Fact Check: 125 ಕೆ.ಜಿ ಚಿನ್ನಾಭರಣ ಧರಿಸಿರುವ ತಿರುಪತಿ ದೇವಾಲಯದ ಪೂಜಾರಿ?

Published : Sep 21, 2019, 09:19 AM ISTUpdated : Sep 21, 2019, 09:47 AM IST
Fact Check: 125 ಕೆ.ಜಿ ಚಿನ್ನಾಭರಣ ಧರಿಸಿರುವ ತಿರುಪತಿ ದೇವಾಲಯದ ಪೂಜಾರಿ?

ಸಾರಾಂಶ

ಮೈಮೇಲೆ ಅಗಾಧ ಪ್ರಮಾಣದ ಚಿನ್ನಾಭರಣಗಳನ್ನು ಹೇರಿಕೊಂಡಿರುವ ವ್ಯಕ್ತಿಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹೀಗೆ ಬಂಗಾರದಲ್ಲೇ ಮುಳುಗಿರುವ ವ್ಯಕ್ತಿ ಆಂಧ್ರಪ್ರದೇಶದ ತಿರುಪತಿ ವೆಂಕಟರಮಣ ದೇವಸ್ಥಾನದ ಪ್ರಮುಖ ಪೂಜಾರಿ ಎಂದು ಹೇಳಲಾಗಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?   

ಮೈಮೇಲೆ ಅಗಾಧ ಪ್ರಮಾಣದ ಚಿನ್ನಾಭರಣಗಳನ್ನು ಹೇರಿಕೊಂಡಿರುವ ವ್ಯಕ್ತಿಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹೀಗೆ ಬಂಗಾರದಲ್ಲೇ ಮುಳುಗಿರುವ ವ್ಯಕ್ತಿ ಆಂಧ್ರಪ್ರದೇಶದ ತಿರುಪತಿ ವೆಂಕಟರಮಣ ದೇವಸ್ಥಾನದ ಪ್ರಮುಖ ಪೂಜಾರಿ ಎಂದು ಹೇಳಲಾಗಿದೆ.

ಈ ವ್ಯಕ್ತಿ ಧರಿಸಿರುವ ಚಿನ್ನಾಭರಣಗಳು ಸುಮಾರು 125 ಕೆ.ಜಿ ಇವೆ ಎಂದು ಹೇಳಲಾಗಿದೆ. ಹಾಗೆಯೇ ಚಿನ್ನಾಭರಣ ಧರಿಸಿ ವಧುವಿನಂತೆ ಸಿಂಗಾರಗೊಂಡಿರುವ ಮೂವರು ಮಹಿಳೆಯರ ಫೋಟೋಗಳೊಂದಿಗೆ ಈ ವ್ಯಕ್ತಿ ಫೋಟೋವನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ಪೋಸ್ಟ್‌ ಮಾಡಲಾಗುತ್ತಿದೆ.

ಇದೀಗ ಟ್ವೀಟರ್‌ ಮತ್ತು ಫೇಸ್‌ಬುಕ್‌ನಲ್ಲಿ ವೈರಲ್‌ ಆಗುತ್ತಿದೆ. ಮೀನಾ ಕುಮಾರಿ ಎಂಬುವವರ ಈ ಫೇಸ್‌ಬುಕ್‌ ಪೋಸ್ಟ್‌ 2018ರಿಂದ ಈಚೆಗೆ 67,000 ಬಾರಿ ಶೇರ್‌ ಆಗಿದೆ.

ಆದರೆ ನಿಜಕ್ಕೂ ಅಗಾಧ ಪ್ರಮಾಣದ ಬಂಗಾರವನ್ನು ಧರಿಸಿರುವ ವ್ಯಕ್ತಿ ತಿರುಪತಿ ದೇವಾಲಯದ ಪ್ರಮುಖ ಪೂಜಾರಿಯೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ. ಆಲ್ಟ್‌ ನ್ಯೂಸ್‌ ಸುದ್ದಿ ಸಂಸ್ಥೆಯು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಪಾಕಿಸ್ತಾನಿ ನಿವಾಸಿ ಅಮ್ಜಾದ್‌ ಸಹೀದ್‌ ಎಂಬುವವರು ಫೇಸ್‌ಬುಕ್‌ ಪೋಸ್ಟ್‌ ಲಭ್ಯವಾಗಿದೆ. ತಾನು ಜ್ಯುವೆಲರಿ ಮಹಲ್‌ನ ಸಿಇಒ ಎಂದು ತಮ್ಮ ಪ್ರೊಫೈಲ್‌ನಲ್ಲಿ ಬರೆದುಕೊಂಡಿದ್ದಾರೆ.

ಅವರ ಪೇಜ್‌ನಲ್ಲಿ ಈ ರೀತಿಯ ಸಾಕಷ್ಟುಫೋಟೋಗಳಿವೆ. ತಮ್ಮ ಟ್ವೀಟರ್‌ ಖಾತೆಯಲ್ಲೂ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇನ್ನು ವಧುಗಳಂತೆ ಸಿಂಗರಿಸಿಕೊಂಡಿರುವ ಮೂವರು ಮಹಿಳೆಯರ ಫೋಟೋ 3 ವರ್ಷಗಳಿಂದಲೂ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ಇದರ ಮೂಲ ಲಭ್ಯವಾಗಿಲ್ಲ. ಒಟ್ಟಾರೆ ಪಾಕಿಸ್ತಾನಿ ವ್ಯಕ್ತಿಯ ಫೋಟೋವನ್ನು ತಿರುಪತಿ ದೇವಾಲಯದ ಪೂಜಾರಿ ಎಂದು ಸುಳ್ಳುಸುದ್ದಿ ಹರಡಲಾಗುತ್ತಿದೆ.

- ವೈರಲ್ ಚೆಕ್ 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೆಸರು ಸರ್ವಜ್ಞ: ಹಿರಿಯ ಆಟಗಾರನ ಸೋಲಿಸಿ ಜಾಗತಿಕ ಚೆಸ್ ಶ್ರೇಯಾಂಕ ಪ್ರವೇಶಿಸಿದ 3 ವರ್ಷದ ಪೋರ
ಕೇಂದ್ರ ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ: ಸಂಸದ ಯದುವೀರ್