
ಬೆಂಗಳೂರು (ಜು. 18): ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವೇದಿಕೆಯಲ್ಲಿ ಅಳುವಾಗ ಅವರ ಕೈಲಿ ಕರ್ಚೀಫ್ ಇತ್ತು. ಹೀಗಾಗಿ ಅವರು ಅತ್ತಿದ್ದು ವಿಕ್ಸ್ ಒರೆಸಿಕೊಂಡ ಕರ್ಚೀಫಿ ನಿಂದಲೋ ಅಥವಾ ಸಹಜವಾಗಿಯೋ ಎಂದು ಸಚಿವ ಜಮೀರ್ಗೆ ಬಿಜೆಪಿ ನಾಯಕರು ಪ್ರಶ್ನಿಸಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದ ಜಮೀರ್, ಒಮ್ಮೆ ಕುಮಾರಸ್ವಾಮಿ ವೇದಿಕೆಯಲ್ಲಿ ಅಳುವಾಗ ಕರ್ಚೀಫ್ ನೆಲಕ್ಕೆ ಬಿದ್ದಿತ್ತು. ನಾನು ಹೆಕ್ಕಿಕೊಟ್ಟೆ. ಆಗ ಕರ್ಚೀಫಿನಿಂದ ಘಮ್ಮೆಂದು ವಿಕ್ಸ್ ಘಾಟು ಬಂತು. ಅವರು ಅಳುವುದು ಅದರ ಸಹಾಯದಿಂದ ಎಂಬುದು ಆಗಲೇ ಗೊತ್ತಾಯ್ತು ಎಂದು ಹೇಳಿದ್ದರು. ಹೀಗಾಗಿ ಬಿಜೆಪಿ ನಾಯಕರು ಈ ಬಾರಿಯೂ ಎಚ್ಡಿಕೆ ವಿಕ್ಸ್ ನಿಂದಲೇ ಅತ್ತಿದ್ದಾರೆಯೇ ಎಂಬುದನ್ನು ತಿಳಿದುಕೊಂಡು ಹೇಳಿ ಎಂದು ಜಮೀರ್ಗೆ ಕೇಳಿರುವುದು ಸುಳ್ಸುದ್ದಿ ಮೂಲಗಳಿಗೆ ಗೊತ್ತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.