ನ್ಯಾಯಾಲಯ ಆದೇಶ: ರಾತೋರಾತ್ರಿ ಮನೆ ಖಾಲಿ ಮಾಡಿಸಿದ ಪೊಲೀಸರು; ಬೀದಿಯಲ್ಲೇ ರಾತ್ರಿ ಕಳೆದ ಮಕ್ಕಳು, ಮಹಿಳೆಯರು

Published : Feb 17, 2017, 04:25 AM ISTUpdated : Apr 11, 2018, 12:55 PM IST
ನ್ಯಾಯಾಲಯ ಆದೇಶ: ರಾತೋರಾತ್ರಿ ಮನೆ ಖಾಲಿ ಮಾಡಿಸಿದ ಪೊಲೀಸರು; ಬೀದಿಯಲ್ಲೇ ರಾತ್ರಿ ಕಳೆದ ಮಕ್ಕಳು, ಮಹಿಳೆಯರು

ಸಾರಾಂಶ

ಮನೆಗೆ ಸಂಬಂಧಿಸಿದಂತೆ ರೇಣುಕಾ ಚವ್ಹಾಣ್ ಹಾಗೂ ರವಿ ಲಮಾಣಿ ಮಧ್ಯೆ ವಿವಾದವಿತ್ತು. ಕೋರ್ಟ್​ ತೀರ್ಪಿನ ಪ್ರಕಾರ ರೇಣುಕಾ ಅವರು ಮನೆ ಖಾಲಿ ಮಾಡಿಕೊಡಬೇಕಿತ್ತು. ರೇಣುಕಾ ಅವರ ಸಾಮಾನುಗಳನ್ನು ತೆರವುಗೊಳಿಸಿ ಬೀಗ ಹಾಕುವಂತೆ ಕೋರ್ಟ್​ ಪೊಲೀಸರಿಗೆ ಆದೇಶಿಸಿತ್ತು.

ಬಾಗಲಕೋಟೆ (ಫೆ.17): ನ್ಯಾಯಾಲಯ ನೀಡಿದ ಆದೇಶಕ್ಕೆ ಕುಟುಂಬವೊಂದು ಬೀದಿಗೆ ಬಿದ್ದ ಘಟನೆ ಬಾಗಲಕೋಟೆ ನಗರದ ದುರ್ಗಾವಿಹಾರದ ಬಳಿ ನಡೆದಿದೆ.

ಕಳೆದ ನಲವತ್ತು ವರ್ಷಗಳಿಂದ ಮನೆಯಲ್ಲಿ ವಾಸವಾಗಿದ್ದ ರೇಣುಕಾ ಚವ್ಹಾಣ್ ಎಂಬವರ ಕುಟುಂಬ ಬೀದಿಪಾಲಾಗಿದೆ.

ಮನೆಗೆ ಸಂಬಂಧಿಸಿದಂತೆ ರೇಣುಕಾ ಚವ್ಹಾಣ್ ಹಾಗೂ ರವಿ ಲಮಾಣಿ ಮಧ್ಯೆ ವಿವಾದವಿತ್ತು. ಕೋರ್ಟ್​ ತೀರ್ಪಿನ ಪ್ರಕಾರ ರೇಣುಕಾ ಅವರು ಮನೆ ಖಾಲಿ ಮಾಡಿಕೊಡಬೇಕಿತ್ತು. ರೇಣುಕಾ ಅವರ ಸಾಮಾನುಗಳನ್ನು ತೆರವುಗೊಳಿಸಿ ಬೀಗ ಹಾಕುವಂತೆ ಕೋರ್ಟ್​ ಪೊಲೀಸರಿಗೆ ಆದೇಶಿಸಿತ್ತು.

ಹೀಗಾಗಿ ನ್ಯಾಯಾಲಯದ ಆದೇಶದಂತೆ ಪೊಲೀಸರು ನಿನ್ನೆ ರಾತ್ರಿ ಮನೆ ಖಾಲಿ ಮಾಡಿಸಿದ್ದಾರೆ. ಮನೆಯಲ್ಲಿದ್ದ ವಸ್ತುಗಳನ್ನೆಲ್ಲ ಹೊರ ಹಾಕಿದ್ದಾರೆ. ಇದರಿಂದಾಗಿ ಕುಟುಂಬದ ಮಕ್ಕಳು, ಮಹಿಳೆಯರೆಲ್ಲ ರಾತ್ರಿಯೆಲ್ಲ ಮನೆ ಹೊರಗೇ ಜಾಗರಣೆ ಮಾಡುತ್ತಾ, ಕಣ್ಣೀರಿಡುತ್ತಿದ್ದ ದೃಶ್ಯ ಮನಕಲುಕುವಂತಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತೀರ್ಥಹಳ್ಳಿಯ ವಿದ್ಯಾರ್ಥಿನಿಗೆ ಹೃದಯಾಘಾತ, ಶೃಂಗೇರಿ ಕಾಲೇಜು ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದು ಸಾವು
ಪಿಯುಸಿ ಸರ್ಟಿಫಿಕೇಟ್ ಇದ್ದರೆ ಮಾತ್ರ ವಾಹನಕ್ಕೆ ಪೆಟ್ರೋಲ್ -ಡೀಸೆಲ್, ಡಿ.18ರಿಂದ ಹೊಸ ನಿಯಮ