
ಮಂಡ್ಯ (ನ.07): ಮರದಿಂದ ಬಿದ್ದು ಅನಾಥವಾದ ನೂರಾರು ಪಕ್ಷಿ ಮರಿಗಳನ್ನು ಅರಣ್ಯ ಇಲಾಖೆ ರಕ್ಷಿಸಿದೆ. ರಕ್ಷಣೆ ಮಾಡಿದ್ದ ನೂರಾರು ಮರಿ ಪಕ್ಷಿಗಳನ್ನು ರಂಗನತಿಟ್ಟು ಪಕ್ಷಿಧಾಮಕ್ಕೆ ರವಾನೆ ಮಾಡಲಾಗಿದೆ.
ನಿನ್ನೆ ಕೆ.ಆರ್.ಪೇಟೆ ಪಟ್ಟಣದ ಹೇಮಾವತಿ ಕ್ವಾಟರ್ಸ್'ನಲ್ಲಿ ಮರ ಕಡಿದಿದ್ದರಿಂದ ನೂರಾರು ಪಕ್ಷಿಗಳು ಕೆಳಗಡೆ ಬಿದ್ದು ಅನಾಥವಾಗಿದ್ದವು. ಕೆಳಗೆ ಬಿದ್ದ ನೂರಾರು ಪಕ್ಷಿಗಳನ್ನು ಕೆ.ಆರ್.ಪೇಟೆಯ ಅರಣ್ಯಾಧಿಕಾರಿಗಳು ಪಂಜರ ಮತ್ತು ರಟ್ಟಿನ ಡಬ್ಬದಲ್ಲಿಟ್ಟು ಪಕ್ಷಿಧಾಮಕ್ಕೆ ರವಾನಿಸಿದ್ದಾರೆ.
ಆಪರೇಷನ್ ಅಮ್ಮ ಹೆಸರಲ್ಲಿ ಮರಿ ಪಕ್ಷಿಗಳ ರಕ್ಷಣೆಗೆ ಮುಂದಾದ ಅರಣ್ಯ ಇಲಾಖೆ ಕ್ರಮಕ್ಕೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.