ಕಂಪನಿ ಎಡವಟ್ಟು, ಸಾಲ ತುಂಬಿದ್ರೂ ಬಂತು ಅರೆಸ್ಟ್ ವಾರಂಟ್: ಮಾಡದಿರೋ ತಪ್ಪಿಗೆ ಹಾಸಿಗೆ ಹಿಡಿದ ಅನ್ನದಾತ

Published : Sep 23, 2017, 08:01 AM ISTUpdated : Apr 11, 2018, 12:49 PM IST
ಕಂಪನಿ ಎಡವಟ್ಟು, ಸಾಲ ತುಂಬಿದ್ರೂ ಬಂತು ಅರೆಸ್ಟ್ ವಾರಂಟ್: ಮಾಡದಿರೋ ತಪ್ಪಿಗೆ ಹಾಸಿಗೆ ಹಿಡಿದ ಅನ್ನದಾತ

ಸಾರಾಂಶ

ಇಲ್ಲೊಬ್ಬ ರೈತ ತಾನು ಪಡೆದ ಸಾಲಕ್ಕೆ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡಿದ್ರೂ ಸಹ, ತಮಿಳುನಾಡಿನ ಪೈನಾನ್ಸ್​​ ಕಂಪನಿಯೊಂದು ಆತನ ಮೇಲೆ ಕೇಸ್​ ಹಾಕಿದೆ. ಬಂಧನ ಬೀತಿಯಿಂದಾಗಿ ಕಂಗೆಟ್ಟಿರೋ ಅನ್ನದಾತ ಇದೀಗ ಹಾಸಿಗೆ ಹಿಡಿದಿದ್ದಾನೆ.

ಬಾಗಲಕೋಟೆ(ಸೆ.23): ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕಾಡರಕೊಪ್ಪ ಗ್ರಾಮದ ಅಮೀನಸಾಬ ಬಡೇಖಾನ್​ ಎಂಬ ಈ ರೈತ, ಬಾಗಲಕೋಟೆ ನಗರದಲ್ಲಿರೋ  ತಮಿಳುನಾಡು ಮೂಲದ ಚೋಳಮಂಡಳಂ ಪೈನಾನ್ಸ್​ ಕಂಪನಿಯಲ್ಲಿ 2012ರಲ್ಲಿ ಟ್ರ್ಯಾಕ್ಟರ್ ಖರೀದಿಗೆ ಅಂತ ​ಸಾಲ ಮಾಡಿದ್ದ. ಅದನ್ನ ಸಮಯಕ್ಕೆ ಸರಿಯಾಗಿ ಪಾವತಿಯೂ ಮಾಡಿದ್ದ.   ಆದ್ರೆ ಫೈನಾನ್ಸ್ ನವ್ರು ಸಾಲ ಮರುಪಾವತಿಯಾಗಿಲ್ಲ ಅಂತ ರೈತನ ಮೇಲೆ ಕೇಸ್ ಹಾಕಿದ್ದಾರೆ. ಇದರಿಂದಾಗಿ ಕಂಗಾಲಾದ ರೈತ ಅಮೀನಸಾಬ್ ಹಾಸಿಗೆ ಹಿಡಿದಿದ್ದಾನೆ.

ಈ ಮಧ್ಯೆ ಕಚೇರಿಗೆ ತೆರಳಿದ ರೈತನ ಕುಟುಂಬ, ಸಮರ್ಪಕ ಉತ್ತರ ನೀಡದ ಕಂಪನಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ನಂತ್ರ ರೈತ ಸಾಲ ತುಂಬಿದ ಬಗ್ಗೆ ಮಾಹಿತಿ ಖಚಿತಪಡಿಸಿದ್ದಾರೆ. ಆದ್ರೆ ಮೇಲಧಿಕಾರಿಗಳ ಎಡವಟ್ಟಿನ ಪರಿಣಾಮ ರೈತನಿಗೆ ಅರೆಸ್ಟ್ ವಾರೆಂಟ್​ ಜಾರಿಯಾಗಿದ್ದು, ರೈತನಿಗೆ ನ್ಯಾಯ ಸಿಗಬೇಕು ಅಂತ ಸ್ಥಳೀಯರು ಆಗ್ರಹಿಸಿದ್ದಾರೆ.

ಒಟ್ಟಿನಲ್ಲಿ ಹೊರರಾಜ್ಯದ ಪೈನಾನ್ಸ್​ ಕಂಪನಿಯೊಂದರ ಅವಾಂತರಕ್ಕೆ ರಾಜ್ಯದ ಅನ್ನದಾತನೊಬ್ಬ ಹಾಸಿಗೆ ಹಿಡಿದಿದ್ದು, ಬಂಧನ ಭೀತಿ  ಎದುರಿಸುತ್ತಿದ್ದಾನೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಹಾರಾಷ್ಟ್ರದಲ್ಲಿ ಬಿಜೆಪಿ ಗೆದ್ದರೂ ಸೂರ್ಯವಂಶಿ ಕುಟುಂಬಕ್ಕೆ ಅಘಾತ, ಆರಕ್ಕೆ 6 ಸದಸ್ಯರಿಗೆ ಸೋಲು
ಬಿಡದಿ ಟೌನ್ ಶಿಪ್ ಜಿದ್ದಿನಿಂದ ಅನುಷ್ಠಾನ ಮಾಡುತ್ತಿಲ್ಲ: ಶಾಸಕ ಎಚ್.ಸಿ.ಬಾಲಕೃಷ್ಣ