ಮಣ್ಣು ಪಾಲಾಗಿದ್ದ ಮದುವೆಗೆ ಇಟ್ಟಿದ್ದ ಚಿನ್ನ ಕೊನೆಗೂ ಕೈ ಸೇರಿತು

Published : Aug 24, 2018, 11:24 AM ISTUpdated : Sep 09, 2018, 09:09 PM IST
ಮಣ್ಣು ಪಾಲಾಗಿದ್ದ ಮದುವೆಗೆ ಇಟ್ಟಿದ್ದ ಚಿನ್ನ ಕೊನೆಗೂ ಕೈ ಸೇರಿತು

ಸಾರಾಂಶ

ಮಗಳ ಮದುವೆಗಾಗಿ ಇರಿಸಿದ್ದ ಚಿನ್ನ ಕೊನೆಗೂ ಮನೆಯವರ ಕೈ ಸೇರಿದೆ. ಮಣ್ಣಿನಡಿಯಲ್ಲಿ ಹೂತು ಹೋಗಿದ್ದ ಚಿನ್ನ ಬಂದು ಹುಡುಕಿದಾಗ ಅಲ್ಲಿಯೇ ಪತ್ತೆಯಾಗಿದೆ. 

ಮಡಿಕೇರಿ: ಮಗಳ ಮದುವೆಗೆಂದು ಕುಟುಂಬವೊಂದು ಸಂಗ್ರಹಿಸಿಟ್ಟಿದ್ದ ಹಣ, ಒಡವೆಗಳು ಭೂಕುಸಿತದ ವೇಳೆ ಮನೆ ಸಮೇತ ಮಣ್ಣು ಪಾಲಾಗಿತ್ತು. ಮಳೆ ಕಡಿಮೆಯಾಗುತ್ತಿದ್ದಂತೆ ಮನೆ ಕುಸಿದ ಜಾಗದಲ್ಲಿ ಗುರುವಾರ ಹುಡುಕಾಟ ನಡೆಸಿದಾಗ ಅದೃಷ್ಟವಶಾತ್‌ ಒಡವೆಗಳೆಲ್ಲ ಸಿಕ್ಕಿವೆ!

ಹೌದು, ತಾಲೂಕಿನ ಹಟ್ಟಿಹೊಳೆಯ ಉಮೇಶ್‌ ಶೆಟ್ಟಿದಂಪತಿಯ ಹಿರಿಯ ಪುತ್ರಿ ನವ್ಯಾ ಅವರ ವಿವಾಹ ಆ.30ರಂದು ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಕುಟುಂಬದವರು ಮದುವೆಗಾಗಿ ಒಂದಷ್ಟುಒಡವೆ, ಹಣ ತೆಗೆದಿಟ್ಟಿದ್ದರು. ಆದರೆ ಇತ್ತೀಚೆಗೆ ಸಂಭವಿಸಿದ ಪ್ರಾಕೃತಿಕ ವಿರೋಪದಲ್ಲಿ ಇವರ ಮನೆ ಸಂಪೂರ್ಣ ಹಾನಿಗೊಳಗಾಗಿತ್ತು. ಪರಿಣಾಮ ಪೋಷಕರು ಮಗಳ ಮದುವೆಗೆ ಕೂಡಿಟ್ಟಿದ್ದ ಚಿನ್ನ, ಹಣ, ಬಟ್ಟೆಗಳು ತುಂಬಿದ್ದ ಬೀರು ಮಣ್ಣಿನಡಿ ಹೂತು ಹೋಗಿತ್ತು. ಮಳೆ ಕಡಿಮೆಯಾಗುತ್ತಿದ್ದಂತೆ ಮಣ್ಣಿನಡಿ ಹೂತುಹೋಗಿದ್ದ ಮನೆಯ ಸಾಮಗ್ರಿಗಳನ್ನು ಮೇಲೆತ್ತಲು ಸ್ಥಳೀಯರು ಹರಸಾಹಸ ಪಟ್ಟರು.

ನಂತರ ಶಾಸಕ ಅಪ್ಪಚ್ಚು ರಂಜನ್‌ ಅವರು ಜೆಸಿಬಿ ಮೂಲಕ ಮಣ್ಣು ತೆರವುಗೊಳಿಸಿದಾಗ ಎಲ್ಲಾ ಚಿನ್ನಾಭರಣಗಳು ದೊರಕಿವೆ. ಆದರೆ ಹಣ ಪತ್ತೆಯಾಗಲಿಲ್ಲ. ಈ ಭಾಗದಲ್ಲಿ ಗುಡ್ಡ ಕುಸಿದ ಪರಿಣಾಮ 10 ಎಕರೆಯಷ್ಟುಪ್ರದೇಶ ಭೂಕುಸಿತಕ್ಕೆ ಒಳಗಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತೀರ್ಥಹಳ್ಳಿಯ ವಿದ್ಯಾರ್ಥಿನಿಗೆ ಹೃದಯಾಘಾತ, ಶೃಂಗೇರಿ ಕಾಲೇಜು ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದು ಸಾವು
ಪಿಯುಸಿ ಸರ್ಟಿಫಿಕೇಟ್ ಇದ್ದರೆ ಮಾತ್ರ ವಾಹನಕ್ಕೆ ಪೆಟ್ರೋಲ್ -ಡೀಸೆಲ್, ಡಿ.18ರಿಂದ ಹೊಸ ನಿಯಮ