#26/11 ದಾಳಿ: ಪುತ್ರ ಸಂದೀಪ್‌ ನೆನಪಿಸಿಕೊಂಡ ಉನ್ನಿಕೃಷ್ಣನ್‌

Published : Nov 26, 2018, 09:48 AM ISTUpdated : Nov 26, 2018, 10:15 AM IST
#26/11 ದಾಳಿ: ಪುತ್ರ ಸಂದೀಪ್‌ ನೆನಪಿಸಿಕೊಂಡ ಉನ್ನಿಕೃಷ್ಣನ್‌

ಸಾರಾಂಶ

‘ನನ್ನ ಪುತ್ರ ಏನೇ ಕೆಲಸ ಆಯ್ಕೆ ಮಾಡಿಕೊಂಡರೂ ಅದರಲ್ಲಿ ಜಯ ಸಾಧಿಸಬೇಕು ಎಂಬ ಛಲ ಹೊಂದಿರುತ್ತಿದ್ದ. ಇದೇ ಕಾರಣಕ್ಕಾಗಿ ಅವನು ಸಚಿನ್‌ ತೆಂಡೂಲ್ಕರ್‌ ಅವರನ್ನು ಹೆಚ್ಚಾಗಿ ಇಷ್ಟಪಡುತ್ತಿದ್ದ’- ಮೇಜರ್ ಸಂದೀಪ್‌ ಉನ್ನಿಕೃಷ್ಣನ್‌ ಅವರ ತಂದೆ ಉನ್ನಿಕೃಷ್ಣನ್‌

ಬೆಂಗಳೂರು[ನ.26]: 164 ಜನರ ಬಲಿ ಪಡೆದ ಮುಂಬೈ ದಾಳಿಗೆ ಸೋಮವಾರ 10 ವರ್ಷ ತುಂಬಲಿದೆ. ಈ ಹಿನ್ನೆಲೆಯಲ್ಲಿ, ಘಟನೆ ನಡೆದಾಗ ಉಗ್ರರ ವಿರುದ್ಧ ಹೋರಾಡಿ ಮೃತಪಟ್ಟತಮ್ಮ ಪುತ್ರ ಸಂದೀಪ್‌ ಉನ್ನಿಕೃಷ್ಣನ್‌ ಬಗ್ಗೆ ಅವರ ತಂದೆ ಉನ್ನಿಕೃಷ್ಣನ್‌ ನೆನಪು ಮಾಡಿಕೊಂಡಿದ್ದಾರೆ.

ಈ ಬಗ್ಗೆ ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು ‘ನನ್ನ ಪುತ್ರ ಏನೇ ಕೆಲಸ ಆಯ್ಕೆ ಮಾಡಿಕೊಂಡರೂ ಅದರಲ್ಲಿ ಜಯ ಸಾಧಿಸಬೇಕು ಎಂಬ ಛಲ ಹೊಂದಿರುತ್ತಿದ್ದ. ಇದೇ ಕಾರಣಕ್ಕಾಗಿ ಅವನು ಸಚಿನ್‌ ತೆಂಡೂಲ್ಕರ್‌ ಅವರನ್ನು ಹೆಚ್ಚಾಗಿ ಇಷ್ಟಪಡುತ್ತಿದ್ದ,’ ಎಂದು ಸಂದೀಪ್‌ ಉನ್ನಿಕೃಷ್ಣನ್‌ ಅವರ ತಂದೆ ಉನ್ನಿಕೃಷ್ಣನ್‌ ಅವರು ಹೇಳಿದ್ದಾರೆ. ‘ನನ್ನ ಮಗ ಸಂದೀಪ್‌ ಯಾವಾಗಲೂ ದೇಶದ ಕೀರ್ತಿ ಬಗ್ಗೆಯೇ ಯೋಚಿಸುತ್ತಿದ್ದ. ಒಂದು ವೇಳೆ ಕ್ರಿಕೆಟ್‌ನಲ್ಲಿ ಭಾರತ ಸೋಲುಂಡರೆ, ಹೆಚ್ಚು ಅಸಮಾಧಾನಗೊಳ್ಳುತ್ತಿದ್ದ. ಅಲ್ಲದೆ, ಇಸ್ರೋ ಯೋಜನೆ ವಿಫಲವಾದಾಗ ನನ್ನನ್ನೂ ಸಹ ಸಾಂತ್ವನ ಪಡಿಸುತ್ತಿದ್ದ. ಸೋಲು ಎಂಬುದನ್ನು ಆತ ಇಷ್ಟಪಡುತ್ತಿರಲಿಲ್ಲ. ಆತನ ಸೇವಾ ಮನೋಭಾವನೆ ಬಗ್ಗೆ ನನಗೆ ಗೊತ್ತೇ ಇರಲಿಲ್ಲ. ಆತನ ಬ್ಯಾಂಕ್‌ನಲ್ಲಿ ಕೇವಲ 3000-4000 ರು. ಇರುವುದನ್ನು ಕಂಡು, ಸಂದೀಪ್‌ ದುಬಾರಿ ಬೆಲೆಯ ವಸ್ತುಗಳನ್ನು ಖರೀದಿಸುತ್ತಾನೆ ಎಂದುಕೊಂಡಿದ್ದೆ. ಆದರೆ, ತನ್ನ ಸಹೋದ್ಯೋಗಿ ಮತ್ತು ಕಷ್ಟದಲ್ಲಿದ್ದವರಿಗೆ ನೆರವಾಗುತ್ತಿದ್ದ ಎಂಬುದು ಆತನ ಸಹೋದ್ಯೋಗಿಗಳಿಂದಲೇ ಗೊತ್ತಾಯಿತು’ ಎಂದು ಇಸ್ರೋನ ನಿವೃತ್ತ ಅಧಿಕಾರಿಯಾದ ಉನ್ನಿಕೃಷ್ಣನ್‌ ಅವರು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬ್ಯಾಗಲ್ಲಿ ಹೃದಯ ಇಟ್ಕೊಂಡು ಓಡಾಟ: ನೈಸರ್ಗಿಕ ಹೃದಯ ಇಲ್ಲದೇ ಬದುಕುಳಿದಿರುವ ಜಗತ್ತಿನ ಏಕೈಕ ಮಹಿಳೆ ಈಕೆ
ಕೇವಲ 2 ನಿಮಿಷ ಮಗಳ ನೋಡಲು 11ಗಂಟೆಗೆ ಸ್ಟೇಶನ್‌ಗೆ ಬಂದ ತಂದೆ, ಭಾವುಕ ಕ್ಷಣದ ವಿಡಿಯೋ