ಗಾಯಗೊಂಡಿರೋ ದರ್ಶನ್ ನತ್ತ ಕಣ್ಣೆತ್ತಿ ನೋಡದ ದಿನಕರ್: ಯಾಕೆ?

Published : Sep 27, 2018, 11:47 AM ISTUpdated : Sep 27, 2018, 01:16 PM IST
ಗಾಯಗೊಂಡಿರೋ ದರ್ಶನ್ ನತ್ತ ಕಣ್ಣೆತ್ತಿ ನೋಡದ ದಿನಕರ್: ಯಾಕೆ?

ಸಾರಾಂಶ

 ಕಾರು ಅಪಘಾತದಲ್ಲಿ ಕೈ‌ ಮುರಿದುಕೊಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್  ಅವರನ್ನು ಕನ್ನಡ ಚಿತ್ರರಂಗದ ಹಲವು ತಾರೆಯರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಆದರೆ, ನಿರ್ದೇಶಕ ದಿನಕರ್ ತೂಗುದೀಪ ಅವರು ಒಡಹುಟ್ಟಿದ ಸಹೋದರನ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಹೋಗಲೇ ಇಲ್ಲ. ಏನು ಇದರ ಹಿಂದಿನ ಕಾರಣ? ಯಾಕೆ ಸಹೋದರನ ಅರೋಗ್ಯ ವಿಚಾರಿಸಿಲ್ಲ? ಇಲ್ಲಿದೆ ಕಾಣ.  

ಬೆಂಗಳೂರು, [ಸೆ.27]: ಕಾರು ಅಪಘಾತದಲ್ಲಿ ಕೈ‌ ಮುರಿದುಕೊಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್  ಅವರನ್ನು ಕನ್ನಡ ಚಿತ್ರರಂಗದ ಹಲವು ತಾರೆಯರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

 ಸಚಿವ ಜಿ.ಟಿ. ದೇವೇಗೌಡ, ಸಂಸದ ಪ್ರತಾಪ್ ಸಿಂಗ್ ಸೇರಿದಂತೆ ಹಲವು ಗಣ್ಯರು ಮೈಸೂರಿನ ಕೋಲಂಬಿಯಾ ಆಸ್ಪತ್ರೆಗೆ ಭೇಟಿ ನೀಡಿ ದರ್ಶನ್ ಅವರ ಆರೋಗ್ಯ ವಿಚಾರಿಸಿದ್ದರು. ಅಷ್ಟೇ ಅಲ್ಲದೇ ಸಾವಿರಾರು ಅಭಿಮಾನಿಗಳು ದರ್ಶನ್ ಅವರನ್ನು ನೋಡಲು ಆಸ್ಪತ್ರೆಗೆ ಬಂದಿದ್ದರು.

ದರ್ಶನ್ ಆರೋಗ್ಯ ಸ್ಥಿತಿ ಬಗ್ಗೆ ವಿಜಯಲಕ್ಷ್ಮೀ ಪ್ರತಿಕ್ರಿಯೆ

ಆದರೆ,  ನಿರ್ದೇಶಕ ದಿನಕರ್ ತೂಗುದೀಪ ಅವರು ಒಡಹುಟ್ಟಿದ ಸಹೋದರನ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಹೋಗಲೇ ಇಲ್ಲ. ಇದಕ್ಕೆ ಕೆಲವರು ನಾನಾ ಅರ್ಥಗಳನ್ನು ಕಲ್ಪಿಸಿದ್ದರು.  ದರ್ಶನ್ ಅವರ ಭೇಟಿಯಾಗದಿದ್ದಕ್ಕೆ ಬೇರೆ ಕಾರಣವೇ ಇದೆ. 

ಆ್ಯಕ್ಸಿಡೆಂಟ್ ಬಳಿಕ ಮಾಯಾವಾಗಿದ್ದ ದರ್ಶನ್ ಕಾರ್ ಪತ್ತೆ: ಎಲ್ಲಿತ್ತು?

ಕಾರಣ ಏನು?
ದಿನಕರ್ ತೂಗುದೀಪ ಕಳೆದ ಒಂದು ವಾರದಿಂದ ವೈರಲ್ ಫೀವರ್ ನಿಂದ ಬಳಲುತ್ತಿದ್ದಾರೆ. ಇದರಿಂದ ಕಾರು ಅಪಘಾತದಲ್ಲಿ ಕೈ‌ ಮುರಿದುಕೊಂಡ ದರ್ಶನ್ ನೋಡಲು ದಿನಕರ್ ಆಸ್ಪತ್ರೆಯ ಬಳಿ ಕಾಣಿಸಿಕೊಳ್ಳಲಿಲ್ಲ. ಆದರೆ, ಪ್ರತಿ‌ನಿತ್ಯ‌ ದರ್ಶನ್ ಜೊತೆಯಲ್ಲಿ ಪ್ರತಿ‌ನಿತ್ಯ‌ ದೂರವಾಣಿ ಮೂಲಕ  ಆರೋಗ್ಯ ವಿಚಾರಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರಧಾನಿಗೆ ಪತ್ರ ಬರೆಯುವುದರಲ್ಲಿ ಸಿದ್ದರಾಮಯ್ಯ, ಡಿಕೆಶಿ ನಿಸ್ಸೀಮರು: ಬಿ.ವೈ.ವಿಜಯೇಂದ್ರ
ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?