ಅರುಣ್ ಜೇಟ್ಲಿ ದಾಖಲಾಗಿರುವ ಏಮ್ಸ್’ನಲ್ಲಿ ಅಗ್ನಿ ಅವಘಢ!

Published : Aug 17, 2019, 06:39 PM ISTUpdated : Aug 17, 2019, 06:42 PM IST
ಅರುಣ್ ಜೇಟ್ಲಿ ದಾಖಲಾಗಿರುವ ಏಮ್ಸ್’ನಲ್ಲಿ ಅಗ್ನಿ ಅವಘಢ!

ಸಾರಾಂಶ

ಅರುಣ್ ಜೇಟ್ಲಿ ದಾಖಲಾಗಿರುವ ಏಮ್ಸ್’ನಲ್ಲಿ ಅಗ್ನಿ ಅವಘಢ| ಆಸ್ಪತ್ರೆಯ ಮೊದಲ ಮಹಡಿಯಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ| ತುರ್ತು ನಿಗಾ ಘಟಕ ಹಾಗೂ ವೈದ್ಯರ ಕೋಣೆಗಳಿಗೆ ಹಾನಿ| ಆಸ್ಪತ್ರೆಯ ಮತ್ತೊಂದು ಮಹಡಿಯಲ್ಲಿ ಅರುಣ್ ಜೇಟ್ಲಿ ಸುರಕ್ಷಿತ| ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿರುವ 34 ಅಗ್ನಿಶಾಮಕ ವಾಹನಗಳು| 

ನವದೆಹಲಿ(ಆ.18): ಮಾಜಿ ವಿತ್ತ ಸಚಿವ, ಬಿಜೆಪಿ ಹಿರಿಯ ನಾಯಕ ಅರುಣ್ ಜೇಟ್ಲಿ ದಾಖಲಾಗಿರುವ ಏಮ್ಸ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿದೆ.

ಆಸ್ಪತ್ರೆಯ ಮೊದಲ ಮಹಡಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ತುರ್ತು ನಿಗಾ ಘಟಕ ಹಾಗೂ ವೈದ್ಯರ ಕೋಣೆಗಳಿಗೆ ಹಾನಿಯಾಗಿದೆ ಎನ್ನಲಾಗಿದೆ.

ಕಿಡ್ನಿ ಸಮಸ್ಯೆಯಿಂದ ಬಳಳುತ್ತಿರುವ ಅರುಣ್ ಜೇಟ್ಲಿ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆದರೆ ಅವರು ಆಸ್ಪತ್ರೆಯ ಕಟ್ಟಡದ ಮತ್ತೊಂದು ಮಹಡಿಯಲ್ಲಿ ಸುರಕ್ಷಿತವಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ಖಚಿತಪಡಿಸಿವೆ.

ಸದ್ಯ ಸ್ಥಳಕ್ಕೆ 34 ಅಗ್ನಿಶಾಮಕ ದಳ ವಾಹನಗಳು ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಉತ್ತರಕನ್ನಡ: ನೀರು ಕೇಳುವ ನೆಪದಲ್ಲಿ ವೃದ್ಧೆಯ ಚಿನ್ನದ ಸರ ಎಗರಿಸಿ ಖದೀಮರು ಎಸ್ಕೇಪ್!
ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿಕೊಂಡ ಸೋನಿಯಾ ಗಾಂಧಿಗೆ ಕೇರಳ ಚುನಾವಣೆಯಲ್ಲಿ ಸೋಲು