
ನವದೆಹಲಿ (ಆ.21): ಕತ್ತಲಾದ ಮೇಲೆ ಪಾಂಡಿಚೆರಿ ಮಹಿಳೆಯರಿಗೆಷ್ಟು ಸುರಕ್ಷಿತ ಎಂದು ಪರೀಕ್ಷಿಸಲು ಪಾಂಡಿಚೆರಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಬೈಕಿನಲ್ಲಿ ನೈಟ್ ರೌಂಡ್ಸ್ ಹೋಗಿದ್ದಾರೆ. ಇನ್ನೊಬ್ಬ ಮಹಿಳೆಯೊಂದಿಗೆ ನಗರದ ರಸ್ತೆಗಳಲ್ಲಿ ಬೈಕಿನಲ್ಲಿ ಸುತ್ತು ಹಾಕಿದ್ದು ತಮ್ಮ ಗುರುತು ಸಿಗಬಾರದೆಂದು ಮುಖಕ್ಕೆ ದುಪ್ಪಟ್ಟಾವನ್ನು ಸುತ್ತಿಕೊಂಡಿದ್ದಾರೆ.
ಪಾಂಡಿಚೆರಿ ಮಹಿಳೆಯರಿಗೆ ಸುರಕ್ಷಿತವಾಗಿದೆ. ಇನ್ನಷ್ಟು ಅಭಿವೃದ್ಧಿಯಾಗಬೇಕಿದೆ ಎಂದು ಟ್ವೀಟಿಸಿದ್ದಾರೆ. ಕಿರಣ್ ಬೇಡಿಯವರ ಈ ಕೆಲಸವನ್ನು ಸಾಕಷ್ಟು ಜನ ಪ್ರಶಂಸಿದ್ದರೆ ಇನ್ನು ಕೆಲವರು ಕಾನೂನನ್ನು ಉಲ್ಲಂಘಿಸಿದ್ದೀರಿ ಎಂದು ಹೇಳಿದ್ದಾರೆ.
ಬೈಕ್’ನಲ್ಲಿರುವ ಇವರಿಬ್ಬರೂ ಹೆಲ್ಮೇಟ್ ಧರಿಸಿಲ್ಲ. ಪಾಂಡಿಚೇರಿಯಲ್ಲಿ ದ್ವಿಚಕ್ರ ವಾಹನ ಹಿಂಬದಿ ಸವಾರರಿಗೆ ಹೆಲ್ಮೇಟ್ ಕಡ್ಡಾಯವೇನಿಲ್ಲ. ಆದರೆ ಮೇ 1 ರಿಂದ ಹೆಲ್ಮೇಟ್ ಧರಿಸುವುದನ್ನು ಮುಖ್ಯಮಂತ್ರಿ ವಿ.ನಾರಾಯಣಸಾಮಿ ಕಡ್ಡಾಯಗೊಳಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.