ಗೋಶಾಲೆಯ ಬಣವೆಗೆ ಬೆಂಕಿ : 50 ಲೋಡ್ ಮೇವು ಆಹುತಿ

Published : Nov 30, 2017, 12:32 PM ISTUpdated : Apr 11, 2018, 12:35 PM IST
ಗೋಶಾಲೆಯ ಬಣವೆಗೆ ಬೆಂಕಿ  : 50 ಲೋಡ್ ಮೇವು ಆಹುತಿ

ಸಾರಾಂಶ

ಕಳೆದ ತಡರಾತ್ರಿ ದುಷ್ಕರ್ಮಿಗಳು ಜೋಳದ ಬಣವೆಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಇಲ್ಲಿನ ಗೋಶಾಲೆಗೂ  ಹಾಗೂ ಕೆಲ ಸ್ಥಳೀಯ ಮುಖಂಡರಿಗೆ ಜಮೀನು ವಿವಾದವಿದ್ದು, ಇದರಿಂದ ದುಷ್ಕೃತ್ಯ ಎಸಗಿರಬಹುದು  ಎನ್ನಲಾಗಿದೆ. 

ದೊಡ್ಡಬಳ್ಳಾಪುರ(ನ.30) ಗೋಶಾಲೆಯ ಜೋಳದ ಬಣವೆಗೆ ದುಷ್ಕರ್ಮಿಗಳು  ಬೆಂಕಿ ಹಚ್ಚಿದ ಪರಿಣಾಮ 50ಕ್ಕೂ ಅಧಿಕ ಲೋಡ್ ಮೇವು ಬೆಂಕಿಗೆ ಆಹುತಿಯಾದ ಘಟನೆ ದೊಡ್ಡಬಳ್ಳಾಪುರದ  ಘಾಟಿ ಸುಬ್ರಮಣ್ಯ ಸಮೀಪದ ಗೋಶಾಲೆಯಲ್ಲಿ  ಘಟನೆ ನಡೆದಿದೆ. ಈ ಗೋಶಾಲೆಯಲ್ಲಿ ಸಾವಿರಾರು ಹಸುಗಳನ್ನು ಆರೈಕೆ ಮಾಡುತ್ತಿದ್ದು, ಇತ್ತೀಚೆಗೆ ಇಲ್ಲಿ 5 ಲಕ್ಷ ಮೌಲ್ಯದ ಜೋಳದ ಮೇವನ್ನು  ತರಿಸಲಾಗಿತ್ತು. 

ಆದರೆ ಕಳೆದ ತಡರಾತ್ರಿ ದುಷ್ಕರ್ಮಿಗಳು ಜೋಳದ ಬಣವೆಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಇಲ್ಲಿನ ಗೋಶಾಲೆಗೂ  ಹಾಗೂ ಕೆಲ ಸ್ಥಳೀಯ ಮುಖಂಡರಿಗೆ ಜಮೀನು ವಿವಾದವಿದ್ದು, ಇದರಿಂದ ದುಷ್ಕೃತ್ಯ ಎಸಗಿರಬಹುದು  ಎನ್ನಲಾಗಿದೆ.  ಕಳೆದ ಮೂರು ದಿನಗಳ ಹಿಂದೆ ಬಸವರಾಜ್ ಡಿಕ್ರಾಸ್ ಎಂಬುವವರು ಗೋಶಾಲೆಯನ್ನ ನಡೆಸಲು ಬಿಡೋದಿಲ್ಲ ಎಂದು ಹೇಳಿದ್ದರು. ಹೀಗಾಗಿ ಜೋಳದ ಬಣವೆಗೆ ಬೆಂಕಿ ಹಚ್ಚಿ ನಾಶ ಮಾಡಿದ್ದಾರೆ ಎಂದು ಗೋಶಾಲ ನಿರ್ವಾಹಕ  ಜೀವನ್ ಕುಮಾರ್ ಆರೋಪಿಸಿದ್ದಾರೆ. ಇನ್ನು ಈ ಸಂಬಂಧ ಸ್ಥಳಕ್ಕೆ ಪೊಲೀಸರು  ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಾಲೀಕನ ನಿಧನಕ್ಕೆ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ ಶ್ವಾನ; ವಿಡಿಯೋ ನೋಡಿ ಭಾವುಕರಾದ ಜನರು
ವಿದೇಶದಲ್ಲಿ ಇರುವವರಿಗೂ ಗ್ಯಾರಂಟಿ ಲಾಭ ಬಗ್ಗೆ ಸಿಎಲ್ಪೀಲಿ ಪ್ರಸ್ತಾಪ: ಸಚಿವ ಮಧು ಬಂಗಾರಪ್ಪ