
ಕೋಲ್ಕತ್ತಾ[ಆ.17]: ಪಶ್ಚಿಮ ಬಂಗಾಳದಲ್ಲಿ ನಡೆದ ಘಟನೆಯೊಂದು ಬಹುತೇಕರನ್ನು ಬೆಚ್ಚಿ ಬೀಳಿಸಿದೆ. ಡಾರ್ಜಿಲಿಂಗ್ ನಲ್ಲಿ ಮಹಿಳೆಯೊಬ್ಬರ ಮೇಲೆ ಚಿರತೆಯೊಂದು ದಾಳಿ ನಡೆಸಿದ್ದು, ಇದನ್ನು ಕಂಡ ನಾಯಿ ಆಕೆಯ ರಕ್ಷಣೆಗೆ ಧಾವಿಸಿದೆ. ತನ್ನ ಪ್ರಾಣವನ್ನು ಲೆಕ್ಕಿಸದೆ ಚಿರತೆ ಮೇಲೆರಗಿದ ನಾಯಿ ಅನ್ನ ಹಾಕಿ ಸಾಕಿದಾಕೆಯನ್ನು ರಕ್ಷಿಸಿದೆ.
ಆಗಸ್ಟ್ 14ರಂದು ಈ ಘಟನೆ ನಡೆದಿದ್ದು, ಅರುಣಾ ಲೋಮಾ ಎಂಬಾಕೆ ಕೆಳ ಅಂತಸ್ತಿನ್ನು ಒರಸುತ್ತಿದ್ದಳು. ಈ ವೇಳೆ ಚಿರತೆಯೊಂದು ಏಕಾಏಕಿ ಆಕೆ ಮೇಲೆ ದಾಳಿ ನಡೆಸಿದೆ. ಅನ್ನ ಹಾಕಿ ಸಾಕಿದ ಒಡತಿ ಅಪಾಯದಲ್ಲಿರುವುದನ್ನು ಕಂಡ ನಾಯಿ 'ಟೈಗರ್' ಕೂಡಲೇ ಚಿರತೆ ಮೇಲೆರಗಿ ದಾಳಿ ನಡೆಸಿ, ಚಿರತೆಯನ್ನು ಓಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.