
ಹಾಸನ (ಅ.24): ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹಾಸನದ ಅಧಿದೇವತೆ ಹಾಸನಾಂಬೆ ದರ್ಶನ ಪಡೆದರು.
ಬಳಿಕ ಮಾತನಾಡಿದ ಮಾಜಿ ಸಿ ಎಂ ಕುಮಾರಸ್ವಾಮಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು. ಅಪ್ಪ ಮಕ್ಕಳ ರಾಜಕೀಯ ಮಾಡುತ್ತಾ ಇರೋದು ಯಾರು ಎಂದು ಟೀಕಿಸಿದರು.
ಇನ್ನೂ ವಿಧಾನಸೌಧದ ಬಳಿ ಸಿಕ್ಕ ರೂ. ೨ ಕೋಟಿ ಹಣ ಯಾರದ್ದು ಅನ್ನುವುದು ಯಡಿಯೂರಪ್ಪನವರಿಗೆ ಗೊತ್ತಿದೆ. ಯಾರಿಂದ ಯಾರಿಗೆ ತಲುಪಿಸಲು ಹೋಗುತ್ತಿದ್ದ ಹಣ ಎಂಬ ಮಾಹಿತಿ ಅವರ ಬಳಿ ಇದೆ. ಅದನ್ನು ಬಹಿರಂಗಪಡಿಸಬೇಕು ಎಂದರು. ಸಾರಾಯಿ ನಿಷೇಧ ಮಾಡಿದ್ದು, ಬಿಜೆಪಿಯಲ್ಲ, ಜೆಡಿಎಸ್. ರಾಜ್ಯದ ಹೆಸರು ಕುಲಗೆಡಿಸಿದ್ದು ಬಿಜೆಪಿ. ಪ್ಯಾಕೇಜ್ ಪದ್ದತಿ ಭ್ರಷ್ಟಾಚಾರ ಮಾಡಿತ್ತು. ಮಹದಾಯಿ ವಿಚಾರದಲ್ಲಿ ಬಿಜೆಪಿ ಡ್ರಾಮಾ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.