ರಾಮಲಿಂಗಾ ರೆಡ್ಡಿ ರಾಜೀನಾಮೆ: ಖಂಡ್ರೆಗೆ ವೇಣುಗೋಪಾಲ್ ಕಜ್ಜಾಯ!

Published : Jul 07, 2019, 11:30 AM ISTUpdated : Jul 07, 2019, 12:13 PM IST
ರಾಮಲಿಂಗಾ ರೆಡ್ಡಿ ರಾಜೀನಾಮೆ: ಖಂಡ್ರೆಗೆ ವೇಣುಗೋಪಾಲ್ ಕಜ್ಜಾಯ!

ಸಾರಾಂಶ

ರಾಮಲಿಂಗಾ ರೆಡ್ಡಿ ರಾಜೀನಾಮೆ| ಈಶ್ವರ್ ಖಂಡ್ರೆಗೆ ವೇಣುಗೋಪಾಲ್ ಫುಲ್ ಕ್ಲಾಸ್ | ಬೀದರ್ ಹೋಗುವಾಗ ಪ್ರೋಗ್ರಾಂ ಕ್ಯಾನ್ಸಲ್ ಮಾಡಿದ್ದೀರಾ?

ಬೆಂಗಳೂರು[ಜು.07]: ಈವರೆಗೆ ಯಾರೂ ಊಹಿಸಲಾಗದ ಮೈತ್ರಿ ಶಾಸಕರು ರಾಜೀನಾಮೆ ನೀಡಿರುವುದು ರಾಜ್ಯ ರಾಜಕೀಯದಲ್ಲಿ ಸುನಾಮಿಯನ್ನು ಎಬ್ಬಿಸಿದೆ. ಈ ಹಿಂದೆ ರಾಜೀನಾಮೆ ವಿಚಾರ ಸದ್ದು ಮಾಡುತ್ತಿದ್ದರೂ ಎಲ್ಲವೂ ಹುಸಿಯಾಗಿತ್ತು. ಆದರೀಗ ಈ ಸುದ್ದಿ ವದಂತಿಯಲ್ಲ ವಾಸ್ತವ ಎನ್ನುವಂತೆ ರಾಜಕಾರಣಿಗಳ ರಾಜೀನಾಮೆ ಪರ್ವ ದೋಸ್ತಿ ಸರ್ಕಾರ ಪತನಗೊಳ್ಳುವ ಅನುಮಾನವನ್ನು ದಟ್ಟವಾಗಿಸಿದೆ. ಈ ಎಲ್ಲಾ ರಾಜಕೀಯ ಹೈಡ್ರಾಮಾದ ನಡುವೆ ಇದೀಗ ರಾಮಲಿಂಗಾ ರೆಡ್ಡಿ ರಾಜೀನಾಮೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಉಸ್ತುವಾರಿ ಕೆ. ಸಿ. ವೇಣುಗೋಪಾಲ್, ಈಶ್ವರ್ ಖಂಡ್ರೆಗೆ ಬಿಸಿ ಬಿಸಿ ಕಜ್ಜಾಯ ನೀಡಿದ್ದಾರೆ.

ಹೌದು ಬಿಟಿಎಂ ಲೇಔಟ್ ಕಾಂಗ್ರೆಸ್ ಶಾಸಕ ರಾಮಲಿಂಗಾ ರೆಡ್ಡಿ ರಾಜೀನಾಮೆ ನೀಡಿರುವುದು ದೋಸ್ತಿ ಸರ್ಕಾರಕ್ಕೆ ಬಹುದೊಡ್ಡ ಶಾಕ್ ನೀಡಿದೆ. ಹೀಗಿದ್ದರೂ ನಿನ್ನೆ ಶನಿವಾರ ಈಶ್ವರ್ ಖಂಡ್ರೆ ರಾಮಲಿಂಗಾ ರೆಡ್ಡಿಯನ್ನು ಭೇಟಿಯಾಗಿ ರಾಜೀನಾಮೆ ನೀಡದಂತೆ ಮನವೊಲಿಸಲು ಯತ್ನಿಸಿದ್ದರು. ಆದರೆ ಖಂಡ್ರೆ ಮಾತಿಗೆ ಜಗ್ಗದ ರಾಮಲಿಂಗಾ ರೆಡ್ಡಿ ರಾಜೀನಾಮೆ ನೀಡಿದ್ದರು. ಸದ್ಯ ಇದೇ ವಿಚಾರದ ಮುಂದುವರೆದ ಭಾಗವಾಗಿ ವೇಣುಗೋಪಾಲ್ ಈಶ್ವರ್ ಖಂಡ್ರೆಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಖಂಡ್ರೆ ಬಳಿ ಮಾತನಾಡಿರುವ ವೇಣುಗೋಪಾಲ್ ’ರಾಮಲಿಂಗಾ ರೆಡ್ಡಿ ರಾಜೀನಾಮೆ ನೀಡುವ ವಿಚಾರ ತಿಳಿದಿದ್ದರೂ ಕೊನೆಯ ಕ್ಷಣದವರೆಗೆ ಯಾಕೆ ಸುಮ್ಮನಾದ್ರಿ? ಬೀದರ್‌ ಕಾರ್ಯಕ್ರಮ ರದ್ದುಗೊಳಿಸಿ ಮೊನ್ನೆ ರಾತ್ರಿಯೇ ರಾಮಲಿಂಗಾ ರೆಡ್ಡಿ ಮನವೊಲಿಸಬಹುದಿತ್ತಲ್ಲವೇ? ರಾಜೀನಾಮೆ ನೀಡುವ ದಿನ ಬೆಳಿಗ್ಗೆ ಹೋಗಿ ಭೇಟಿ ಮಾಡಿದ್ದೀರಿ, ಇದರಿಂದ ಏನು ಪ್ರಯೋಜನ? ದಿನೇಶ್ ವಿದೇಶ ಪ್ರವಾಸದಲ್ಲಿದ್ದಾರೆಂದು ಎಂದಾಗ ಕೊಂಚ ಬೇಗ ಎಚ್ಚೆತ್ತುಕೊಳ್ಳಬೇಕಿತ್ತು' ಎಂದು ಕಿಡಿ ಕಾರಿದ್ದಾರೆನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Ramanagara: ರಾಮನೂರಿನ ರಾಮೋತ್ಸವದಲ್ಲಿ 450ಕ್ಕೂ ಹೆಚ್ಚು ಗ್ರಾಮದೇವತೆಗಳ ಅಪೂರ್ವ ಸಂಗಮ
ಊಟ ಕೊಡುವ ನೆಪದಲ್ಲಿ ರೇ* ವಿಡಿಯೋ ವೈರಲ್ : ಅತ್ಯಾ*ಚಾರಿಗಳಿಗೆ ಮೀಸೆ, ತಲೆ ಬೋಳಿಸಿ ಥಳಿಸಿದ ಗ್ರಾಮಸ್ಥರು