Fact Check : ಮನಮೋಹನ್ ಸಿಂಗ್‌ಗೆ ಕೇಕ್‌ ಕತ್ತರಿಸಲೂ ಬಿಡ್ಲಿಲ್ವಾ ರಾಹುಲ್ ಗಾಂಧಿ?

Published : Sep 30, 2019, 09:19 AM IST
Fact Check : ಮನಮೋಹನ್ ಸಿಂಗ್‌ಗೆ ಕೇಕ್‌ ಕತ್ತರಿಸಲೂ ಬಿಡ್ಲಿಲ್ವಾ ರಾಹುಲ್ ಗಾಂಧಿ?

ಸಾರಾಂಶ

ಡಾ.ಮನಮೋಹನ ಸಿಂಗ್‌ ಪ್ರಧಾನಿಯಾಗಿದ್ದಾಗ ಅವರಿಗೆ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಯಾವುದಕ್ಕೂ ಸ್ವಾತಂತ್ರ್ಯ ನೀಡುತ್ತಿರಲಿಲ್ಲ ಎಂಬ ಟೀಕೆ ಜನಜನಿತವಾಗಿತ್ತು. ಈಗ ಮಾಜಿ ಪ್ರಧಾನಿಯಾದ ಮೇಲೂ ಅವರಿಗೆ ಗಾಂಧಿ ಕುಟುಂಬದವರು ಸ್ವಾತಂತ್ರ್ಯ ನೀಡುತ್ತಿಲ್ಲ, ಮೊನ್ನೆ ಮನಮೋಹನ ಸಿಂಗ್‌ ಅವರ ಹುಟ್ಟುಹಬ್ಬದ ದಿನ ಅವರಿಗೆ ಕೇಕ್‌ ಕಟ್‌ ಮಾಡುವುದಕ್ಕೂ ಬಿಡದೆ ರಾಹುಲ್‌ ಗಾಂಧಿ ತಾವೇ ಕಟ್‌ ಮಾಡಿದರು ಎಂಬ ವಿಡಿಯೋವೊಂದು ಇದೀಗ ವೈರಲ್‌ ಆಗಿದೆ. ನಿಜಾನಾ ಈ ಸುದ್ದಿ? 

ಡಾ. ಮನಮೋಹನ ಸಿಂಗ್‌ ಪ್ರಧಾನಿಯಾಗಿದ್ದಾಗ ಅವರಿಗೆ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಯಾವುದಕ್ಕೂ ಸ್ವಾತಂತ್ರ್ಯ ನೀಡುತ್ತಿರಲಿಲ್ಲ ಎಂಬ ಟೀಕೆ ಜನಜನಿತವಾಗಿತ್ತು. ಈಗ ಮಾಜಿ ಪ್ರಧಾನಿಯಾದ ಮೇಲೂ ಅವರಿಗೆ ಗಾಂಧಿ ಕುಟುಂಬದವರು ಸ್ವಾತಂತ್ರ್ಯ ನೀಡುತ್ತಿಲ್ಲ, ಮೊನ್ನೆ ಮನಮೋಹನ ಸಿಂಗ್‌ ಅವರ ಹುಟ್ಟುಹಬ್ಬದ ದಿನ ಅವರಿಗೆ ಕೇಕ್‌ ಕಟ್‌ ಮಾಡುವುದಕ್ಕೂ ಬಿಡದೆ ರಾಹುಲ್‌ ಗಾಂಧಿ ತಾವೇ ಕಟ್‌ ಮಾಡಿದರು ಎಂಬ ವಿಡಿಯೋವೊಂದು ಇದೀಗ ವೈರಲ್‌ ಆಗಿದೆ.

ಸೆ.26ರಂದು ಮನಮೋಹನ ಸಿಂಗ್‌ ಅವರ ಹುಟ್ಟುಹಬ್ಬವಿತ್ತು. ಅಂದು ರಿಶಿ ಬೆಗ್ರೆ ಎಂಬುವರು ಸೋಷಿಯಲ್‌ ಮೀಡಿಯಾದಲ್ಲಿ ಒಂದು ವಿಡಿಯೋ ಪೋಸ್ಟ್‌ ಮಾಡಿದ್ದಾರೆ. ಅದರಲ್ಲಿ ಮನಮೋಹನ ಸಿಂಗ್‌ರ ಮುಂದಿರುವ ಕೇಕನ್ನು ಮೊದಲಿಗೆ ಸಿಂಗ್‌ ಅವರ ಕೈಹಿಡಿದು ರಾಹುಲ್‌ ಕತ್ತರಿಸಲು ಯತ್ನಿಸುತ್ತಾರೆ.

 

ನಂತರ ಸಿಂಗ್‌ ಅವರಿಂದ ತಾವೇ ಚಾಕು ತೆಗೆದುಕೊಂಡು ಕೇಕ್‌ ಕತ್ತರಿಸುತ್ತಾರೆ. ‘ಮನಮೋಹನ ಸಿಂಗ್‌ ಅವರಿಗೆ ತಮ್ಮದೇ ಕೇಕ್‌ ಕತ್ತರಿಸುವ ಸ್ವಾತಂತ್ರ್ಯವೂ ಇಲ್ಲ’ ಎಂದು ಬೆಗ್ರೆ ಇದಕ್ಕೆ ಟಿಪ್ಪಣಿ ಬರೆದಿದ್ದಾರೆ. ಈ ವಿಡಿಯೋಕ್ಕೆ 7000ಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ.

ಆದರೆ, ವಾಸ್ತವದಲ್ಲಿ ಇದು ಮನಮೋಹನ ಸಿಂಗ್‌ ಅವರ ಹುಟ್ಟುಹಬ್ಬದ ವಿಡಿಯೋವೇ ಅಲ್ಲ. 2018ರ ಡಿಸೆಂಬರ್‌ 28ರಂದು ಕಾಂಗ್ರೆಸ್‌ ಪಕ್ಷದ ಸಂಸ್ಥಾಪನೆ ದಿನದ ವಿಡಿಯೋ. ಕಳೆದ ವರ್ಷ ಸ್ವತಃ ಕಾಂಗ್ರೆಸ್‌ ಪಕ್ಷದ ವೆಬ್‌ಸೈಟಿನಲ್ಲೇ ಈ ವಿಡಿಯೋ ಪೋಸ್ಟ್‌ ಮಾಡಲಾಗಿತ್ತು. ವಿಚಿತ್ರವೆಂದರೆ ಬೆಗ್ರೆ ಅವರು 2018ರಲ್ಲೂ ಈ ವಿಡಿಯೋ ಟ್ವೀಟ್‌ ಮಾಡಿದ್ದರು. ಈಗ ಸುಳ್ಳು ಕ್ಯಾಪ್ಷನ್‌ ಬರೆದು ಮತ್ತೆ ಟ್ವೀಟ್‌ ಮಾಡಿದ್ದಾರೆ.

 - ವೈರಲ್ ಚೆಕ್ 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಧರ ವಿಶ್ವಕಪ್ ಹೀರೋಯಿನ್ಸ್‌ಗಳಿಗೆ ದೊಡ್ಮನೆಯಿಂದ ಗೌರವ: ರಾಜ್ ಕುಟುಂಬದ ಆತಿಥ್ಯಕ್ಕೆ ಮೈಮರೆತ ಚಾಂಪಿಯನ್ನರು!
Vastu Shastra: ನೆನಪಿಡಿ, ಅದೃಷ್ಟ ಕೈಹಿಡಿಯಲು ದೇವಸ್ಥಾನಕ್ಕೆ ಈ ಮೂರು ವಸ್ತುಗಳನ್ನ ಗುಟ್ಟಾಗಿ ದಾನ ಮಾಡ್ಬೇಕು!