
ಬಾಗಲಕೋಟೆ(ಸೆ.23): ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕಾಡರಕೊಪ್ಪ ಗ್ರಾಮದ ಅಮೀನಸಾಬ ಬಡೇಖಾನ್ ಎಂಬ ಈ ರೈತ, ಬಾಗಲಕೋಟೆ ನಗರದಲ್ಲಿರೋ ತಮಿಳುನಾಡು ಮೂಲದ ಚೋಳಮಂಡಳಂ ಪೈನಾನ್ಸ್ ಕಂಪನಿಯಲ್ಲಿ 2012ರಲ್ಲಿ ಟ್ರ್ಯಾಕ್ಟರ್ ಖರೀದಿಗೆ ಅಂತ ಸಾಲ ಮಾಡಿದ್ದ. ಅದನ್ನ ಸಮಯಕ್ಕೆ ಸರಿಯಾಗಿ ಪಾವತಿಯೂ ಮಾಡಿದ್ದ. ಆದ್ರೆ ಫೈನಾನ್ಸ್ ನವ್ರು ಸಾಲ ಮರುಪಾವತಿಯಾಗಿಲ್ಲ ಅಂತ ರೈತನ ಮೇಲೆ ಕೇಸ್ ಹಾಕಿದ್ದಾರೆ. ಇದರಿಂದಾಗಿ ಕಂಗಾಲಾದ ರೈತ ಅಮೀನಸಾಬ್ ಹಾಸಿಗೆ ಹಿಡಿದಿದ್ದಾನೆ.
ಈ ಮಧ್ಯೆ ಕಚೇರಿಗೆ ತೆರಳಿದ ರೈತನ ಕುಟುಂಬ, ಸಮರ್ಪಕ ಉತ್ತರ ನೀಡದ ಕಂಪನಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ನಂತ್ರ ರೈತ ಸಾಲ ತುಂಬಿದ ಬಗ್ಗೆ ಮಾಹಿತಿ ಖಚಿತಪಡಿಸಿದ್ದಾರೆ. ಆದ್ರೆ ಮೇಲಧಿಕಾರಿಗಳ ಎಡವಟ್ಟಿನ ಪರಿಣಾಮ ರೈತನಿಗೆ ಅರೆಸ್ಟ್ ವಾರೆಂಟ್ ಜಾರಿಯಾಗಿದ್ದು, ರೈತನಿಗೆ ನ್ಯಾಯ ಸಿಗಬೇಕು ಅಂತ ಸ್ಥಳೀಯರು ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ಹೊರರಾಜ್ಯದ ಪೈನಾನ್ಸ್ ಕಂಪನಿಯೊಂದರ ಅವಾಂತರಕ್ಕೆ ರಾಜ್ಯದ ಅನ್ನದಾತನೊಬ್ಬ ಹಾಸಿಗೆ ಹಿಡಿದಿದ್ದು, ಬಂಧನ ಭೀತಿ ಎದುರಿಸುತ್ತಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.