
ಮಡಿಕೇರಿ (ಜ.18): ಕೊಡಗಿನ ಪೊನ್ನಂಪೇಟೆಯ ಮನೆಯೊಂದಕ್ಕೆ ವಿಶೇಷ ಅತಿಥಿಗಳು ಆಗಮಿಸಿದ್ದವು.
ಸಾಮಾನ್ಯವಾಗಿ ಒಬ್ಬೊಬ್ಬರೇ ಕಾಣಿಸಿಕೊಳ್ಳುವ ಇವರು ಸಂಸಾರ ಸಮೇತ ಆಗಮಿಸಿದ್ದರು. ಅಷಕ್ಕೂ ಇಲ್ಲಿ ಕಾಣಿಸಿಕೊಂಡಿದ್ದು ಹಾವಿನ ಸಂಸಾರ.
ಪೊನ್ನಂಪೇಟೆಯ ಮದನ್ ಮತ್ತು ಮನ್ಮಥ್ ಎಂಬುವವರ ಮನೆಯಲ್ಲಿ ಮೂರು ನಾಗರ ಹಾವುಗಳು ಪ್ರತ್ಯಕ್ಷವಾಗಿದ್ದವು. ಬೆಳಿಗ್ಗಿನ ಹೊತ್ತಿಗೆ ಮನೆಯ ಆವರಣದಲ್ಲಿ ಒಟ್ಟೊಟ್ಟಿಗೆ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದವು.
ಅಕ್ಕಪಕ್ಕದ ಮನೆಗಳಿಗೆ ಏಕಾಏಕಿ ಮೂರು ಹಾವುಗಳು ಬಂದಿರುವುದು ಅಚ್ಚರಿ ಮೂಡಿಸಿದೆ. ಬೆಳ್ಳಂಬೆಳಗ್ಗೆ ಹಾವುಗಳನ್ನು ಕಂಡ ಮನೆಯವರು ತಮ್ಮ ಸ್ನೇಹಿತರಿಗೆ ಮಾಹಿತಿ ನೀಡಿ ಉರಗ ತಜ್ಞರಾದ ನವೀನ್ ಮತ್ತು ಸುನೀಲ್ ಎಂಬುವವರು ಕರೆಸಿ ಹಾವುಗಳನ್ನು ಸೆರೆ ಹಿಡಿದು ನಾಗರಹೊಳೆ ಅರಣ್ಯ ವ್ಯಾಪ್ತಿಗೆ ಒಳಪಡುವ ತಿತಿಮತಿ ಅರಣ್ಯಕ್ಕೆ ಸುರಕ್ಷಿತವಾಗಿ ಬಿಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.