
ವಿಜಯಪುರ(ನ.11): ಕೇಂದ್ರ ಸರ್ಕಾರ ಬ್ಯಾನ್ ಮಾಡಿದ ನೋಟಿನ ಬಿಸಿ ವಿದೇಶಿಗರಿಗೂ ತಟ್ಟಿದೆ. ವಿಜಯಪುರ ಜಿಲ್ಲೆಗೆ ಆಗಮಿಸಿದ್ದ ಇಟಲಿ ದೇಶದ ಪ್ರಜೆಗಳು ಕೂಡ 100 ಹಾಗೂ 50 ರೂ ಮುಖ ಬೆಲೆ ನೋಟುಗಳಿಲ್ಲದೇ ಒಪ್ಪತ್ತು ಕೂಳಿಗೂ ಪರದಾಡಿದ್ದಾರೆ. ವಿಶ್ವ ಪ್ರಸಿದ್ಧ ಗೋಳಗುಮ್ಮಟ ನೋಡಲು ಆಗಮಿ ಸಿದ್ದ ಇಟಲಿ ದೇಶದ ಮೂವರು ಪ್ರಜೆಗಳು, ಸ್ಟೇಷನ್ ರಸ್ತೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೋಟು ವಿನಿಮಯಕ್ಕೆ ಆಗಮಿಸಿದ್ದರು. ಆದರೆ ಚಿಲ್ಲರೆ ಸಿಗದೆ ಹೈರಾಣಾದ ಇಟಲಿ ಮಹಿಳೆಯರಿಗೆ ಸ್ಥಳೀಯರ ಸಹಾಯದಿಂದ ಕೊನೆಗೂ 4000 ರೂಪಾಯಿ ವಿನಿಮಯ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು. 500-1000 ಮುಖ ಬೆಲೆ ಹಳೆ ನೋಟನ್ನು ಪಡೆದ ಬ್ಯಾಂ ಕ್ ವ್ಯವಸ್ಥಾಪಕರು 20 ರೂ. ಮುಖ ಬೆಲೆ ನೋಟಿನ ಬಂಡಲ್ ನೀಡಿದರು. ಬದುಕಿದೆಯಾ ಬಡ ಜೀವವೇ ಎಂದು ನೇರವಾಗಿ ಹೊಟೇಲ್'ಗೆ ಹೋಗಿ ಭೋಜನ ಸವಿದು ನಿಟ್ಟುಸಿರು ಬಿಟ್ಟರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.