ಈಗ ರೋಶನ್ ಬೇಗ್ ಅವರಿಗೆ ಬೇಕಾಗಿದ್ದಾನಾ? ಇಷ್ಟೆಲ್ಲಾ ನಡೆದ ಬಳಿಕ ನನಗೆ ಕರೆ ಮೇಲೆ ಕರೆ ಮಾಡ್ತಾರೆ. ನಾನು ನನಗೆ ಯಾವುದು ಬೇಡಾ ಅಂತ ಕೈ ಮುಗಿದಿದ್ದೇನೆ' ಎಂದಿದ್ದಾರೆ. 

ತಮ್ಮ ಮುಂದಿನ ನಡೆ ಕುರಿತಾಗಿ ಮಾತನಾಡಿದ ರೋಶನ್ ಬೇಗ್ 'ಇಂದು ಸಂಜೆ ಕಾರ್ಯಕ್ರಮ ಇದೆ. ಅದನ್ನು ಮುಗಿಸಿ ನಂತರ ನನ್ನ ತೀರ್ಮಾನ ಹೇಳ್ತೀನಿ. ನಾನು ಯಾವುದೂ ಸಹ ಮುಚ್ಚಿಟ್ಟು ಮಾಡೋದಿಲ್ಲ ನಿಮಗೆಲ್ಲ ಹೇಳಿಯೇ ನನ್ನ ಮುಂದಿನ ನಡೆ ತಿಳಿಸುತ್ತೇನೆ' ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಪಾರ್ಕ್‌ನಲ್ಲಿ ವಾಕಿಂಗ್ ಹೋದಾಗ ತುಪುಕ್ ಎಂದು ಉಗುಳಿದ ವೃದ್ಧನಿಗೆ 26 ಸಾವಿರ ರೂ ದಂಡ